Asianet Suvarna News Asianet Suvarna News

3 ತಿಂಗಳಿಂದ ನಡೆಸುತ್ತಿದ್ದ ಹೋರಾಟ ಕೈಬಿಟ್ಟ ಟೊಯೋಟಾ ಕಾರ್ಮಿಕರು

ಮುಷ್ಕರವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದ ಟಿಕೆಎಂ ನೌಕರರ ಸಂಘ| ಬದ​ಲಾದ ಸ್ವರೂ​ಪ​ದಲ್ಲಿ ಹೋರಾಟ ಮುಂದು​ವ​ರರಿಕೆ| ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಮರ​ಳಿ​ದ 3,350 ನೌಕರರ ಪೈಕಿ ಬಹುತೇಕ ಸದಸ್ಯರು| ಕಳೆದ ಮೂರು ತಿಂಗ​ಳಿಗೂ ಹೆಚ್ಚಿನ ಕಾಲ ಮುಷ್ಕರ ನಿರತ​ರಾ​ಗಿದ್ದ ನೌಕ​ರರ ಕುಟುಂಬ​ಗ​ಳಿಗೆ ಆರ್ಥಿ​ಕ​ವಾಗಿ ತೊಂದ​ರೆ|

Toyota Workers Stop the Strike at Ramanagara grg
Author
Bengaluru, First Published Mar 3, 2021, 7:07 AM IST

ರಾಮ​ನ​ಗ​ರ(ಮಾ.03): ಟೊಯೋಟಾ ಕಿರ್ಲೋ​ಸ್ಕರ್‌ ಮೋಟಾರ್‌ ಕಂಪ​ನಿಯ ನೌಕ​ರರು ತಮ್ಮ ಮುಷ್ಕ​ರ​ವನ್ನು ಅಧಿ​ಕೃ​ತ​ವಾಗಿ ಕೈಬಿ​ಟ್ಟಿ​ದ್ದಾ​ರೆ ಎಂದು ಕಂಪ​ನಿಯ ವಕ್ತಾ​ರರು ಪತ್ರಿಕಾ ಹೇಳಿಕೆ ಬಿಡು​ಗಡೆ ಮಾಡಿ​ದ್ದಾರೆ. ಆದರೆ ಟಿಕೆಎಂ ನೌಕ​ರರ ಸಂಘದ ಅಧ್ಯಕ್ಷ ಪ್ರಸನ್ನ ಚಕ್ಕರೆ ಬದ​ಲಾದ ಸ್ವರೂ​ಪ​ದಲ್ಲಿ ಹೋರಾಟ ಮುಂದು​ವ​ರೆ​ಯ​ಲಿದೆ ಎಂದು ಸುದ್ದಿ​ಗಾ​ರ​ರಿಗೆ ತಿಳಿ​ಸಿ​ದ್ದಾರೆ.

ಟಿಕೆಎಂ ನೌಕರರ ಸಂಘವು ಮುಷ್ಕರವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈಗಾಗಲೇ 3,350 ನೌಕರರ ಪೈಕಿ ಬಹುತೇಕ ಸದಸ್ಯರು ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಮರ​ಳಿ​ದ್ದಾರೆ. ಆದರೆ ಕಾರ್ಮಿಕರ ಸಂಘದ ಮುಷ್ಕರ ಇಂದು ಅಧಿಕೃತವಾಗಿ ಕೊನೆಗೊಂಡಿದೆ. ಎಲ್ಲ ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ ಕರ್ನಾಟಕ ಸರ್ಕಾರ ಮತ್ತು ಕಾರ್ಮಿಕ ಇಲಾಖೆಗೆ ಟಿಕೆಎಂ ಕೃತಜ್ಞತೆ ಸಲ್ಲಿಸುತ್ತದೆ ಎಂದು ಹೇಳಿಕೆ ತಿಳಿ​ಸಿದೆ.

ಟೊಯೊಟಾ ಕಾರ್ಮಿಕರ ಪ್ರತಿಭಟನೆ: ಕವರ್ ಸ್ಟೋರಿಯಲ್ಲಿ ಬಯಲಾಯ್ತು ಎಕ್ಸ್‌ಕ್ಲೂಸಿವ್ ವಿಚಾರ

ಇದೇ ಮಾ. 5ರೊಳಗೆ ಕೆಲಸಕ್ಕೆ ಮರಳಬೇಕು ಮತ್ತು ಭವಿಷ್ಯದಲ್ಲಿ ಪರಸ್ಪರ ನಂಬಿಕೆಯ ಆಧಾರದ ಮೇಲೆ ಮತ್ತು ಪರಸ್ಪರ ತಿಳುವಳಿಕೆಯ ನಿಯಮಗಳನ್ನು ಗೌರವಿಸುವಂತೆ ಇತರ ಎಲ್ಲಾ ಸದಸ್ಯರಿಗೆ ಕಂಪನಿಯು ಅಂತಿಮ ಮನವಿಯನ್ನೂ ಸಹ ನೀಡಿದೆ ಎಂದು ವಕ್ತಾ​ರರು ತಿಳಿ​ಸಿ​ದ್ದಾರೆ. ಟಿಕೆಎಂ ಇತಿಹಾಸದುದ್ದಕ್ಕೂ, ಜನಸ್ನೇಹಿ ಸಂಸ್ಕೃತಿ ಮತ್ತು ಅಭಿವೃದ್ಧಿಯ ಬದ್ಧತೆಗೆ ಮನ್ನಣೆಯನ್ನು ನೀಡಿದೆ. ಈ ಮೌಲ್ಯವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಟಿಕೆಎಂ ಸಹಕಾರ, ವಿಶ್ವಾಸ, ಶಿಸ್ತು ಮತ್ತು ಪರಸ್ಪರ ಗೌರವದ ಆಧಾರದ ಮೇಲೆ ಸಂಬಂಧಗಳನ್ನು ಬೆಳೆಸುವ ಮೂಲಕ ಈ ಮೌಲ್ಯವ್ಯವಸ್ಥೆಯನ್ನು ಬಲಪಡಿಸಲು ಶ್ರಮಿಸಲಿದೆ ಎಂದು ಹೇಳಿ​ದ್ದಾ​ರೆ. ಕಳೆದ ಮೂರು ತಿಂಗ​ಳಿಗೂ ಹೆಚ್ಚಿನ ಕಾಲ ಮುಷ್ಕರ ನಿರತ​ರಾ​ಗಿದ್ದ ನೌಕ​ರರ ಕುಟುಂಬ​ಗ​ಳಿಗೆ ಆರ್ಥಿ​ಕ​ವಾಗಿ ತೊಂದ​ರೆ​ಯಾ​ಗಿದೆ. ಜೀ​ವನ ನಿರ್ವ​ಹಣೆಗೆ ತೊಂದ​ರೆ​ಯಾ​ಗಿ​ರು​ವು​ದ​ರಿಂದ ಎಲ್ಲರೂ ಕೆಲ​ಸಕ್ಕೆ ಹಾಜ​ರಾ​ಗು​ತ್ತಿ​ದ್ದಾರೆ. ಆದರೆ ಮೇನೇಜ್‌ಮೆಂಟ್‌ ವಿರುದ್ಧ ಸಂಘದ ಹೋರಾಟ ಬದ​ಲಾದ ಸ್ವರೂ​ಪ​ದಲ್ಲಿ ಮುಂದು​ವ​ರೆ​ಯ​ಲಿದೆ. ಉಪ​ವಾಸ ಸತ್ಯಾ​ಗ್ರಹ, ಧರಣಿ ಇತ್ಯಾ​ದಿ​ಗಳು ಮುಂದು​ವ​ರೆ​ಯ​ಲಿದೆ. ರೊಟೇ​ಷನ್‌ ಆಧಾ​ರ​ದಲ್ಲಿ ಕಾರ್ಮಿ​ಕರು ಈ ಬದ​ಲಾದ ಸ್ವರೂ​ಪದಲ್ಲಿ ಭಾಗಿ​ಯಾ​ಗ​ಲಿ​ದ್ದಾರೆ ಎಂದರು.

ಮಾಗಡಿ ಕ್ಷೇತ್ರದ ಶಾಸಕ ಎ.ಮಂಜು​ನಾಥ್‌ ವಿರುದ್ಧ ಟಿಕೆಎಂ ನೌಕ​ರರ ಸಂಘದ ಅಧ್ಯಕ್ಷ ಪ್ರಸನ್ನ ಚಕ್ಕೆರೆ ಅಸ​ಮಾ​ಧಾನ ಹೊರ​ಹಾ​ಕಿ​ದ್ದಾರೆ. ಶಾಸ​ಕರು ಯಾವ ಸಮ​ಸ್ಯೆ​ಯನ್ನು ಬಗೆ​ಹ​ರಿ​ಸಿಲ್ಲ. ಹೋರಾಟ ಮುರಿ​ಯಲು ಅವರು ಷಡ್ಯಂತ್ರ ರೂಪಿ​ಸಿ​ದ್ದಾರೆ. ಕಂಪನಿಯ ಹಣದ ಆಮೀ​ಷಕ್ಕೆ ಅವರು ಒಳ​ಗಾ​ಗಿ​ದ್ದಾರೆ ಎಂದು ಪ್ರಸ​ನ್ನ ದೂರಿ​ದ್ದಾರೆ. ​ಕಾರ್ಮಿಕ ಸಂಘ​ದ​ವರು ತಮ್ಮನ್ನು ಭೇಟಿ​ಯಾ​ಗಿ​ದ್ದರು ಎಂಬ ಶಾಸಕರ ಹೇಳಿ​ಕೆಗೆ ಪ್ರತಿ​ಕ್ರಿ​ಯಿ​ಸಿ​ರುವ ಅವರು, ಸಂಘದ ಪದಾ​ಧಿ​ಕಾ​ರಿ​ಗ​ಳ್ಯಾರು ಅವ​ರನ್ನು ಭೇಟಿಯಾಗಿಲ್ಲ. ಕಾರ್ಯ​ಕಾ​ರಿ​ಣಿಯಲ್ಲಿ ಮೆನೇಜ್‌ಮೆಂಟ್‌ ಪರ ಇರುವ ಕೆಲ​ವ​ರನ್ನು ಶಾಸ​ಕರು ಕರೆ​ಸಿ​ಕೊಂಡು ಈ ರೀತಿ ಹೇಳಿಕೆ ಕೊಟ್ಟಿ​ದ್ದಾ​ರೆ. ನಾವ್ಯಾರು ಅವ​ರನ್ನು ಭೇಟಿ​ಯಾ​ಗಿಲ್ಲ. ಅವ​ರಿಂದ ನಮಗೂ ಯಾವ ಮಾಹಿ​ತಿಯೂ ಸಿಕ್ಕಿಲ್ಲ ಎಂದು ಸ್ಪಷ್ಟ​ಪ​ಡಿ​ಸಿ​ದರು. ಶಾಸಕ ಎ.ಮಂಜು​ನಾಥ್‌ ಅವರು ಕಾರ್ಮಿ​ಕರ ಹೋರಾ​ಟ​ವನ್ನು ಮುರಿ​ಯುವ ಷಡ್ಯಂತ್ರ ಮಾಡಿ​ದ್ದಾರೆ, ಕಾರ್ಮಿಕ ವಿರೋ​ಧಿ​ಯಾಗಿ ಅವರು ನಡೆ​ದು​ಕೊಂಡಿ​ದ್ದಾ​ರೆ ಎಂದು ಅವರು ಪುನಃ ದೂರಿ​ದ್ದಾ​ರೆ.

Follow Us:
Download App:
  • android
  • ios