ಕಡಲೆ ಕಾಳು ಹಾಗೂ ಸಾಸಿವೆಕಾಳು ಗಣೇಶ, ಉಗ್ರನರಸಿಂಹ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ ಸೇರಿದಂತೆ ಇನ್ನಿತರ ಸ್ಮಾರಕಗಳ ವೀಕ್ಷಿಸಿದ ಬಹುಭಾಷಾ ನಟ ಶ್ರೀಕಾಂತ್‌ ಭೇಟಿ| ತೆಲುಗು ಚಲನಚಿತ್ರ ರಂಗದಲ್ಲಿ ಅಪಾರ ಖ್ಯಾತಿ ಗಳಿಸಿದ ನಟ ಶ್ರೀಕಾಂತ್‌| ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ನಿವಾಸಿ ನಟ ಶ್ರೀಕಾಂತ್‌| 

ಹೊಸಪೇಟೆ(ಅ.14): ವಿಶ್ವಪರಂಪರೆ ತಾಣ ಹಂಪಿಗೆ ಮಂಗಳವಾರ ಬಹುಭಾಷಾ ನಟ ಶ್ರೀಕಾಂತ್‌ ಭೇಟಿ ನೀಡಿ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ. 

Add Asianetnews Kannada as a Preferred SourcegooglePreferred

ಹಂಪಿಯ ಶ್ರೀವಿರೂಪಾಕ್ಷೇಶ್ವರ ಸ್ವಾಮಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಶ್ರೀಕಾಂತ್‌ ಬಳಿಕ ದೇವಸ್ಥಾನದ ಎಡಭಾಗದಲ್ಲಿರುವ ಪಂಪಾಂಬಿಕೆ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದುಕೊಂಡರು. ದೇಗುಲದ ಅರ್ಚಕರು ​ಶ್ರೀಕಾಂತ್‌ರನ್ನು ಗೌರವಿಸಿದರು. ನಂತರ ಕಡಲೆ ಕಾಳು ಹಾಗೂ ಸಾಸಿವೆಕಾಳು ಗಣೇಶ, ಉಗ್ರನರಸಿಂಹ, ಮಹಾನವಮಿ ದಿಬ್ಬ, ರಾಣಿಸ್ನಾನ ಗೃಹ ಸೇರಿದಂತೆ ಇನ್ನಿತರ ಸ್ಮಾರಕಗಳ ವೀಕ್ಷಿಸಿದರು.

ಸಚಿವ ಶ್ರೀರಾಮುಲು ಖಾತೆ ಬದಲು: ಸಾಮಾಜಿಕ ಜಾಲತಾಣದಲ್ಲಿ ಭುಗಿಲೆದ್ದ ಆಕ್ರೋಶ

ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ನಿವಾಸಿಯಾಗಿರುವ ನಟ ಶ್ರೀಕಾಂತ್‌ ತೆಲುಗು ಚಲನಚಿತ್ರ ರಂಗದಲ್ಲಿ ಅಪಾರ ಖ್ಯಾತಿ ಗಳಿಸಿದ್ದು, ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಪರಮ ಭಕ್ತರಾಗಿ​ದ್ದಾ​ರೆ. ಹೊಸಪೇಟೆ ಹಾಗೂ ಗಂಗಾವತಿ ಭಾಗದಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಅವರು ಈ ಭಾಗದಲ್ಲಿ ಆಗಮಿಸಿದರೆ, ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ, ಸರಳತೆ ಮೆರೆಯುತ್ತಾರೆ.