Asianet Suvarna News Asianet Suvarna News

ಬಳ್ಳಾರಿ: ಆಟವಾಡುತ್ತಿದ್ದ ಬಾಲಕನನ್ನು ಮನೆಯವರೆದುರೆ ಹೊತ್ತೊಯ್ದ ಚಿರತೆ

ಮನೆ ಮುಂದೆ ಆಟವಾಡುತ್ತಿದ್ದ  ಮಗುವಿನ ಮೇಲೆ ದಾಳಿ ಮಾಡಿದ ಚಿರತೆ ಮಗುವಿನ ಪ್ರಾಣವನ್ನೇ ಬಲಿ ಪಡೆದಿದೆ.

Three-year-old Boy Killed by LEOPARD In Ballari
Author
Bengaluru, First Published Dec 11, 2018, 8:47 PM IST

ಬಳ್ಳಾರಿ[ಡಿ.11]  ಮನೆಮುಂದೆ ಆಟವಾಡುತ್ತಿದ್ದ ಮಗು ಚಿರತೆ ದಾಳಿಗೆ ಬಲಿಯಾಗಿದೆ. ಕಂಪ್ಲಿ ತಾಲೂಕಿನ ಸೋಮಲಾಪುರದಲ್ಲಿ ನಡೆದಿರುವ ಪ್ರಕರಣ ಕರುಳು ಹಿಂಡುತ್ತಿದೆ.

ಚಿರತೆ ದಾಳಿಗೆ ಬಲಿಯಾಗಿರುವ ಬಾಲಕ  ನಾಡೋಜ ದಿ. ಬುರ್ರಕಥಾ ಈರಮ್ಮ ಅವರ ಮೊಮ್ಮಗ.  ದರೋಜಿ ಕರಡಿ ಧಾಮದ ಬಳಿಯ ಗ್ರಾಮದ  ವೆಂಕಟರಾಜು (3 )  ಎಂಬ ಪುಟ್ಟ ಮಗುವನ್ನು ಚಿರತೆ ನೋಡುನೋಡುತ್ತಿದ್ದಂತೆ ಹೊತ್ತೊಯ್ದಿದೆ.

ಮನೆಯವರೆಲ್ಲ ನೋಡನೋಡುತ್ತಿದ್ದಂತೆ‌ ಮಗುವನ್ನು ಚಿರತೆ ಎಳೆದೊಯ್ದಿದೆ. ರಕ್ತ ಹೀರಿ ಸಾಯಿಸಿದ ಚಿರತೆ ಮಗುವಿನ ಶವವನನ್ನು ಊರ ಹಿಂಭಾಗದ ಪೊದೆಯಲ್ಲಿ  ಹಾಕಿದ್ದು ಊರವರು ಹುಡುಕಾಟ ನಡೆಸಿದಾಗ ಪತ್ತೆಯಾಗಿದೆ.

Follow Us:
Download App:
  • android
  • ios