Asianet Suvarna News Asianet Suvarna News

ಹಾಲು ಕಲಬೆರಕೆ ದಂಧೆ: 3 ಕೆಎಂಎಫ್ ಅಧಿಕಾರಿಗಳು ಸಸ್ಪೆಂಡ್

ಬೆಳವಾಡಿ, ಬಂದೂರು, ಕುರುಬರಬೂದಿಹಾಳ್ ಭಾಗದಿಂದ 4 ಸಾವಿರ ಲೀಟರ್  ಕಲಬೆರಕೆ ಹಾಲು ಪೂರೈಕೆ ಮಾಡಲಾಗುತ್ತಿತ್ತು, ಇದರಲ್ಲಿ ಅರಸೀಕೆರೆ, ಕಡೂರು ವ್ಯಾಪ್ತಿಯ ವಿಸ್ತರಣಾಧಿಕಾರಿಗಳಾದ ಎಂ.ಜೆ ದೇವರಾಜ್, ಭರತ್, ಅಣ್ಣಪ್ಪ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಮೂವರನ್ನು ಅಮಾನತು ಮಾಡಲಾಗಿದೆ. 

Three KMF officers suspended for milk contamination racket in Hassan
Author
Hassan, First Published Aug 28, 2018, 2:28 PM IST

ಚಿಕ್ಕಮಗಳೂರು[ಆ.28]: ಹಾಲು ಕಲಬೆರಕೆ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಆರೋಪದಡಿ ಮೂವರು ಕೆಎಂಎಫ್ ಅಧಿಕಾರಿಗಳನ್ನು ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಆದೇಶ ಹೊರಡಿಸಿದ್ದಾರೆ.

ಬೆಳವಾಡಿ, ಬಂದೂರು, ಕುರುಬರಬೂದಿಹಾಳ್ ಭಾಗದಿಂದ 4 ಸಾವಿರ ಲೀಟರ್  ಕಲಬೆರಕೆ ಹಾಲು ಪೂರೈಕೆ ಮಾಡಲಾಗುತ್ತಿತ್ತು, ಇದರಲ್ಲಿ ಅರಸೀಕೆರೆ, ಕಡೂರು ವ್ಯಾಪ್ತಿಯ ವಿಸ್ತರಣಾಧಿಕಾರಿಗಳಾದ ಎಂ.ಜೆ ದೇವರಾಜ್, ಭರತ್, ಅಣ್ಣಪ್ಪ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಈ ಮೂವರನ್ನು ಅಮಾನತು ಮಾಡಲಾಗಿದೆ. 

ಇನ್ನು ಅರಸೀಕೆರೆ ಹಾಲು ಶೀಥಲೀಕರಣ ಘಟಕದ 9 ಮಂದಿ ಸಿಬ್ಬಂದಿಗಳು ಸಹ ಅಮಾನತು ಮಾಡಲಾಗಿದ್ದು ಪೊಲೀಸ್ ವಶಕ್ಕೆ ನೀಡಲಾಗಿದೆ. ಇದರ ಜತೆಗೆ ಹಾಲು ಕಲಬೆರಕೆ ಮಾಡಿ ಸಾಗಿಸುತ್ತಿದ್ದ ಪ್ರಮುಖ ಆರೋಪಿ ಶ್ರೀನಿವಾಸ್ ಬಂಧಿಸಲಾಗಿದೆ.

Follow Us:
Download App:
  • android
  • ios