ಚಾಮರಾಜನಗರ: ಗೋಪಿನಾಥಂ ಡ್ಯಾಂ ಮೂವರು ನೀರು ಪಾಲು
ಮೂವರು ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದರು. ಬಟ್ಟೆ ತೊಳೆದ ನಂತರ ಬಟ್ಟೆಯನ್ನು ಹಿಂಡಲು ಹೋಗಿ ತಾಯಿ ಮೀನಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರು. ತಾಯಿಯ ರಕ್ಷಣೆಗೆ ಹೋದ ಇಬ್ಬರು ಹೆಣ್ಣುಮಕ್ಕಳೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಹನೂರು(ಏ.06): ಜಲಾಶಯದ ದಂಡೆಯ ಮೇಲೆ ಬಟ್ಟೆ ಒಗೆಯುತ್ತಿದ್ದ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ನೀರುಪಾಲಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗಡಿ ಗ್ರಾಮ ಗೋಪಿನಾಥಂ ಬಳಿಯ ಪುದೂರು ಗ್ರಾಮದಲ್ಲಿ ನಡೆದಿದೆ.
ಪುದೂರು ಗ್ರಾಮದ ಮೀನಾ (34), ಪವಿತ್ರಾ (14) ಕೀರ್ತಿ (11) ಮೃತರು. ಶುಕ್ರವಾರ ಮಧ್ಯಾಹ್ನ ಮೂವರು ಗೋಪಿನಾಥಂ ಜಲಾಶಯಕ್ಕೆ ಬಟ್ಟೆ ತೊಳೆಯಲು ಹೋಗಿದ್ದರು.
ಮಂಗಳೂರು: SSLC ಪರೀಕ್ಷೆ ಮುಗಿಸಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ನೀರು ಪಾಲು
ಬಟ್ಟೆ ತೊಳೆದ ನಂತರ ಬಟ್ಟೆಯನ್ನು ಹಿಂಡಲು ಹೋಗಿ ತಾಯಿ ಮೀನಾ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದರು. ತಾಯಿಯ ರಕ್ಷಣೆಗೆ ಹೋದ ಇಬ್ಬರು ಹೆಣ್ಣುಮಕ್ಕಳೂ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.