Asianet Suvarna News Asianet Suvarna News

ಚಿತ್ರದುರ್ಗ: ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಗಂಧದ ಮರ ಕಳ್ಳರ ಹಾವಳಿ

ಚಿತ್ರದುರ್ಗದ ಹೊರವಲಯದಲ್ಲಿರುವ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ.ಹೌದು,ಚಿತ್ತದುರ್ಗ ನಗರದಿಂದ ಸುಮಾರು 10 ಕಿಲೋ ಮೀಟರ್ ದೂರವಿರುವ ಈ ಕಾಯ್ದಿಟ್ಟ ಅರಣ್ಯದಲ್ಲಿ ಶ್ರೀಗಂಧದ ಮರಗಳ ಕಳ್ಳರ ಹಾವಳಿ ಮಿತಿಮೀರಿದೆ. 

Thieves Theft Sandalwood Trees in Jogimatti Forest in Chitradurga grg
Author
First Published Jan 3, 2024, 9:18 PM IST

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜ.03):  ಜೋಗಿಮಟ್ಟಿ ಅಂದ್ರೆ ಎಲ್ಲರಿಗೂ ತಟ್ಟನೇ ನೆನಪಾಗೋದು ಅಲ್ಲಿನ ಮಂಜಿನ ನರ್ತನ. ಆ ನೈಸರ್ಗಿಕ ತಾಣದಲ್ಲಿನ ಬಗೆಬಗೆಯ ಔಶಧಿ ಸಸ್ಯಕಾಶಿ. ಆದ್ರೆ ಈ ತಾಣದಲ್ಲೀಗ ಶ್ರೀಗಂಧದ ಕಳ್ಳರ ಹಾವಳಿ ಹೆಚ್ಚಾಗಿದೆ. ಹೀಗಾಗಿ ಪರಿಸರ ಪ್ರೇಮಿಗಳು ಹಾಗು ಪ್ರವಾಸಿಗರಲ್ಲಿ ಆತಂಕ ಶುರುವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.....,

ಹೀಗೆ ಮರಗಳಿಗೆ ಬಿದ್ದಿರೊ ಕೊಡಲಿ ಪೆಟ್ಟು. ಕಣ್ಣಾಯಿಸಿದಷ್ಟು ದೂರಕ್ಕೆ ಕಾಣುವ ಮರಗಳ ಮಾರಣ‌ ಹೋಮ. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಹೊರವಲಯದಲ್ಲಿರುವ ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ.ಹೌದು,ಚಿತ್ತದುರ್ಗ ನಗರದಿಂದ ಸುಮಾರು 10 ಕಿಲೋ ಮೀಟರ್ ದೂರವಿರುವ ಈ ಕಾಯ್ದಿಟ್ಟ ಅರಣ್ಯದಲ್ಲಿ ಶ್ರೀಗಂಧದ ಮರಗಳ ಕಳ್ಳರ ಹಾವಳಿ ಮಿತಿಮೀರಿದೆ. ಈ ಅರಣ್ಯ ಪ್ರವೇಶಿಸುವ ಮುನ್ನ ಚೆಕ್ ಪೋಸ್ಟ್ ಹಾಗೂ ತನಿಖಾ ಕೇಂದ್ರಗಳಿದ್ರು ಸಹ ಎಗ್ಗಿಲ್ಲದೆ‌ ಶ್ರೀಗಂಧ ಕಳ್ಳತನ ಆಗ್ತಿದೆ. ಇದಕ್ಕೆ‌ಸಾಕ್ಷಿ ಎಂಬಂತೆ ಆಡುಮಲ್ಲೇಶ್ವರ ಹಾಗು ಹಿಮವತ್ ಕೆದಾರ ಫಾಲ್ಸ್ ಮದ್ಯೆ ಹಾದುಹೋಗಿರೊ ರಸ್ತೆಯಲ್ಲಿ ಬೃಹತ್ ಗಂಧದ ಮರಗಳನ್ನು ಕಳ್ಳರು ಕಡಿದುಹಾಕಿದ್ದು, ನಿರ್ಭಯವಾಗಿ ಬೇರೆಡೆಗೆ ಸಾಗಿಸಿರುವ ಕುರುಹುಗಳು ಪತ್ತೆಯಾಗಿದೆ. 

ಚಿತ್ರದುರ್ಗದಲ್ಲಿ ₹1.50 ಕೋಟಿ ರಾಬರಿ ಕೇಸ್; 10 ಆರೋಪಿಗಳನ್ನು ಬಂಧಿಸಿದ ಪೊಲೀಸರು!

ಆದ್ರೆ ಅರಣ್ಯವನ್ನು ಸಂರಕ್ಷಿಸಬೇಕಾದ  ಅರಣ್ಯ ಇಲಾಖೆ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿರೋದು ಪರಿಸರ ಪ್ರೇಮಿಗಳು ಹಾಗು ನಾಗರೀಕರಲ್ಲಿ ಬಾರಿ ಅನುಮಾನ ಮೂಡಿಸಿದೆ. ಹೀಗಾಗಿ ಶ್ರೀ ಗಂಧ ಕಳ್ಳತನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಕೈ ಜೋಡಿಸಿರಬಹುದೆಂಬ ಆರೋಪ ಕೇಳಿಬಂದಿದೆ.

ಇ‌ನ್ನು ದಿನಬೆಳಗಾದ್ರೆ ವಾಯು ವಿಹಾರಿಗಳು ಹಾಗೂ ಪ್ರವಾಸಿಗರಿಂದ ಭರ್ತಿಯಾಗಿರುತಿದ್ದ ಜೋಗಿಮಟ್ಟಿ ಗಿರಿಧಾಮ ಕಳೆದ ಎರಡು ದಿನಗಳಿಂದ ಜನರಿಲ್ಲದೇ ಬಿಕೊ ಎನ್ನುತ್ತಿದೆ. ಗಂಧದ ಕಳ್ಳರ ಹಾವಳಿಯಿಂದ ಬೆಚ್ಚಬಿದ್ದಿರೊ ಜನರು ಜೋಗಿಮಟ್ಟಿಗೆ ಬರಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟವರು ಗಂಧದ ಮರಗಳ ಮಾರಣ ಹೋಮಕ್ಕೆ ಬ್ರೇಕ್ ಹಾಕಬೇಕಿದೆ.ನೈಸರ್ಗಿಕ ಸಂಪತ್ತನ್ನು ನಾಶಪಡಿಸಿ,ಲೂಟಿ ಮಾಟೋದನ್ನು ನಿಲ್ಲಿಸಲಯ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಒಟ್ಟಾರೆ ಜೋಗಿಮಟ್ಟಿ ಅರಣ್ಯದಲ್ಲಿ ಗಂಧರ ಮರಗಳ್ಳರ ಹಾವಳಿ ಮಿತಿಮೀರಿದೆ‌. ಹೀಗಾಗಿ ಕೋಟೆನಾಡಿನ ಜನರು ಹಾಗು ಪ್ರವಾಸಿಗರಲ್ಲಿ ಆತಂಕ ಮನೆ ಮಾಡಿದೆ.‌ ಇನ್ನಾದ್ರು ಅರಣ್ಯ ಇಲಾಕೆ ಅಧಿಕಾರಿಗಳು‌ಎಚ್ಚೆತ್ತುವಗಂಧದ ಮರಗಳ್ಳತನಕ್ಕೆ ಬ್ರೇಕ್ ಹಾಕಿ,ಜನರ ಆತಂಕ ಶಮನಗೊಳಿಸಬೇಕಿದೆ.

Follow Us:
Download App:
  • android
  • ios