ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಸಂಭ​ವಿ​ಸು​ತ್ತಿ​ರುವ ಅಪ​ಘಾ​ತ​ಗ​ಳನ್ನು ನಿಯಂತ್ರಿ​ಸಲು ಕ್ರಮವಹಿಸುವಂತೆ ಸಂಸದ ಡಿ.ಕೆ.​ಸು​ರೇಶ್‌ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡಿ​ದರು. 

ರಾಮ​ನ​ಗ​ರ (ಜು.14): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಸಂಭ​ವಿ​ಸು​ತ್ತಿ​ರುವ ಅಪ​ಘಾ​ತ​ಗ​ಳನ್ನು ನಿಯಂತ್ರಿ​ಸಲು ಕ್ರಮವಹಿಸುವಂತೆ ಸಂಸದ ಡಿ.ಕೆ.​ಸು​ರೇಶ್‌ ಅಧಿ​ಕಾ​ರಿ​ಗ​ಳಿಗೆ ಸೂಚನೆ ನೀಡಿ​ದರು. ನಗ​ರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆದ್ದಾ​ರಿ​ಯಲ್ಲಿ ಗುರು​ತಿ​ಸ​ಲಾ​ಗಿ​ರುವ ಅಪಘಾತ ಸಂಭ​ವಿ​ಸುವ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯಾಗಿ ರೋಡ್‌ ಸೈನ್‌ಗಳು, ಕ್ಯಾಮೆರಾಗಳನ್ನು ಅಳವಡಿಸಬೇಕು. ವೇಗವಾಗಿ ಚಲಿಸುವ ವಾಹನಗಳಿಗೆ ದಂಡ ವಿಧಿಸು​ವಂತೆ ತಿಳಿ​ಸಿ​ದರು.

ಅಪಘಾತ ತಡೆಗೆ ಜಂಟಿ ಸಮೀಕ್ಷೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳನ್ನು ತಡೆಯಲು ಪೊಲೀಸ್‌ ಇಲಾಖೆ, ಲೋಕೋಪಯೋಗಿ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ​ಎಂಜನಿಯರ್‌ಗಳು ಸೇರಿ ಹೆದ್ದಾ​ರಿ​ಯಲ್ಲಿ ಅಪಘಾತಗಳು ಸಂಭವಿಸದಂತೆ ಕ್ರಮವಹಿಸಲು ಮತ್ತು ವಾಹನಗಳು ಸುಗಮವಾಗಿ ಸಂಚರಿಸಲು ಕೈಗೊ​ಳ್ಳ​ಬೇ​ಕಾದ ಕ್ರಮ​ಗಳ ಕುರಿತು ಸಮೀಕ್ಷೆ ನಡೆಸಿ ವರದಿ ಸಲ್ಲಿ​ಸು​ವಂತೆ ಸಲಹೆ ನೀಡಿ​ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ಬಸ್‌ ಸೇರಿದಂತೆ ಭಾರಿ ವಾಹನಗಳು ಬಲಭಾಗದಲ್ಲಿ ಸಂಚರಿಸುತ್ತಿದ್ದು ಅವುಗಳು ಎಡಭಾಗದ ಮೊದಲ ಮತ್ತು ಎರಡನೇ ಲೈನ್‌ನಲ್ಲಿ ಸಂಚರಿಸಲು ಕ್ರಮವಹಿಸಬೇಕು.

ವರ್ಗಾವಣೆ ರೇಟ್‌ಕಾರ್ಡ್‌: ಕುಮಾರಸ್ವಾಮಿ-ಚೆಲುವರಾಯಸ್ವಾಮಿ ವಾಗ್ವಾದ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸಮಯದಲ್ಲಿ ಕೆರೆಗಳು ಹಾಳಾಗಿದ್ದು, ಇವುಗಳನ್ನು ದುರಸ್ತಿ ಮಾಡಬೇಕು. ಹೆದ್ದಾರಿಯ ಪ್ರವೇಶ ಮತ್ತು ಹೊರ ಹೋಗುವ ಮಾರ್ಗಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಅವಶ್ಯವಿರುವ ಕಡೆ ಪ್ರವೇಶ ಮತ್ತು ಹೊರ ಹೋಗುವ ಮಾರ್ಗಗಳನ್ನು ನಿರ್ಮಿಸಲು ಕ್ರಮ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿ​ಕಾ​ರದ ಅಧಿ​ಕಾ​ರಿ​ಗ​ಳಿಗೆ ಸೂಚಿ​ಸಿ​ದರು. ರಾಷ್ಟ್ರೀಯ ಹೆದ್ದಾರಿ 209ರಲ್ಲಿ ದೇವಿಕಾ ರಾಣಿ ಎಸ್ಟೇಚ್‌ ಹತ್ತಿರ ಆನೆಗಳು ಸಂಚಾರ ಮಾಡುತ್ತಿದ್ದು ಇಲ್ಲಿ ಆನೆ ಕಾರಿಡಾರ್‌ ನಿರ್ಮಿಸುವುದು. ಅವಶ್ಯವಿರುವ ಕಡೆ ರಾರ‍ಯಂಪ್‌ ನಿರ್ಮಿಸಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ತಿಳಿಸಿದರು.

ರಾಮನಗರದಲ್ಲಿ ಪ್ರವಾಹ ಉಂಟಾದಾಗ ರಸ್ತೆಗಳು ಮತ್ತು ಚರಂಡಿಗಳು ಹಾಳಾಗಿದ್ದು, ಇವುಗಳನ್ನು ಸಹ ದುರಸ್ತಿಗೊಳಿಸಬೇಕು. ರಾಮನಗರ ಸುತ್ತಮುತ್ತಲು ಅಪಘಾತವಾಗುವಂತಹ ವಡೇರಹಳ್ಳಿ, ಬೂದಯ್ಯನದೊಡ್ಡಿ, ಅಚಲು, ಪಾದರಹಳ್ಳಿ, ಬಿದರಹಳ್ಳಿ ಕಟ್ಟೆ, ಗೊಲ್ಲರದೊಡ್ಡಿ ಸೇರಿದಂತೆ ಪ್ರಮುಖ 25 ಅಪಘಾತ ಸ್ಥಳಗಳನ್ನು ಗುರುತಿಸಿದ್ದು ಈ ಸ್ಥಳಗಳಲ್ಲಿ ಅಪಘಾತ ಸಂಭವಿಸದಂತೆ ಕ್ರಮ ವಹಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಗೆ ಸಲಹೆ ನೀಡಿ​ದ​ರು.

ರಾಮನಗರ ಜಿಲ್ಲೆಯ ಬಿಡದಿ, ಹಾರೋಹಳ್ಳಿ, ರಾಮನಗರ, ಕನಕಪುರ ಹಾಗೂ ಚನ್ನಪಟ್ಟಣಗಳ ಮುಖ್ಯರಸ್ತೆಯಲ್ಲಿ ಜಂಕ್ಷನ್‌ಗಳು ಇದ್ದರು ಸಹ ಇವು ಸಮರ್ಪಕವಾಗಿಲ್ಲ. ಆದ್ದರಿಂದ ಸದರಿ ಜಂಕ್ಷನ್‌ ಗಳನ್ನು ದುರಸ್ತಿಗೊಳಿಸಲು ಕ್ರಮವಹಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ತಿಳಿಸಿದರು. ಸಭೆಯಲ್ಲಿ ಶಾಸಕ ಇಕ್ಬಾಲ್‌ ಹುಸೇನ್‌, ಜಿಲ್ಲಾಧಿಕಾರಿ ಅವಿನಾಶ್‌, ಜಿಲ್ಲಾ ಪಂಚಾಯತ್‌ ಸಿಇಒ ದಿಗ್ವಿಜಯ ಬೋಡ್ಕೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ ರೆಡ್ಡಿ, ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಮಂಜುನಾಥ್‌ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿ 46 ಸಾವಿರ ರೌಡಿಶೀಟರ್‌ಗಳು: ಸಚಿವ ಪರಮೇಶ್ವರ್‌ ಮಾಹಿತಿ

ಅಪ​ಘಾ​ತ​ದಲ್ಲಿ ಗಾಯ​ಗೊಂಡ​ವ​ರಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕು. ಅಪಘಾತವಾದ ಒಂದು ಗಂಟೆಯೊಳಗಿನ ಗೋಲ್ಡನ್‌ ಅವರ್‌ನಲ್ಲಿ ಸೂಕ್ತ ಚಿಕಿತ್ಸೆ ನೀಡಿ​ದಲ್ಲಿ ಪ್ರಾಣ ಉಳಿ​ಯುವ ಸಾಧ್ಯ​ತೆ​ಗಳು ಹೆಚ್ಚಾ​ಗಿ​ರು​ತ್ತದೆ. ಆದ್ದ​ರಿಂದ ಜಿಲ್ಲಾ​ಸ್ಪ​ತ್ರೆ​ಯಲ್ಲಿ ಟ್ರಾಮಾ ಕೇರ್‌ ಸೆಂಟರ್‌(ಅ​ಪ​ಘಾತ ವೈದ್ಯ​ಕೀಯ ಸೇವಾ​ಕೇಂದ್ರ) ಸ್ಥಾಪಿ​ಸ​ಲಾ​ಗು​ವುದು. ಇದು ಆರಂಭ​ಗೊಂಡಲ್ಲಿ ಸೂಕ್ತ ಸಮ​ಯ​ದಲ್ಲಿ ಚಿಕಿತ್ಸೆ ದೊರ​ಕುವ ಮೂಲಕ ಅಪ​ಘಾ​ತ​ಕ್ಕೊ​ಳ​ಗಾ​ದ​ವರ ಪ್ರಾಣ ರಕ್ಷಣೆ ಸಾಧ್ಯ​ವಾ​ಗ​ಲಿ​ದೆ.
-ಡಿ.ಕೆ.​ಸು​ರೇಶ್‌, ಸಂಸ​ದರು