Asianet Suvarna News Asianet Suvarna News

ಚುಡಾಯಿಸಿದ್ದಕ್ಕೆ ದೂರು: ಸಿಟ್ಟಿಗೆ ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿ

ಸಹ್ಯಾದ್ರಿ ಕಾಲೇಜಿನ ಹುಡುಯೋರ್ವಳನ್ನು ಸಹ್ಯಾದ್ರಿ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಗೋಕುಲ್ ಚುಡಾಯಿಸಿದ್ದ ಎನ್ನಲಾಗಿದೆ. ಈ ವಿಚಾರವನ್ನು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಅವಿನಾಶ್ ಉಪನ್ಯಾಸಕರಿಗೆ ತಿಳಿಸಿದ್ದಾನೆ.

Student stabbed by classmate her in Sahyadri College of Shimoga
Author
Shivamogga, First Published Sep 6, 2018, 4:40 PM IST

ಶಿವಮೊಗ್ಗ[ಸೆ.06]: ಹುಡುಗಿಯೊಬ್ಬಳ್ಳನ್ನು ಚುಡಾಯಿಸಿದ ಕ್ಷುಲ್ಲಕ ವಿಚಾರ, ಚಾಕು ಇರಿತದೊಂದಿಗೆ ಅಂತ್ಯವಾದ ಘಟನೆ ನಗರದ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ನಡೆದಿದೆ.

ಸಹ್ಯಾದ್ರಿ ಕಾಲೇಜಿನ ಹುಡುಯೋರ್ವಳನ್ನು ಸಹ್ಯಾದ್ರಿ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಗೋಕುಲ್ ಚುಡಾಯಿಸಿದ್ದ ಎನ್ನಲಾಗಿದೆ. ಈ ವಿಚಾರವನ್ನು ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಅವಿನಾಶ್ ಉಪನ್ಯಾಸಕರಿಗೆ ತಿಳಿಸಿದ್ದಾನೆ.

ಈ ವಿಚಾರ ದ್ವೇಷಕ್ಕೆ ತಿರುಗಿ ಗೋಕುಲ್ ಮತ್ತು ಸ್ನೇಹಿತರು ಅವಿನಾಶ್ ಮೇಲೆ ಚಾಕುವಿನಿಂದ ಇರಿದಿದ್ದಾರೆ. ಗಾಯಾಳುವಾಗಿದ್ದ ಅವಿನಾಶ್ ಅವರನ್ನು ಮೆಗ್ಗಾನ್ ಆಸ್ಫತ್ರೆಗೆ ದಾಖಲಿಸಲಾಗಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow Us:
Download App:
  • android
  • ios