Asianet Suvarna News Asianet Suvarna News

ಕಾಸರಗೋಡು: ಕುಮಾರಮಂಗಲ ದೇವಸ್ಥಾನಕ್ಕೆ ಶ್ರೀಲಂಕಾ ಪ್ರಧಾನಿ ಭೇಟಿ

ಶ್ರೀಲಂಕಾ ಪ್ರಧಾನಿ ರನೀಲ್ ವಿಕ್ರಮಸಿಂಘೆ ಕಾಸರಗೋಡಿನ ಬೇಳದ ಕುಮಾರಮಂಗಲ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ್ದಾರೆ. ಸುಮಾರು ಮುಕ್ಕಾಲು ಗಂಟೆ ದೇವಸ್ಥಾನದಲ್ಲಿದ್ದ ಅವರು ಪತ್ನಿ ಹಾಗೂ ಕುಟುಂಬದ ಜೊತೆಗೆ ಆಶ್ಲೇಷ ಬಲಿ, ಅಲಂಕಾರ ಪೂಜೆ ಹಾಗೂ ನಾಗಪೂಜೆಯನ್ನು ನಡೆಸಿದ್ದಾರೆ.

SriLanka PM Ranil Wickremesinghe visits Kasaragod Kumaramangala Temple
Author
Bangalore, First Published Jul 27, 2019, 3:48 PM IST

ಕಾಸರಗೋಡು(ಜು.27): ಶ್ರೀಲಂಕಾ ಪ್ರಧಾನಿ ರನೀಲ್ ವಿಕ್ರಮಸಿಂಘೆ ಕಾಸರಗೋಡಿನ ಬೇಳದ ಕುಮಾರಮಂಗಲ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ್ದಾರೆ.

ಸುಮಾರು ಮುಕ್ಕಾಲು ಗಂಟೆ ದೇವಸ್ಥಾನದಲ್ಲಿದ್ದ ಅವರು ಪತ್ನಿ ಹಾಗೂ ಕುಟುಂಬದ ಜೊತೆಗೆ ಆಶ್ಲೇಷ ಬಲಿ, ಅಲಂಕಾರ ಪೂಜೆ ಹಾಗೂ ನಾಗಪೂಜೆಯನ್ನು ನಡೆಸಿದ್ದಾರೆ.

ಕೊಲ್ಲೂರಿಗೆ ಲಂಕಾ ಪ್ರಧಾನಿ: ಭಕ್ತರಿಗಿಲ್ಲ ಪ್ರವೇಶ

ಬೆಳಗ್ಗಿನಿಂದ ಆರಂಭಿಸಿದಂತೆ ಶ್ರೀಲಂಕಾ ಪ್ರಧಾನಿ ನಿರ್ಗಮಿಸುವವರೆಗೆ 10 ಗಂಟೆ ವರೆಗೆ ದೇವಳದಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಬಳಿಕ ಶ್ರೀಲಂಕಾ ಪ್ರಧಾನಿ ಮಂಗಳೂರಿಗೆ ರಸ್ತೆ ಮೂಲಕ ತೆರಳಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಗಮಿಸಿ, ವಿಶೇಷ ವಿಮಾನದ ಮೂಲಕ ಶ್ರೀಲಂಕಾಗೆ ತೆರಳಿದರು.

Follow Us:
Download App:
  • android
  • ios