Asianet Suvarna News Asianet Suvarna News

ಕಾವೇರಿ ಸಮಸ್ಯೆಗೆ ರಾಷ್ಟ್ರೀಯ ಜಲನೀತಿ ರೂಪಿಸುವುದೇ ಪರಿಹಾರ: ಪ್ರೊ.ಕೆ.ಎಸ್‌. ಭಗವಾನ್‌

ನಮಗೆ ಸಿಗಬೇಕಾದ ನೀರಿನ ಪ್ರಮಾಣ ಪಡೆಯಲು ಹೋರಾಟ ಮಾಡಬೇಕು. ಕಾವೇರಿ ನದಿ ನೀರು ಪ್ರಾಧಿಕಾರ, ಸುಪ್ರೀಂಕೋರ್ಟಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ಪರಿಣಾಮಕಾರಿ ಜನಾಂದೋಲನ ನಡೆಯಬೇಕು: ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್‌ 

Solution to the Kaveri Problem is to Formulate National Water Policy Prof KS Bhagawan grg
Author
First Published Aug 23, 2023, 11:15 PM IST

ಮೈಸೂರು(ಆ.23):  ಕಾವೇರಿ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಜಲನೀತಿ ರೂಪಿಸುವುದೇ ಪರಿಹಾರ ಎಂದು ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್‌ ಹೇಳಿದ್ದಾರೆ.

ನಮಗೆ ಸಿಗಬೇಕಾದ ನೀರಿನ ಪ್ರಮಾಣ ಪಡೆಯಲು ಹೋರಾಟ ಮಾಡಬೇಕು. ಕಾವೇರಿ ನದಿ ನೀರು ಪ್ರಾಧಿಕಾರ, ಸುಪ್ರೀಂಕೋರ್ಟಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ಪರಿಣಾಮಕಾರಿ ಜನಾಂದೋಲನ ನಡೆಯಬೇಕು ಎಂದು ಅವರು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದರ್ಥ: ಕೆ.ಎಸ್. ಭಗವಾನ್‌ ಟೀಕೆ

ಕಾವೇರಿ ನೀರನ್ನು ನ್ಯಾಯಬದ್ಧವಾಗಿ ಪಡೆಯುವುದರ ಮೇಲೆ ರಾಜ್ಯದ ಅಭಿವೃದ್ಧಿ ಅವಲಂಬಿತವಾಗಿದೆ. ಒಂದು ಹನಿ ನೀರು ಕೊಡುವುದಿಲ್ಲ ಅಥವಾ ಬಿಡುವುದಿಲ್ಲ ಎಂಬ ಮಾತಿಗೆ ಬದಲಾಗಿ ನಮಗೆ ನ್ಯಾಯಬದ್ಧವಾಗಿ ಬರಬೇಕಾದ ನೀರನ್ನು ಪಡೆಯಲು ಹೋರಾಟ ಮಾಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.

Follow Us:
Download App:
  • android
  • ios