Asianet Suvarna News Asianet Suvarna News

ಮೈಸೂರಿನ ಮೃಗಾಲಯಕ್ಕೆ ತಂದ 24 ಗಂಟೆಯಲ್ಲಿ ಹುಲಿ, ಕಾಳಿಂಗ ಸರ್ಪ ಸಾವು

ಮೈಸೂರು ಮೃಗಾಲಯಕ್ಕೆ ತಂದ 24 ಗಂಟೆಯಲ್ಲಿಯೇ ಹುಲಿ ಹಾಗೂ ಕಾಳಿಂಗ ಸರ್ಪ ಮೃತಪಟ್ಟಿವೆ. 

Snake Tiger Dies In Mysore Zoo
Author
Bengaluru, First Published Mar 3, 2020, 8:42 AM IST

 ಮೈಸೂರು [ಮಾ.03]: ಮಂಗಳೂರಿನ ಪಿಲಿಕುಳ ಮೃಗಾಲಯದಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ತರಲಾಗಿದ್ದ ಹುಲಿ ಮತ್ತು ಕಾಳಿಂಗ ಸರ್ಪ ಅನಾರೋಗ್ಯದಿಂದ ಮೃತಪಟ್ಟಿವೆ.

ಸುಮಾರು 4 ವರ್ಷದ ಗಂಡು ಹುಲಿ ಹೃದಯಾಘಾತದಿಂದ ಮೃತಪಟ್ಟರೆ, ಕಾಳಿಂಗ ಸರ್ಪವು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿರುವುದಾಗಿ ಮೃಗಾಲಯ ಮೂಲಗಳು ದೃಢಪಡಿಸಿದೆ. ಫೆ.28ರಂದು ಮಂಗಳೂರಿನ ಪಿಲಿಕುಳ ಮೃಗಾಲಯದಿಂದ ತರಲಾಗಿದ್ದ 4 ವರ್ಷದ ಹುಲಿ ಭಾನುವಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪ್ರಾಣಿ ವಿನಿಮಯ ಯೋಜನೆಯಡಿ ಈ ಹುಲಿಯನ್ನು ತರಲಾಗಿತ್ತು. ಮೇಲುನೋಟಕ್ಕೆ ಚೆನ್ನಾಗಿದ್ದರೂ ಏಕಾಏಕಿ ಹೃದಯಾಘಾತವಾಗಿ ಮೃತಪಟ್ಟಿದೆ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು. 

ಕಾಳಿಂಗ ಸರ್ಪ ಶನಿವಾರ ಮೃತಪಟ್ಟಿದೆ. ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಹಾವು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಎರಡೂ ಪ್ರಾಣಿಗಳ ಅಂತ್ಯಕ್ರಿಯೆ ನೆರವೇರಿದೆ.

Follow Us:
Download App:
  • android
  • ios