ಉರಗ ಸಂರಕ್ಷಕ ದಿಲೀಪ್ ಅವರು ಬೃಹತ್‌ ಗಾತ್ರದ ನಾಗರಹಾವು ರಕ್ಷಣೆ ಮಾಡಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. 

ತುಮಕೂರು(ಅ.01):  ದೇವರ ಕೋಣೆಯಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ನಾಗರಹಾವು ನೋಡಿದ ಮಂದಿ ಬೆಚ್ಚಿಬಿದ್ದ ಘಟನೆ ತುಮಕೂರು ನಗರದ ಯಲ್ಲಾಪುರದ ವಿನಾಯಕ ನಗರದಲ್ಲಿ ನಡೆದಿದೆ. ನಾಗರಹಾವು ಕಂಡು ಮನೆಯ ಮಂದಿ ಹೌಹಾರಿದ್ದಾರೆ. 

Add Asianetnews Kannada as a Preferred SourcegooglePreferred

ಸಿದ್ದರಾಜು ಎಂಬುವವರ ಮನೆಯ ದೇವರ ಕೋಣೆಯಲ್ಲಿದ್ದ ನಾಗರಹಾವು ಸೇರಿಕೊಂಡಿತ್ತು. ಕೂಡಲೇ ವಾರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು.

ಹಾವಿನೊಂದಿಗೆ ಸರಸವಾಡುವ ಶಿರಸಿಯ ಆರು ವರ್ಷದ ಬಾಲಕ: ವೀಡಿಯೋ ವೈರಲ್

ಸ್ಥಳಕ್ಕೆ ಭೇಟಿ ಕೊಟ್ಟ ಉರಗ ಸಂರಕ್ಷಕ ದಿಲೀಪ್ ಅವರು ಬೃಹತ್‌ ಗಾತ್ರದ ನಾಗರಹಾವು ರಕ್ಷಣೆ ಮಾಡಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.