ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಹೋಟೆಲ್ವೊಂದರಲ್ಲಿ ಕುಳಿತು ಟೀ ಕುಡಿದು, ಜನರ ಸಮಸ್ಯೆ ಆಲಿಸಿದರು ಟೀ ಕುಡಿದು, ಜನರ ಸಮಸ್ಯೆ ಆಲಿಸುವ ಮೂಲಕ ಸರಳತೆ ಮೆರೆದರು
ಶಿವಮೊಗ್ಗ (ಸೆ.19): ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಹೋಟೆಲ್ವೊಂದರಲ್ಲಿ ಕುಳಿತು ಟೀ ಕುಡಿದು, ಜನರ ಸಮಸ್ಯೆ ಆಲಿಸುವ ಮೂಲಕ ಸರಳತೆ ಮೆರೆದ ಘಟನೆ ಶನಿವಾರ ನಡೆಯಿತು.
Add Asianetnews Kannada as a Preferred Source

ಅವರು ತೀರ್ಥಹಳ್ಳಿಯ ಬಿಜೆಪಿ ಕಚೇರಿಗೆ ಆಗಮಿಸಿದಾಗ ಪಕ್ಕದಲ್ಲಿರುವ ಕಲ್ಪವೃಕ್ಷ ಹೋಟೆಲ್ನ ಟೀ ಕುಡಿಯುವುದು ಹಿಂದಿನಿಂದಲೂ ವಾಡಿಕೆ. ಅದೇ ರೀತಿ ಶನಿವಾರ ಬಿಜೆಪಿ ಕಚೇರಿಯಿಂದ ಜ್ಞಾನೇಂದ್ರ ಹೊರಬಂದಾಗ ಹೋಟೆಲ್ನ ಕಿಶೋರ್ ಟೀ ಕೊಡಲಾ ಎಂದರು.
‘ಕನ್ನಡಪ್ರಭ’ ವರದಿ ಪರಿಷತ್ನಲ್ಲಿ ಪ್ರತಿಧ್ವನಿ: 'ಅಕ್ರಮ ಬಾಂಗ್ಲನ್ನರ ಪತ್ತೆಗೆ ವಿಶೇಷ ಕಾರ್ಯಪಡೆ, ಜ್ಞಾನೇಂದ್ರ
‘ಆಯ್ತು ಮಾರಾಯಾ’ ಎಂದು ಜ್ಞಾನೇಂದ್ರ ಹೋಟೆಲ್ಗೆ ಹೋಗಿ ಕುಳಿತರು. ಅಷ್ಟರಲ್ಲಿ ಹಲವರು ಅಲ್ಲಿಗೆ ಬಂದು ಮನವಿ ಪತ್ರಗಳನ್ನು ಕೊಡಲಾರಂಭಿಸಿದರು. ಅದನ್ನು ಸ್ವೀಕರಿಸಿ ಅವರ ಅಹವಾಲು ಆಲಿಸಿ ಪರಿಹಾರ ಸೂಚಿಸಿದರು.
