Asianet Suvarna News Asianet Suvarna News

ರಾಮನಗರ-ಚನ್ನಪಟ್ಟಣ ರೈತರಿಗೆ ಭರ್ಜರಿ ಕೊಡುಗೆ

ರಾಮನಗರ ಹಾಗೂ ಚನ್ನಪಟ್ಟಣ ರೈತರಿಗೆ ಸಚಿವ ನಾರಾಯಣ ಗೌಡ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. 

Silk Market To Built Between Ramanagara Channapatna snr
Author
Bengaluru, First Published Nov 2, 2020, 12:16 PM IST

ಮಂಡ್ಯ (ನ.02):  ರೇಷ್ಮೆ ಉದ್ಯ​ಮಕ್ಕೆ ಹೆಚ್ಚಿನ ಒತ್ತು ನೀಡುವ ಸಲು​ವಾಗಿ ರಾಮ​ನ​ಗರ- ಚನ್ನ​ಪ​ಟ್ಟಣ ಮಧ್ಯೆ ಅಂತಾರಾಷ್ಟ್ರೀಯ ಮಾರು​ಕಟ್ಟೆನಿರ್ಮಿಸಲು ಯೋಜನೆ ರೂಪಿ​ಸ​ಲಾ​ಗಿದೆ ಎಂದು ಜಿಲ್ಲಾ ಉಸ್ತು​ವಾರಿ ಸಚಿವ ಕೆ.ಸಿ.ನಾರಾ​ಯ​ಣ​ಗೌಡ ತಿಳಿ​ಸಿ​ದರು.

ಜಿಲ್ಲಾ ಕಾರ‍್ಯ​ನಿ​ರತ ಪತ್ರ​ಕರ್ತರ ಸಂಘದಿಂದ ನಗ​ರದ ಅಂಬೇ​ಡ್ಕರ್‌ ಭವ​ನ​ದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರ​ಕರ್ತರ ಸಮ್ಮೇ​ಳನ. ನೂತನ ಜಿಲ್ಲಾ​ಧ್ಯ​ಕ್ಷರ ಪದ​ಗ್ರ​ಹಣ, ಅಭಿ​ನಂದನೆ, ಉಸ್ತು​ವಾರಿ ಸಚಿ​ವ​ರೊಂದಿಗೆ ಸಂವಾದ ಹಾಗೂ ವಿಚಾರ ಸಂಕಿ​ರಣ ಕಾರ‍್ಯಕ್ರಮ ಉದ್ಘಾ​ಟಿಸಿ ಮಾತ​ನಾಡಿ, ಕೋವಿಡ್‌-19 ಹಿನ್ನೆಲೆ​ಯಲ್ಲಿ ಲಾಕ್‌ಡೌನ್‌ನಿಂದ ರೈತರು ಸೇರಿ​ದಂತೆ ಎಲ್ಲ ವರ್ಗದ ಜನತೆ ಸಂಕಷ್ಟಅನು​ಭ​ವಿ​ಸಿ​ದರು. ತರ​ಕಾರಿ ಬೆಳೆ​ಗಾ​ರರು ಸಹ ತಾವು ಬೆಳೆದ ಉತ್ಪ​ನ್ನ​ ಮಾರಾಟ ಮಾಡ​ಲಾ​ಗದೆ ತೊಂದರೆ ಅನು​ಭ​ವಿ​ಸಿ​ದರು. ಇದನ್ನು ಮನ​ಗಂಡು ತರ​ಕಾ​ರಿ​ಗ​ಳನ್ನು ರಫ್ತು ಮಾಡಲು ಯೋಜನೆ ರೂಪಿ​ಸ​ಲಾ​ಯಿತು. ಅಂದು ಶೇ.5.5ರಷ್ಟುತರ​ಕಾ​ರಿ​ಗ​ಳನ್ನು ಹೊರಗೆ ಕಳು​ಹಿ​ಸ​ಲಾ​ಗು​ತ್ತಿತ್ತು. ಇದು ಮಾಧ್ಯ​ಮ​ಗ​ಳಿಂದ ಸಾಧ್ಯ​ವಾ​ಯಿತು ಎಂದರು.

ಅಡಕೆ ಬೆಳೆಗಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಇದೇ ಮಾದ​ರಿ​ಯಲ್ಲಿ ರೇಷ್ಮೆ ಬೆಳೆ​ಗಾ​ರರು ತೊಂದರೆ ಅನು​ಭ​ವಿ​ಸು​ತ್ತಿ​ರು​ವು​ದನ್ನು ಕಂಡು ರೇಷ್ಮೆಗೂ ಹೆಚ್ಚಿನ ಉತ್ತೇ​ಜನ ನೀಡುವ ಸಲು​ವಾಗಿ ಯೋಜನೆ ರೂಪಿ​ಸ​ಲಾ​ಗಿದೆ. ಮೈಸೂರು ರೇಷ್ಮೆ ಸೀರೆಗೆ ಎಲ್ಲೆಡೆ ಹೆಚ್ಚಿ​ನ ಬೇಡಿಕೆ ಇದೆ. ಈ ಹಿನ್ನೆ​ಲೆ​ಯಲ್ಲಿ ಅಂತಾರಾಷ್ಟ್ರೀಯ ಮಾರು​ಕಟ್ಟೆನಿರ್ಮಿಸಲು ಚಿಂತನೆ ನಡೆ​ಸ​ಲಾ​ಗಿದೆ ಎಂದರು.

ಪತ್ರ​ಕರ್ತರಿಗೆ ವಿಮೆ:

ಕೋವಿಡ್‌-19 ಸಂಕಷ್ಟಸೇರಿ​ದಂತೆ ಹಲ​ವಾರು ಸಮ​ಸ್ಯೆ​ಗಳು ಬಂದರೂ ದಿಟ್ಟ​ತನ​ದಿಂದ ಪತ್ರ​ಕರ್ತರು ಕೆಲಸ ಮಾಡು​ತ್ತಾರೆ. ಇತ್ತೀ​ಚೆಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ವೇಳೆಯೂ ಸಹ ಕೆಳಗೆ ನಿಂತು ಫೋಟೋ, ವೀಡಿಯೋ ಚಿತ್ರೀ​ಕ​ರಣ ಮಾಡು​ವಂತಹ ಸಾಹ​ಸಕ್ಕೆ ಕೈಹಾ​ಕು​ತ್ತಾರೆ. ಒಂದು ವೇಳೆ ಅನಾ​ಹು​ತ​ಗ​ಳಾ​ದಲ್ಲಿ ಅಂತಹ ಪತ್ರ​ಕರ್ತರ ಕುಟುಂಬ​ಗಳು ಬೀದಿ ಪಾಲಾ​ಗು​ತ್ತವೆ. ಇದನ್ನು ಮನ​ಗಂಡು ಪತ್ರ​ಕರ್ತರಿಗೆ ರಾಷ್ಟ್ರೀಯ ವಿಮಾ ಯೋಜನೆ ರೂಪಿ​ಸಲು ಸರ್ಕಾರದ ಜೊತೆ ಚರ್ಚೆ ನಡೆ​ಸು​ವು​ದಾಗಿ ಭರ​ವಸೆ ನೀಡಿ​ದರು.

ಈ ಯೋಜ​ನೆ​ಯಿಂದಾಗಿ ಪತ್ರ​ಕರ್ತರ ಕುಟುಂಬ​ಕ್ಕೂ ಶಕ್ತಿ ದೊರೆ​ಯು​ತ್ತದೆ. ಜೊತೆಗೆ ಅಂತಹ ಕುಟುಂಬ​ಗ​ಳಿಗೆ ಸರ್ಕಾರಿ ಕೆಲಸ ಇಲ್ಲವೇ ಬೇರೆ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚಿಸ​ಲಾ​ಗು​ವುದು ಎಂ​ದರು.

ಶೀಘ್ರವೇ ಮಹಾರಾಷ್ಟ್ರದಲ್ಲೂ ದೊಡ್ಡ ಸ್ಥಾನ:

ಬದುಕಿ​ಗಾಗಿ ಮಹಾ​ರಾ​ಷ್ಟ್ರಕ್ಕೆ ತೆರ​ಳಿದ್ದೆ. ಮಹಾ​ರಾ​ಷ್ಟ್ರ​ದಲ್ಲಿ ಕನ್ನ​ಡಿ​ಗರನ್ನು ಒಟ್ಟು​ಗೂ​ಡಿಸಿ ಅಲ್ಲೂ ರಾಜ್ಯೋ​ತ್ಸ​ವ ಸೇರಿ​ದಂತೆ ತಿಂಗ​ಳಿ​ಗೊಮ್ಮೆ ಕಾರ‍್ಯ​ಕ್ರಮಗಳನ್ನು ಹಮ್ಮಿ​ಕೊ​ಳ್ಳ​ಲಾ​ಗು​ತ್ತಿತ್ತು. ನಂತರ ಕೆ.ಆರ್‌.ಪೇಟೆ ತಾಲೂ​ಕಿ​ಗೆ ಆಗ​ಮಿಸಿ ಜನರ ಸೇವೆ ಮಾಡಿದ್ದೆ. ಮೂರು ಬಾರಿ ಶಾಸ​ಕ​ನಾಗಿ ಅಭಿ​ವೃ​ದ್ಧಿ ಕಾರ‍್ಯ​ಗ​ಳಲ್ಲಿ ತೊಡ​ಗಿ​ದ್ದೇನೆ. ನನ್ನ ಸಮಾಜ ಸೇವೆ​ ಗಮ​ನಿಸಿ ಮಹಾ​ರಾ​ಷ್ಟ್ರ​ದಲ್ಲೂ ನನಗೆ ದೊಡ್ಡ ಸ್ಥಾನ ದೊರೆ​ಯ​ಲಿದೆ ಎಂದು ವಿಶ್ವಾಸ ವ್ಯಕ್ತ​ಪ​ಡಿ​ಸಿ​ದರು.

ಧ್ವನಿ ಇಲ್ಲದವರಿಗೆ ಧ್ವನಿಯಾಗಿ:

ಜಿಲ್ಲಾ​ಧಿಕಾರಿ ಡಾ.ಎಂ.ವಿ. ವೆಂಕ​ಟೇಶ್‌ ಮಾತ​ನಾಡಿ, ಪತ್ರ​ಕರ್ತರು ಸಮಾ​ಜದ ಧ್ವನಿ​ಯಾಗಿ ಕೆಲಸ ಮಾಡ​ಬೇಕು. ದನಿ ಇಲ್ಲ​ದ​ವ​ರಿಗೆ ಧ್ವನಿ ನೀಡ​ಬೇಕು. ಸಂವೇದನಾಶೀಲತೆ, ಬದ್ಧ​ತೆ​ಯಿಂದ ಕೆಲಸ ಮಾಡ​ಬೇಕು ಎಂದರು.

ನಾಲ್ಕನೇ ಅಂಗ​ವಾ​ಗಿ​ರುವ ಮಾಧ್ಯಮ ಕ್ಷೇತ್ರ ಪ್ರಜಾ​ಪ್ರ​ಭುತ್ವ ವ್ಯವ​ಸ್ಥೆ​ಯನ್ನು ಗಟ್ಟಿ​ಗೊ​ಳಿ​ಸು​ತ್ತಿದೆ. ಚುನಾ​ವ​ಣೆ​ಗಳು ಶಾಂತಿ​ಯು​ತ​ವಾಗಿ ನಡೆ​ಯು​ವಂತಾ​ಗಲು ಮಾಧ್ಯಮದವರ ಕಾರ‍್ಯ​ವೈ​ಖ​ರಿಯೇ ಕಾರಣ ಎಂದರು.

ಮಾಧ್ಯ​ಮ​ದ​ವರಿಗೂ ಕಷ್ಟ, ದುಃಖ, ದುಮ್ಮಾ​ನ​ಗ​ಳನ್ನು ಎದು​ರಿ​ಸು​ತ್ತಿ​ದ್ದಾರೆ. ಇದ​ರೊಂದಿಗೆ ಇತ್ತೀ​ಚಿನ ದಿನ​ಗ​ಳಲ್ಲಿ ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲಿ ಕೆಟ್ಟಸಂದೇ​ಶ​ಗಳನ್ನು ರವಾ​ನಿಸಿ ಸಮಾ​ಜ​ವನ್ನು ತಪ್ಪು ದಾರಿಗೆ ತಳ್ಳು​ತ್ತಿ​ರು​ವುದು ಸಹ ಕಂಡು​ಬಂದಿದೆ. ಇಂತಹ ಸಂದರ್ಭದಲ್ಲಿ ಮಾಧ್ಯ​ಮ​ದ​ವರ ಪಾತ್ರ ಹೆಚ್ಚಿದೆ. ಅದನ್ನು ಜವಾ​ಬ್ದಾ​ರಿ​ಯು​ತ​ವಾಗಿ ನಿರ್ವಹಿ​ಸಬೇಕು ಎಂದು ಸಲಹೆ ನೀಡಿ​ದರು.

ಜಿಲ್ಲಾ ಪೊಲೀಸ್‌ ಅಧೀ​ಕ್ಷಕ ಕೆ.ಪರಶುರಾಮ ಮಾತನಾಡಿ, ಅಭ​ದ್ರ​ತೆ​ಗಳ ನಡುವೆ ಪತ್ರ​ಕರ್ತರು ಕೆಲಸ ಮಾಡು​ತ್ತಿ​ದ್ದಾರೆ. ಅವರಿಗೂ ಭದ್ರತೆ ಒದ​ಗಿ​ಸು​ವುದು ಸಮಾ​ಜದ ಕರ್ತವ್ಯ. ಈ ಬಗ್ಗೆ ಹಲ​ವಾರು ದಿನ​ಗ​ಳಿಂದಲೂ ಚರ್ಚೆ ನಡೆ​ಯುತ್ತಿದ್ದು ಅದಕ್ಕೆ ಕಾನೂನಿನ ರೂಪ ನೀಡಬೇಕು ಎಂದು ಸಲಹೆ ನೀಡಿ​ದರು.

ಇದೇ ವೇಳೆ ಜಿಲ್ಲಾ ಕಾರ‍್ಯ​ನಿ​ರತ ಪತ್ರ​ಕರ್ತರ ಸಂಘದ ನಿಕ​ಟ​ಪೂರ್ವ ಅಧ್ಯಕ್ಷ ಕೆ.ಸಿ. ಮಂಜು​ನಾಥ್‌ ಅವರು ನೂತನ ಅಧ್ಯ​ಕ್ಷ ನವೀನ್‌ ಚಿಕ್ಕ​ಮಂಡ್ಯ ಅವ​ರಿಗೆ ಅಧಿ​ಕಾರ ಹಸ್ತಾಂತ​ರಿ​ಸಿ​ದರು. ಮಾಜಿ ಅಧ್ಯ​ಕ್ಷ​ರನ್ನು ಅಭಿ​ನಂದಿ​ಸ​ಲಾ​ಯಿತು.

ರಾಜ್ಯ ಕಾರ‍್ಯನಿರತ ಪತ್ರ​ಕರ್ತರ ಸಂಘದ ಉಪಾ​ಧ್ಯಕ್ಷ ಮತ್ತೀ​ಕೆರೆ ಜಯರಾಂ ಅಧ್ಯ​ಕ್ಷತೆ ವಹಿ​ಸಿ​ದ್ದರು. ಮುಡಾ ಅಧ್ಯಕ್ಷ ಕೆ. ಶ್ರೀನಿ​ವಾಸ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾ​ಯಕ ನಿರ್ದೇಶಕ ಟಿ.ಕೆ. ಹರೀಶ್‌, ಪತ್ರ​ಕರ್ತರಾದ ಅಣ್ಣೂರು ಲಕ್ಷ್ಮಣ್‌, ಪಿ.ಜೆ. ಚೈತ​ನ್ಯ​ಕು​ಮಾರ್‌, ಕೆ.ಎನ್‌. ರವಿ, ಕೃಷ್ಣ ಸ್ವರ್ಣಸಂದ್ರ, ಸೋಮ​ಶೇ​ಖರ್‌ ಕೆರ​ಗೋಡು, ಲಿಂಗ​ರಾಜು ಇತ​ರರು ಸಮಾ​ರಂಭ​ದಲ್ಲಿ ಭಾಗ​ವ​ಹಿ​ಸಿದ್ದರು.

Follow Us:
Download App:
  • android
  • ios