Asianet Suvarna News Asianet Suvarna News

ದೇವೇಗೌಡರ ಹಿನ್ನೆಲೆ ಗೊತ್ತು, ಬೆಂಗ್ಳೂರಲ್ಲಿ ಮಾತನಾಡುವೆ: ಸಿದ್ದರಾಮಯ್ಯ

ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ| ಕುಮಾರಸ್ವಾಮಿ ಹೇಳಿಕೆಗಳಿಗೆ ಬೆಂಗಳೂರಿನಲ್ಲಿಯೇ ಉತ್ತರ ಕೊಡುವೆ: ಸಿದ್ದು| 

Siddaramaiah React on H D Kumaraswamy Statement grg
Author
Bengaluru, First Published Dec 14, 2020, 1:34 PM IST

ಬಾಗಲಕೋಟೆ(ಡಿ.14): ನನಗೆ ದೇವೇಗೌಡರ ಬ್ಯಾಕ್‌ಗ್ರೌಂಡ್‌ ಏನು ಅನ್ನುವುದು ಗೊತ್ತಿದೆ. ಅದರ ಕುರಿತು ಬೆಂಗಳೂರಿನಲ್ಲಿಯೇ ಎಲ್ಲವನ್ನು ಮಾತನಾಡುತ್ತೇನೆ ಎಂದು ಮಾಜಿ ಸಿಎಂ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 

ಬಾದಾಮಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇನಾಮಿ ಆಸ್ತಿ ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಹೇಳಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಉತ್ತರ ನೀಡಿದ್ದಾರೆ.

ಅಂದು ಜೆಡಿಎಸ್‌ನಿಂದ ಉಚ್ಚಾಟನೆ ಮಾಡಿದ್ಯಾಕೆ? ಕಾರಣ ಬಹಿರಂಗಪಡಿಸಿದ ಸಿದ್ದು

ನನ್ನ ವಿರುದ್ಧ ಎಚ್‌.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗಳಿಗೆ ನಾನು ಇಲ್ಲಿ ಪ್ರತಿಕ್ರಿಯಿಸುವುದಿಲ್ಲ. ಬೆಂಗಳೂರಿನಲ್ಲಿಯೇ ಉತ್ತರ ಕೊಡುವೆ. ಬೇನಾಮಿ ಆಸ್ತಿ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವ ಕುಮಾರಸ್ವಾಮಿಯವರ ಕುರಿತು ಸಮಗ್ರವಾಗಿ ಮಾತನಾಡುವೆ ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios