ಯಡಿಯೂರಪ್ಪ ವಿರುದ್ಧ ಜೆಡಿಎಸ್ ನಾಯಕನ ನಾಯಕನ ಆಡಿಯೋ ಬಾಂಬ್/ ಬಿಜೆಪಿಯವರೆ ಆಪರೇಶನ್ ಕಮಲ ಆಡಿಯೋ ಬಿಡುಗಡೆಗೆ ಆಫರ್ ನೀಡಿದ್ದಾರೆ/ ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶರಣನಗೌಡ ಕಂದಕೂರ
ಕಲಬುರಗಿ[ಸೆ. 13] ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶರಣನಗೌಡ ಕಂದಕೂರ ಹೊಸ ಬಾಂಬ್ ಸಿಡಿಸಿದ್ದಾರೆ. ಆಪರೇಷನ್ ಕಮಲದ ಆಡಿಯೋ ಕೇಸ್ ರೀ ಓಪನ್ ಮಾಡಲು ಬಿಜೆಪಿ ಆಫರ್ ನೀಡಿದ್ದಾರೆ ಎನ್ನುವುದು ಕಂದಕೂರ ಅವರ ಆರೋಪ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಯಡಿಯೂರಪ್ಪ ಅವರಿಗೆ ನನ್ನ ಮುಖಾಂತರ ಬಿಜೆಪಿಗರೇ ಕುಣಿ ತೊಡಿದ್ದಾರೆ. ಗುರುಮಠಕಲ್ ನಲ್ಲಿ ಮಾತನಾಡಿ ಬಿಜೆಪಿ ಅಗ್ರಗಣ್ಯ ನಾಯಕರೊಬ್ಬರು ಕೇಸ್ ರಿ ಓಪನ್ ಮಾಡಲು ಕೇಳಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬಿಜೆಪಿ ಸೇರಲು ಸಜ್ಜಾದರಾ ರಾಜ್ಯದ ಕಾಂಗ್ರೆಸ್ ಶಾಸಕ?
ಬಿಎಸ್ ಯಡಿಯೂರಪ್ಪ ಹಿಂದೆ ಆಪರೇಶನ್ ಕಮಲ ಮಾಡುತ್ತ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿಗೆ ಆಮಿಷ ನೀಡಿದ್ದರು ಎಂದು ಆರೋಪಿಸಿದ್ದ ಶರಣನಗೌಡ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ಸ್ವತಃ ಸಿಎಂ ಕುಮಾರಸ್ವಾಮಿ ಪಕ್ಕದಲ್ಲಿ ಕೂರಿಸಿಕೊಂಡು ಆಡಿತೋ ಬಿಡುಗಡೆ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು.
