Asianet Suvarna News Asianet Suvarna News

ಸಿರುಗುಪ್ಪ: ಮಡಿತೇರು ಮುರಿದು ಬಿದ್ದು ಏಳು ಜನರಿಗೆ ಗಾಯ

ಎಳೆಯುವ ವೇಳೆ ತೇರು ಮುರಿದು ಬಿದ್ದು ಏಳು ಜನರಿಗೆ ಗಾಯ| ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಕೊತ್ತಲಚಿಂತೆಯಲ್ಲಿ ಘಟನೆ| 

Seven people were injured for Chariot collapsed in Ballari District
Author
Bengaluru, First Published Sep 9, 2020, 12:21 PM IST

ಬಳ್ಳಾರಿ(ಸೆ.09): ರಥೋತ್ಸವ ಅಂಗವಾಗಿ ನಡೆದ ಮಡಿತೇರು ಎಳೆಯುವ ವೇಳೆ ತೇರು ಮುರಿದು ಬಿದ್ದು ಏಳು ಜನರು ಗಾಯಗೊಂಡಿರುವ ಘಟನೆ ಸಿರುಗುಪ್ಪ ತಾಲೂಕಿನ ಕೊತ್ತಲಚಿಂತೆ ಗ್ರಾಮದಲ್ಲಿ ಜರುಗಿದೆ.

ಗುಂಡಪ್ಪಸ್ವಾಮಿ, ರಾಘವೇಂದ್ರ ರೆಡ್ಡಿ, ಲಕ್ಷ್ಮೇಕಾಂತ ರೆಡ್ಡಿ, ಮಹೇಶ ಹಾಗೂ ತಿಕ್ಕಯ್ಯ ಎಂಬುವರಿಗೆ ಹೆಚ್ಚಿನ ಗಾಯಗಳಾಗಿವೆ. ಈ ಪೈಕಿ ಮಹೇಶ ಎಂಬಾತ ತೀವ್ರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ವಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದಿಬ್ಬರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

Seven people were injured for Chariot collapsed in Ballari District

ಹರಪನಹಳ್ಳಿ: ಕೋವಿಡ್‌ ಸಂಕ​ಷ್ಟ​ದ​ಲ್ಲಿ ವೈದ್ಯರ ಕೊರ​ತೆ, ಆತಂಕ​ದಲ್ಲಿ ಜನತೆ

ಕೊತ್ತಲಚಿಂತೆ ಗ್ರಾಮದಲ್ಲಿ ಪ್ರತಿವರ್ಷದಂತೆ ನಡೆಯುವ ಶ್ರೀ ಹನುಮಂತಾವಧೂತರ ರಥೋತ್ಸವ ಮುನ್ನ ಮಂಗಳವಾರ ಮಡಿತೇರು ಎಳೆಯಲಾಗುತ್ತಿತ್ತು. ಇದೇ ವೇಳೆ ತೇರಿನ ಮೇಲ್ಭಾಗದ ಕಬ್ಬಿಣದ ಸರಳು ಮುರಿದಿದ್ದು ಕೂಡಲೇ ತೇರು ಕೆಳಗೆ ವಾಲಿ ಬಿದ್ದಿದ್ದು ಅಲ್ಲಿದ್ದವರು ಗಾಯಗೊಂಡಿದ್ದಾರೆ.
 

Follow Us:
Download App:
  • android
  • ios