Asianet Suvarna News Asianet Suvarna News

ವಿಜಯಪುರ: ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಇನ್ನಿಲ್ಲ

*  ವಯೋಸಹಜ ಕಾಯಿಲೆಯಿಂದ ಈಶ್ವರಚಂದ್ರ ಚಿಂತಾಮಣಿ ನಿಧನ
*  ಬಿಎಲ್‌ಡಿಇ ಆಸ್ಪತ್ರೆಗೆ ಮೃತದೇಹ ಹಸ್ತಾಂತರ
*  ಈಶ್ವರಚಂದ್ರ ಚಿಂತಾಮಣಿ ಅವರನ್ನ ಅರಸಿ ಬಂದಿದ್ದ ಪ್ರಶಸ್ತಿಗಳು
 

Senior Writer Eshwarchandra Chintamani Passed Away at Vijayapura grg
Author
Bengaluru, First Published Aug 9, 2021, 9:20 AM IST

ವಿಜಯಪುರ(ಆ.09): ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ಈಶ್ವರಚಂದ್ರ ಚಿಂತಾಮಣಿ(96) ಇಂದು(ಸೋಮವಾರ) ಬೆಳಗಿನ ಜಾವ 3 ಗಂಟೆಗೆ ನಗರದಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಈಶ್ವರಚಂದ್ರ ಚಿಂತಾಮಣಿ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 

ಸಾವಿಗೂ ಮುನ್ನ ಈಶ್ವರಚಂದ್ರ ಚಿಂತಾಮಣಿ ಮರಣಾನಂತರ ದೇಹದಾನ ಮಾಡುವುದಾಗಿ ವಾಗ್ದಾನ ನೀಡಿದ್ದರು. ಅದರಂತೆ ನಗರದ ಬಿಎಲ್‌ಡಿಇ ಆಸ್ಪತ್ರೆಗೆ ಇಂದು ಬೆಳಗ್ಗೆ 11 ಗಂಟೆಗೆ ಮೃತದೇಹ ಹಸ್ತಾಂತರಿಸಲಾಗುವುದು ಎಂದು ಕುಟುಂಬ ಮೂಲಗಳ ಮಾಹಿತಿ ಲಭ್ಯವಾಗಿದೆ. 

Senior Writer Eshwarchandra Chintamani Passed Away at Vijayapura grg

ಕನ್ನಡ ಚಿತ್ರರಂಗದ ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ!

ಈಶ್ವರಚಂದ್ರ ಚಿಂತಾಮಣಿ ಅವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನ ಪರಿಗಣಿಸಿ ಆದರ್ಶ ಶಿಕ್ಷಕ ರಾಷ್ಟ್ರ ಪ್ರಶಸ್ತಿ , ಜಾನಪದ ಅಕಾಡೆಮಿ ಪ್ರಶಸ್ತಿ, ಭಾರತ ಸರ್ಕಾರದಿಂದ ಫೆಲೋಶಿಪ್, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಮುಂತಾದವುಗಳು ಇವರನ್ನ ಅರಸಿ ಬಂದಿದ್ದವು.
 

Follow Us:
Download App:
  • android
  • ios