ರಾಸಲೀಲೆ ಕೇಸ್ : ಬಿಜೆಪಿಯಲ್ಲಿರುವ ರಮೇಶ್ ವಿರೋಧಿಗಳ ಬಗ್ಗೆ ಸತೀಶ್ ಎಚ್ಚರಿಕೆ
ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಡುಗಡೆಯಾಗಿದ್ದು ಮೊದಲ ಬಾರಿ ಸಹೋದರ ಹಾಗೂ ಕೈ ಮುಖಂಡ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯಲ್ಲಿರುವ ರಮೇಶ್ ವಿರೊಧಿಗಳ ಬಗ್ಗೆ ಎಚ್ಚರಿಸಿದ್ದಾರೆ.
ಬೆಳಗಾವಿ (ಮಾ.04): ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪದ ಮೇಲೆ ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪ್ರಕರಣದಲ್ಲಿ ನೈತಿಕತೆಯ ಒಂದು ಹಂತ ಮುಗಿದಿದೆ, ಇನ್ನೇನಿದ್ದರೂ ಕಾನೂನು ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಸೋದರನ ರಾಸಲೀಲೆ ಪ್ರಕರಣ ಬಹಿರಂಗವಾದ ಬಳಿಕ ಇದೇ ಮೊದಲ ಬಾರಿಗೆ ಗೋಕಾಕ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದಲ್ಲಿ ಜಾರಕಿಹೊಳಿ ಕುಟುಂಬ ಬೆರೆಸುವ ಅವಶ್ಯಕತೆ ಇಲ್ಲ. ಇದು ರಮೇಶ್ ಜಾರಕಿಹೊಳಿ ಅವರ ವೈಯಕ್ತಿಕ ವಿಚಾರ, ರಮೇಶ್ ಜಾರಕಿಹೊಳಿ ಮಂಗಳವಾರವೇ ರಾಜೀನಾಮೆ ನೀಡಿದ್ದರೆ ಚೆನ್ನಾಗಿರುತ್ತಿತ್ತು. ಯಾವುದೇ ಆರೋಪ ಬಂದಾಗ ತನಿಖೆ ಆಗುವವರೆಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು. ಆದಷ್ಟುಬೇಗ ಪೊಲೀಸರು ತನಿಖೆ ನಡೆಸಿ ಪ್ರಕರಣಕ್ಕೆ ಸಂಬಂಧಿಸಿ ಸತ್ಯಾಂಶ ಹೊರತರಬೇಕು. ಪ್ರಕರಣದಲ್ಲಿ ಈಗಾಗಲೇ ನೈತಿಕ ಹೊಣೆಹೊತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದಾರೆ. ಇನ್ನು ಮುಂದೆ ಅವರು ಕಾನೂನು ಹೋರಾಟ ಮಾಡಬೇಕು ಎಂದರು.
ಪಲ್ಲಂಗದಾಟ CD: ಬೇಸರಗೊಂಡು ಪಕ್ಷದ ಕಾರ್ಯಕ್ರಮದಿಂದ ದೂರ ಉಳಿದ ಸಹೋದರ ...
ಇದೇ ವೇಳೆ ರಮೇಶ್ ಜಾರಕಿಹೊಳಿಯವರ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಬೇಕು ಎಂದು ಅಭಿಪ್ರಾಯಪಟ್ಟಸಹೋದರ, ಅವರ ಪಕ್ಷದಲ್ಲೂ ಅವರಿಗೆ ಆಗದೇ ಇರುವವರು ಇರ್ತಾರೆ ಎಚ್ಚರಿಕೆಯಿಂದ ಇರಬೇಕು. ಐದಾರು ತಿಂಗಳಿಂದ ನಡೆದ ಘಟನೆ ಇದು. ಪೊಲೀಸರು ಆದಷ್ಟುಬೇಗ ತನಿಖೆ ಮಾಡಿ ಸತ್ಯಾಂಶ ಹೊರತರಬೇಕು ಎಂಬುದು ನಮ್ಮ ಆಗ್ರಹ ಎಂದರು.