Asianet Suvarna News Asianet Suvarna News

ರಾಸಲೀಲೆ ಕೇಸ್ : ಬಿಜೆಪಿಯಲ್ಲಿರುವ ರಮೇಶ್ ವಿರೋಧಿಗಳ ಬಗ್ಗೆ ಸತೀಶ್ ಎಚ್ಚರಿಕೆ

ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಿಡುಗಡೆಯಾಗಿದ್ದು ಮೊದಲ ಬಾರಿ ಸಹೋದರ ಹಾಗೂ ಕೈ ಮುಖಂಡ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯಲ್ಲಿರುವ ರಮೇಶ್ ವಿರೊಧಿಗಳ ಬಗ್ಗೆ ಎಚ್ಚರಿಸಿದ್ದಾರೆ. 

Satish Jarkiholi Reacts On Ramesh Jarkiholi scandal case snr
Author
Bengaluru, First Published Mar 4, 2021, 8:12 AM IST

ಬೆಳಗಾವಿ (ಮಾ.04):  ಯುವ​ತಿಯನ್ನು ಲೈಂಗಿ​ಕ​ವಾಗಿ ಬಳ​ಸಿ​ಕೊಂಡಿ​ರುವ ಆರೋ​ಪದ ಮೇಲೆ ನೈತಿಕ ಹೊಣೆ ಹೊತ್ತು ರಮೇಶ್‌ ಜಾರಕಿಹೊಳಿ ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪ್ರಕ​ರ​ಣ​ದಲ್ಲಿ ನೈತಿಕತೆಯ ಒಂದು ಹಂತ ಮುಗಿದಿದೆ, ಇನ್ನೇನಿದ್ದರೂ ಕಾನೂನು ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು.

ಸೋದ​ರನ ರಾಸ​ಲೀಲೆ ಪ್ರಕ​ರಣ ಬಹಿ​ರಂಗ​ವಾದ ಬಳಿಕ ಇದೇ ಮೊದಲ ಬಾರಿ​ಗೆ ಗೋಕಾಕ ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕ​ರ​ಣ​ದ​ಲ್ಲಿ ಜಾರಕಿಹೊಳಿ ಕುಟುಂಬ ಬೆರೆಸುವ ಅವಶ್ಯಕತೆ ಇಲ್ಲ. ಇದು ರಮೇಶ್‌ ಜಾರಕಿಹೊಳಿ ಅವರ ವೈಯಕ್ತಿಕ ವಿಚಾರ, ರಮೇಶ್‌ ಜಾರಕಿಹೊಳಿ ಮಂಗ​ಳ​ವಾ​ರ​ವೇ ರಾಜೀನಾಮೆ ನೀಡಿದ್ದರೆ ಚೆನ್ನಾ​ಗಿ​ರು​ತ್ತಿತ್ತು. ಯಾವುದೇ ಆರೋಪ ಬಂದಾಗ ತನಿಖೆ ಆಗುವವರೆಗೂ ತಮ್ಮ ಹುದ್ದೆಗೆ ರಾಜೀ​ನಾಮೆ ನೀಡ​ಬೇಕು. ಆದಷ್ಟುಬೇಗ ಪೊಲೀಸರು ತನಿಖೆ ನಡೆಸಿ ಪ್ರಕ​ರ​ಣಕ್ಕೆ ಸಂಬಂಧಿಸಿ ಸತ್ಯಾಂಶ ಹೊರತರಬೇಕು. ಪ್ರಕ​ರ​ಣ​ದಲ್ಲಿ ಈಗಾಗಲೇ ನೈತಿಕ ಹೊಣೆಹೊತ್ತು ರಮೇಶ್‌ ಜಾರ​ಕಿ​ಹೊಳಿ ರಾಜೀನಾಮೆ ನೀಡಿದ್ದಾರೆ. ಇನ್ನು ಮುಂದೆ ಅವರು ಕಾನೂನು ಹೋರಾಟ ಮಾಡಬೇಕು ಎಂದ​ರು.

ಪಲ್ಲಂಗದಾಟ CD: ಬೇಸರಗೊಂಡು ಪಕ್ಷದ ಕಾರ್ಯಕ್ರಮದಿಂದ ದೂರ ಉಳಿದ ಸಹೋದರ ...  

ಇದೇ ವೇಳೆ ರಮೇಶ್‌ ಜಾರಕಿಹೊಳಿಯವರ ರಾಜಕೀಯದಲ್ಲಿ ಸಾಕಷ್ಟು ಬದಲಾವಣೆ ಆಗಬೇಕು ಎಂದು ಅಭಿ​ಪ್ರಾ​ಯ​ಪ​ಟ್ಟಸಹೋ​ದರ, ಅವರ ಪಕ್ಷದಲ್ಲೂ ಅವ​ರಿಗೆ ಆಗದೇ ಇರುವವರು ಇರ್ತಾರೆ ಎಚ್ಚರಿಕೆಯಿಂದ ಇರಬೇಕು. ಐದಾರು ತಿಂಗಳಿಂದ ನಡೆದ ಘಟನೆ ಇದು. ಪೊಲೀಸರು ಆದಷ್ಟುಬೇಗ ತನಿಖೆ ಮಾಡಿ ಸತ್ಯಾಂಶ ಹೊರ​ತ​ರ​ಬೇಕು ಎಂಬುದು ನಮ್ಮ ಆಗ್ರಹ ಎಂದರು.

Follow Us:
Download App:
  • android
  • ios