Asianet Suvarna News Asianet Suvarna News

ರಾಯಚೂರು: ಮಾನ್ವಿ ಬಳಿ ಕಾರು-ಬೈಕ್‌ ಮಧ್ಯೆ ಅಪಘಾತ, ಆರ್‌ಎಂಪಿ ಡಾಕ್ಟರ್‌ ಸಾವು

ಮೃತ ರಾಘವೇಂದ್ರ ಆರ್‌ಎಂಪಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಅವರು ಮಾನ್ವಿಯಿಂದ ಸ್ವಗ್ರಾಮ ಚಿಮ್ಲಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ ರಾಯಚೂರಿನಿಂದ ಮಾನ್ವಿ ಕಡೆ ಹೊರಟಿದ್ದ ಕಾರಿನ ಮಧ್ಯೆ ಈ ಅವಘಡ ಸಂಭವಿಸಿದೆ. 
 

RMP Doctor Dies due to Car Bike Accident at Manvi in Raichur grg
Author
First Published Oct 18, 2024, 9:54 PM IST | Last Updated Oct 18, 2024, 9:54 PM IST

ರಾಯಚೂರು(ಅ.18):  ಕಾರು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಮ್ಲಾಪುರು ಕ್ರಾಸ್ ಬಳಿ ಇಂದು(ಶುಕ್ರವಾರ) ನಡೆದಿದೆ, ರಾಘವೇಂದ್ರ (37) ಮೃತ ಬೈಕ್ ಸವಾರ. 

ಮೃತ ರಾಘವೇಂದ್ರ ಆರ್‌ಎಂಪಿ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ರಾಘವೇಂದ್ರ ಅವರು ಮಾನ್ವಿಯಿಂದ ಸ್ವಗ್ರಾಮ ಚಿಮ್ಲಾಪುರಕ್ಕೆ ತೆರಳುತ್ತಿದ್ದರು. ಈ ವೇಳೆ ರಾಯಚೂರಿನಿಂದ ಮಾನ್ವಿ ಕಡೆ ಹೊರಟಿದ್ದ ಕಾರಿನ ಮಧ್ಯೆ ಈ ಅವಘಡ ಸಂಭವಿಸಿದೆ. 

ಅಪಘಾತ ಹಿನ್ನೆಲೆ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios