ಮಾಜಿ ಸೈನಿಕನಿಂದ ಗುಂಡಿನ ದಾಳಿ| ಮಾಜಿ ಸೈನಿಕ ಅಜಯ್ ಪ್ರಭು ಎಂಬಾತನಿಂದ ಕೃತ್ಯ| ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಮಠಕೇರಿ| ಹೋದರನ ಪತ್ನಿ ಹಾಗೂ ಮಗನ ಮೇಲೆ ಗುಂಡಿನ ದಾಳಿ| ಆರೋಪಿ ಅಜಯ್ ಪ್ರಭು ಬಂಧಿಸಿದ ಪೊಲೀಸರು|
ಅಂಕೋಲಾ(ಜು.27): ಕೌಟುಂಬಿಕ ಕಾರಣಕ್ಕೆ ಮಾಜಿ ಸೈನಿಕನೋರ್ವ ತನ್ನ ಸಹೋದರನ ಪತ್ನಿ ಹಾಗೂ ಮಗನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಅಂಕೋಲಾ ಪಟ್ಟಣದ ಮಠಕೇರಿಯಲ್ಲಿ ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಲ್ಲಿನ ಮಾಜಿ ಸೈನಿಕ ಅಜಯ್ ಪ್ರಭು ಎಂಬಾತ ಆತನ ಸಹೋದರನ ಪತ್ನಿ ಮತ್ತು ಮಗನ ಮೇಲೆ ಗುಂಡು ಹಾರಿಸಿದ್ದು, ಘಟನೆಗೆ ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ.
ಸದ್ಯ ಮಾಜಿ ಸೈನಿಕ ಅಜಯ್ ಪ್ರಭುನನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
