ತಮ್ಮ ಮನೆಯಲ್ಲಿದ್ದ ಜರ್ಮನ್ ಶಫರ್ಡ್ ತಳಿಯ ಮೂರು ಶ್ವಾನದ ಮರಿಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ 25 ಸಾವಿರ ರುಪಾಯಿ ಹಣವನ್ನು ನಿವೃತ್ತ ಪೊಲೀಸ್ ಕಾವೇರಪ್ಪ ಅವರು ಮುಖ್ಯಮಂತ್ರಿ ಅವರ ಕೋವಿಡ್ -19 ಪರಿಹಾರ ನಿಧಿಗೆ ಹಣ ನೀಡಿದ್ದಾರೆ.
ಮಡಿಕೇರಿ(ಏ.09): ತಮ್ಮ ಮನೆಯಲ್ಲಿದ್ದ ಜರ್ಮನ್ ಶಫರ್ಡ್ ತಳಿಯ ಮೂರು ಶ್ವಾನದ ಮರಿಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ 25 ಸಾವಿರ ರುಪಾಯಿ ಹಣವನ್ನು ನಿವೃತ್ತ ಪೊಲೀಸ್ ಕಾವೇರಪ್ಪ ಅವರು ಮುಖ್ಯಮಂತ್ರಿ ಅವರ ಕೋವಿಡ್ -19 ಪರಿಹಾರ ನಿಧಿಗೆ ಹಣ ನೀಡಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮಡಿಕೇರಿಯ ಕಾವೇರಪ್ಪ ಅವರು 20 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಮನೆಯಲ್ಲಿರುವ ಜರ್ಮನ್ ಶಫರ್ಡ್ ಶ್ವಾನ ಕೆಲವು ದಿನಗಳ ಹಿಂದೆ 13 ಮರಿಗಳನ್ನು ಹಾಕಿತ್ತು. ಅದರಲ್ಲಿ 5 ಮರಿ ಮೃತಪಟ್ಟಿದ್ದವು.
ಲಾಕ್ಡೌನ್ ಎಫೆಕ್ಟ್: ಸೆಲೂನ್ ಶಾಪ್ ಬಂದ್, ಮನೆ ಬಾಗಿಲಿಗೆ ಕ್ಷೌರಿಕರು!
ಉಳಿದ 8 ಶ್ವಾನದ ಮರಿಯಲ್ಲಿ 7 ಮರಿಗಳನ್ನು ಮಾರಾಟ ಮಾಡಿದ್ದಾರೆ. ಒಂದು ಮರಿಗೆ 9 ಸಾವಿರ ರುಪಾಯಿಯಂತೆ ಮಾರಾಟ ಮಾಡಿದ್ದು, 3 ಮರಿಗೆ ಬಂದ ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಬುಧವಾರ ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮೊತ್ತವನ್ನು ಹಸ್ತಾಂತರ ಮಾಡಿದರು.
