Asianet Suvarna News Asianet Suvarna News

ಲಾಕ್‌ಡೌನ್:‌ ಕೆಲಸ ಕಳೆದುಕೊಂಡವರಿಗಾಗಿ ಹೊಸ ಪ್ರಯತ್ನ, ನೋಂದಣಿ ಆರಂಭ

ಕೋವಿಡ್‌ -19 ತಡೆ​ಗ​ಟ್ಟಲು ಲಾಕ್‌ ಡೌನ್‌ ಜಾರಿ​ಯಾದ ನಂತರ ಮುಂದಿನ ಜೀವನ ಹಾಗೂ ಉದ್ಯೋಗದ ಬಗ್ಗೆ ಚಿಂತಿ​ಸು​ತ್ತಿ​ರುವ ಕಾರ್ಮಿ​ಕ​ರಿಗೆ ಉದ್ಯೋಗ ಕಲ್ಪಿ​ಸುವ ನಿಟ್ಟಿ​ನಲ್ಲಿ ಜಿಲ್ಲಾ​ಡ​ಳಿತ ನೋಂದಣಿ ಮಾಡಿ​ಕೊ​ಳ್ಳುವ ಮೂಲಕ ವಿನೂ​ತನ ಪ್ರಯ​ತ್ನಕ್ಕೆ ಮುಂದಾ​ಗಿದೆ.

Registration of workers started in Ramanagar
Author
Bangalore, First Published May 14, 2020, 3:22 PM IST

ರಾಮನಗರ(ಮೇ 14): ಕೋವಿಡ್‌ -19 ತಡೆ​ಗ​ಟ್ಟಲು ಲಾಕ್‌ ಡೌನ್‌ ಜಾರಿ​ಯಾದ ನಂತರ ಮುಂದಿನ ಜೀವನ ಹಾಗೂ ಉದ್ಯೋಗದ ಬಗ್ಗೆ ಚಿಂತಿ​ಸು​ತ್ತಿ​ರುವ ಕಾರ್ಮಿ​ಕ​ರಿಗೆ ಉದ್ಯೋಗ ಕಲ್ಪಿ​ಸುವ ನಿಟ್ಟಿ​ನಲ್ಲಿ ಜಿಲ್ಲಾ​ಡ​ಳಿತ ನೋಂದಣಿ ಮಾಡಿ​ಕೊ​ಳ್ಳುವ ಮೂಲಕ ವಿನೂ​ತನ ಪ್ರಯ​ತ್ನಕ್ಕೆ ಮುಂದಾ​ಗಿದೆ.

ಉದ್ಯೋಗದಾತರು ಹಾಗೂ ಕಾರ್ಮಿಕರ ನಡುವೆ ಮಾಹಿತಿ ವಿನಿಮಯ ಮಾಡಿ ಉದ್ಯೋಗವನ್ನು ಕಲ್ಪಿಸಲು ಜಿಲ್ಲಾಡಳಿತ ಕೈಗಾರಿಕೆಗಳು, ಕಾರ್ಮಿಕರು ಹಾಗೂ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಿಕೊಳ್ಳಲು ಮುಂದಾ​ಗಿದೆ.

ನೋಂದಣಿಗೆ ವೆಬ್‌ಸೈಟ್‌

ಜಿಲ್ಲೆಯಲ್ಲಿರುವ ಕಾರ್ಮಿಕರು ಹಾಗೂ ಬೇರೆ ರಾಜ್ಯ ಹಾಗೂ ಜಿಲ್ಲೆಗೆ ತೆರಳದೆ ಇಲ್ಲೇ ಉಳಿದಿರುವ ವಲಸೆ ಕಾರ್ಮಿಕರು https://sites.google.com/view/covid-19-ramanagara/home,ವೆಬ್‌ ಸೈಟ್‌ ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಯನ್ನು ಸಂಗ್ರಹಿಸಿ ಅವಶ್ಯಕತೆ ಇರುವ ವಿಭಾಗಗಳಲ್ಲಿ ಕಾರ್ಮಿಕರಿಗೆ ಕೆಲಸ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ.

ಬೀದರ್‌ನಲ್ಲಿನ ಬಿಹಾರಿಗಳಿಗೆ ಕಲಬುರಗಿಯಿಂದ ಶೀಘ್ರ ರೈಲು

ಜಿಲ್ಲೆಯಲ್ಲಿ ಕೈಗಾರಿಕೆಗಳು ಕಾರ್ಯಾರಂಭವಾಗಿದ್ದು, ಲಾಕ್‌ ಡೌನ್‌ ಅವಧಿಯಲ್ಲಿ ಕಾರ್ಮಿಕರು ತಮ್ಮ ಜಿಲ್ಲೆ ಹಾಗೂ ರಾಜ್ಯಗಳಿಗೆ ಹಿಂದಿರುಗಿರುವುದರಿಂದ ಅವರಿಗೂ ಸಹ ಕಾರ್ಮಿಕರ ಕೊರತೆ ಉಂಟಾಗಿರಬಹುದು. ಕೈಗಾರಿಕೆಗಳು ಸಹ ನೋಂದಣಿ ಮಾಡಿಕೊಂಡು ತಮಗೆ ಬೇಕಿರುವ ಕಾರ್ಮಿಕರ ವಿವರವನ್ನು ಪಡೆಯಬಹುದಾಗಿದೆ.

ಊರಿಗೆ ಹಿಂತಿರು​ಗು​ತ್ತಿ​ರುವ ಕಾರ್ಮಿ​ಕರು

ಕೊರೋನಾ ಲಾಕ್‌ ಡೌನ್‌ ಹಿನ್ನ​ಲೆ​ಯಲ್ಲಿ ಸಂಕ​ಷ್ಟಕ್ಕೆ ಸಿಲು​ಕಿ​ರುವ ಕಾರ್ಮಿ​ಕರು ತಮ್ಮ ಊರು​ಗ​ಳಿಗೆ ಹಿಂದಿ​ರು​ಗು​ತ್ತಿ​ದ್ದಾರೆ. ಕಳೆದ ವಾರ​ವಷ್ಟೇ 360 ಅಂತರ ಜಿಲ್ಲಾ ಕಾರ್ಮಿ​ಕ​ರಿಗೆ ಬಸ್‌ ಸೌಕರ್ಯ ಕಲ್ಪಿಸಿ ಕಳು​ಹಿ​ಸಿ​ಕೊ​ಡ​ಲಾ​ಗಿದ್ದು, ಇನ್ನೂ ಅನೇ​ಕರು ಊರು​ಗ​ಳಿಗೆ ತೆರ​ಳಲು ಬಯ​ಸು​ತ್ತಿ​ದ್ದಾರೆ. ಅಲ್ಲದೆ, ಉತ್ತರ ಪ್ರದೇಶ, ತಮಿ​ಳು​ನಾಡು, ಆಂಧ್ರ​ಪ್ರ​ದೇಶ, ಗುಜ​ರಾತ್‌ ಸೇರಿ​ದಂತೆ ವಿವಿಧ ರಾಜ್ಯ​ಗ​ಳಿಗೆ ಸೇರಿ​ರುವ ಕಾರ್ಮಿ​ಕರು ಸಹ ವಾಪ​ಸ್ಸಾ​ಗಲು ಹಾತೊ​ರೆ​ಯು​ತ್ತಿ​ದ್ದಾರೆ. ಆದರೆ, ಆನ್‌ ಲೈನ್‌ ನಲ್ಲಿ ನೋಂದಣಿ ಆದ​ವ​ರನ್ನು ಮಾತ್ರ ಅವ​ರ​ವರ ರಾಜ್ಯ​ಗ​ಳಿಂದ ಅನು​ಮತಿ ದೊರೆತ ನಂತ​ರ​ವಷ್ಟೇ ಕಳು​ಹಿ​ಸಿ​ಕೊ​ಡಲಾ​ಗು​ತ್ತಿ​ದೆ.

ಜಿಲ್ಲೆಯಲ್ಲೇ ಜೀವನೋಪಾಯ:

ಜಿಲ್ಲಾ ವ್ಯಾಪ್ತಿಯಲ್ಲಿ ಹೊರ ರಾಜ್ಯ/ ಜಿಲ್ಲೆಗಳಿಂದ ಬಂದು ರಾಮನಗರ ಜಿಲ್ಲೆಯಲ್ಲಿ ದುಡಿಯುತ್ತಿರುವ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರು ತಮ್ಮ ಸ್ವಂತ ಊರು ಅಥವಾ ಮೂಲ ಸ್ಥಳಗಳಿಗೆ ತೆರಳದೆ ಪ್ರಸ್ತುತ ಇರುವ ಸ್ಥಳದಲ್ಲಿಯೇ ಇದ್ದುಕೊಂಡು ದಿನನಿತ್ಯದ ಕರ್ತವ್ಯಗಳನ್ನು ನಿರ್ವಹಿಸಿಕೊಂಡು ಜೀವನೋಪಯವನ್ನು ಕಂಡುಕೊಳ್ಳುವಂತೆ ಜಿಲ್ಲಾಡಳಿತ ಕೋರಿದೆ.

ಲಾಕ್‌ ಡೌನ್‌ ವಿಧಿಸುವ ಮುಂಚಿನಿಂದಲೂ ವಿವಿಧ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ದುಡಿಯುವ ಉದ್ದೇಶ ಇಟ್ಟುಕೊಂಡು ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಇತರೆ ಕಾರ್ಮಿಕರು ರಾಮನಗರ ಜಿಲ್ಲೆಗೆ ಬಂದು ವಾಸಿಸುತ್ತಿದ್ದಾರೆ. ಆದರೆ , ಈ ಲಾಕ್‌ ಡೌನ್‌ ಅವಧಿಯಲ್ಲಿ ಹಲವು ಕೈಗಾರಿಕೆಗಳು, ಕಟ್ಟಡ ನಿರ್ಮಾಣ ಕಾಮಗಾರಿಗಳು ಹಾಗೂ ಇತರೆ ಕಾರ್ಯಗಳು ಸ್ಥಗಿತಗೊಂಡು ದುಡಿಯುವ ವರ್ಗಕ್ಕೆ ದುಡಿಮೆ ಇಲ್ಲದಂತಾಗಿತ್ತು.

ಕಾಮಗಾರಿಗಳು ಪುನರ್‌ ಆರಂಭ

ಈಗ ಕೇಂದ್ರ ಗೃಹ ಮಂತ್ರಾಲಯವು ಹಾಗೂ ಘನ ಸರ್ಕಾರವು ಇಂತಹ ವಲಸೆ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಮತ್ತು ಇತರೆ ಕಾರ್ಮಿಕರಿಗೆ ಕೆಲಸ ಮಾಡುವಂತಹ ಸನ್ನಿವೇಶ ಕಲ್ಪಿ​ಸಿ​ಕೊ​ಟ್ಟಿದೆ. ಕೈಗಾರಿಕೆಗಳು, ನಿರ್ಮಾಣ ಹಂತದ ಕಟ್ಟಡ ಕಾಮಗಾರಿಗಳು ಪುನರ್‌ ಪ್ರಾರಂಭಗೊಂಡಿವೆ.

ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಹಾಗೂ ಇತರೇ ಕಾರ್ಮಿಕರು ಧೃತ್ತಿಗೆಡದೆ ಅಥವಾ ಆತಂಕಕ್ಕೆ ಒಳಗಾಗದೆ ತಮ್ಮ ಸ್ವಂತ ಜಿಲ್ಲೆಗಳಿಗೆ/ ಮೂಲ ಸ್ಥಳಗಳಿಗೆ ತೆರಳದೆ ಈಗ ಎಲ್ಲಿ ವಾಸಿಸುತ್ತಿದ್ದಿರೆಯೋ ಅಲ್ಲಿಯೇ ವಾಸಿಸಿ ತಾವು ಎಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಿರೋ ಅಂತಹ ಸ್ಥಳಗಳಲ್ಲಿ/ಕಾರ್ಖಾನೆ/ಕೆಲಸದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ​ಡ​ಳಿತ ಮನವಿ ಮಾಡಿದೆ.

ಕಾರ್ಮಿಕರ ಜೊತೆ ಸಲಿಕೆ, ಗುದ್ದಲಿ ಹಿಡಿದು ಕೆಲಸ ಮಾಡಿದ IAS ಅಧಿಕಾರಿ..!

ರಾಮ​ನ​ಗರ ಜಿಲ್ಲೆ​ಯಲ್ಲಿ ಕೈಗಾ​ರಿ​ಕೆ​ಗಳು, ಕಾರ್ಮಿಕರು ಹಾಗೂ ವಲಸೆ ಕಾರ್ಮಿ​ಕ​ ನೋಂದಣಿ ಪ್ರಾರಂಭಿ​ಸಿ​ರುವ ವೆಬ್‌ ಸೈಟ್‌ ಗೆ ಚಾಲನೆ ನೀಡ​ಲಾ​ಗಿದೆ. ಕಾರ್ಖಾ​ನೆ​ಗಳ ಆಡ​ಳಿತ ಮಂಡ​ಳಿ​ಯೊಂದಿಗೂ ಚರ್ಚೆ ನಡೆ​ಸ​ಲಾ​ಗಿದೆ. ಜಿಲ್ಲೆ​ಯಲ್ಲಿ ಇಂದಿನ ತುರ್ತು ಅವ​ಧಿ​ಯಲ್ಲಿ ಕಾರ್ಮಿ​ಕ​ರಿಗೆ ಉದ್ಯೋಗ ಒದ​ಗಿ​ಸಲು ಪ್ರಯ​ತ್ನಿ​ಸ​ಲಾ​ಗು​ತ್ತಿದೆ. ಕಾರ್ಮಿ​ಕರು ವೆಬ್‌ ಸೈಟ್‌ ನಲ್ಲಿ ತಮ್ಮ ಹೆಸರು ನೋಂದಣಿ ಮಾಡಿ​ಕೊಂಡು ಸದು​ಪ​ಯೋಗ ಪಡಿ​ಸಿ​ಕೊ​ಳ್ಳ​ಬೇಕು ಎಂದು ಜಿಲ್ಲಾ​ಧಿ​ಕಾ​ರಿ​ ಎಂ.ಎಸ್‌ .ಅ​ರ್ಚನಾ ತಿಳಿಸಿದ್ದಾರೆ.

ಕೊರೋನಾ ಲಾಕ್‌ ಡೌನ್‌ ನಿಂದಾಗಿ ಕೈಗಾ​ರಿ​ಕೆ​ಗಳು ಹಾಗೂ ಕಾರ್ಮಿ​ಕರು ಸಂಕಷ್ಟಕ್ಕೆ ಸಿಲು​ಕಿ​ದ್ದಾರೆ. ಈಗ ಕಾರ್ಖಾ​ನೆ​ಗಳು ಉಳಿ​ಯ​ಬೇಕು, ಕಾರ್ಮಿ​ಕ​ರಿಗೂ ತೊಂದರೆ ಆಗ​ದಂತೆ ಕಾರ್ಯ​ನಿ​ರ್ವ​ಹಣೆ ಮಾಡು​ವುದು ಅತ್ಯ​ಗ​ತ್ಯ​ವಾ​ಗಿದೆ. ಕಂಪ​ನಿ​​ಗ​ಳಲ್ಲಿ ಕಾರ್ಮಿ​ಕರ ಕೊರತೆ ಉಂಟಾ​ದರೆ ಹಾಗೂ ಅವ​ಶ್ಯ​ಕತೆಯಿರುವ ಕಾರ್ಮಿ​ಕ​ರಿಗೆ ಕಂಪ​ನಿ​ಗ​ಳಲ್ಲಿ ಉದ್ಯೋ​ಗ ಅವ​ಕಾಶ ಕಲ್ಪಿ​ಸಲು ನೋಂದಣಿ ಪ್ರಕ್ರಿಯೆ ಸಹ​ಕಾ​ರಿ​ಯಾ​ಗ​ಲಿ​ದೆ. ವೇತನ ಪಾವತಿ, ಉದ್ಯೋ​ಗ​ದಿಂದ ವಜಾ​ದಂತಹ ಪ್ರಕ​ರ​ಣ​ಗಳ ದೂರು ಬಂದರು ಬಗೆ​ಹ​ರಿ​ಸ​ಲಾ​ಗು​ತ್ತದೆ ಎಂದು ಜಿಲ್ಲಾ ಕಾರ್ಮಿಕ ಅಧಿ​ಕಾ​ರಿ ಶೇಖರ್‌ ಎಸ್‌ .ಗ​ಡದ್‌ ಹೇಳಿದ್ದಾರೆ.

Follow Us:
Download App:
  • android
  • ios