ಮೈಸೂರು: ಯದುವೀರ್ ಭೇಟಿಯಾದ ರಾಮಲಲ್ಲಾ ಶಿಲ್ಪಿ ಅರುಣ್ ಯೋಗಿರಾಜ್ ಕುಟುಂಬ
ಅರುಣ್ ಅವರು ಅರಮನೆಗೆ ತೆರಳಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರನ್ನು ಕೂಡ ಭೇಟಿ ಯಾಗಿದ್ದರು. ಅವರು ಅರುಣ್ ಅವರನ್ನು ಅಭಿನಂದಿಸಿದರು.
![Ramlalla sculptor Arun Yogiraj Met Yaduveer Krishnadatta Chamaraja Wadiyar grg Ramlalla sculptor Arun Yogiraj Met Yaduveer Krishnadatta Chamaraja Wadiyar grg](https://static-ai.asianetnews.com/images/01hn237x526mv30ne4bgd10ws0/arun-yogiraj_363x203xt.jpg)
ಮೈಸೂರು(ಜ.26): ಕಳೆದ ಏಳು ತಿಂಗಳಿಂದ ಅಯೋಧ್ಯೆಯಲ್ಲಿ ಬಾಲರಾಮ ವಿಗ್ರಹ ಕೆತ್ತನೆಯಲ್ಲಿ ತೊಡಗಿಸಿ ಕೊಂಡಿದ್ದ ಶಿಲ್ಪಿ ಅರುಣ್ ಯೋಗಿರಾಜ್ ಗುರುವಾರ ಮೈಸೂರಿಗೆ ಆಗಮಿಸಿದರು.
ಬುಧವಾರ ಬೆಂಗಳೂರಿಗೆ ಬಂದಿದ್ದ ಅವರು ಇವತ್ತು ಮೈಸೂರಿಗೆ ಆಗಮಿಸಿದಾಗ ಅದ್ದೂರಿ ಸ್ವಾಗತ ದೊರೆಯಿತು.
ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತೀವಿ ಅಂದ ಪ್ರಧಾನಿ ಮೋದಿ ವಿಫಲ: ಸಿದ್ದರಾಮಯ್ಯ ಲೇವಡಿ
ಅರುಣ್ ಅವರು ಅರಮನೆಗೆ ತೆರಳಿ, ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಅವರನ್ನು ಕೂಡ ಭೇಟಿ ಯಾಗಿದ್ದರು. ಅವರು ಅರುಣ್ ಅವರನ್ನು ಅಭಿನಂದಿಸಿದರು. ಶುಕ್ರವಾರ ಬೆಳಗ್ಗೆ 9ಕ್ಕೆ ಅರುಣ್ ಅವರನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸನ್ಮಾನಿಸುವ ಕಾರ್ಯಕ್ರಮ ಇದೆ.