Asianet Suvarna News Asianet Suvarna News

ಬಸವಣ್ಣನ ಪ್ರತಿಮೆ ಭಗ್ನ: ಶಾಂತಿ ಕಾಪಾಡಲು ಮನವಿ

ಜಗಜ್ಯೋತಿ ಬಸವಣ್ಣ ಅವರ ಪ್ರತಿಮೆ ತಡ ರಾತ್ರಿ ಭಗ್ನಗೊಂಡಿದೆ ಎಂಬ ಸುದ್ದಿ ತಿಳಿದಿದೆ.  ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ. 

Ramadurga village tense after desecration of Basavanna statue snr
Author
Bengaluru, First Published Nov 9, 2020, 7:12 AM IST

ರಾಮದುರ್ಗ (ನ.9): ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಿಚಗುಪ್ಪ ಗ್ರಾಮದಲ್ಲಿನ ಜಗಜ್ಯೋತಿ ಬಸವಣ್ಣ ಅವರ ಪ್ರತಿಮೆ ತಡ ರಾತ್ರಿ ಭಗ್ನಗೊಂಡಿದೆ ಎಂಬ ಸುದ್ದಿ ತಿಳಿದಿದೆ.

 ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ಗ್ರಾಮಗಳಲ್ಲಿ ಶಾಂತಿ ಕದಡಲು ಕೆಲ ಸಮಾಜಘಾತುಕ ಶಕ್ತಿಗಳು ಇಂತಹ ಕೃತ್ಯವೆಸಗಿದ್ದಾರೆ. ಆರೋಪಿಗಳನ್ನು ಒಂದು ವಾರದಲ್ಲಿ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಶಾಸಕರು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಂಚಮಸಾಲಿ ಸ್ವಾಮೀಜಿ ವಿರುದ್ಧ ಪ್ರಮೋದ್ ಮುತಾಲಿಕ್ ಆಕ್ರೋಶ..!

ಜಿಲ್ಲೆಯಲ್ಲಿಯೇ ನಮ್ಮ ತಾಲೂಕು ಶಾಂತಿ, ಸಾಮರಸ್ಯ ಮತ್ತು ಸಹೋದರತ್ವದಡಿ ಎಲ್ಲರೂ ನಮ್ಮವರೆ ಎಂಬ ಬಸವಣ್ಣವರ ತತ್ವದಂತೆ ಜೀವನ ನಡೆಸುತ್ತಿದ್ದಾರೆ. ಆದರೆ, ಇಂತಹ ಘಟನೆ ಸಂಭವಿಸಿದ್ದು ಖಂಡನೀಯ ಎಂದು ವಿಷಾದ ವ್ಯಕ್ತಪಡಿಸಿದರು. ಸಮಾಜದ ಮುಖಂಡರು ಹಾಗೂ ಯುವಕರು ಶಾಂತತೆ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

Follow Us:
Download App:
  • android
  • ios