Asianet Suvarna News Asianet Suvarna News

ಎರಡು ಸೋಲಿನ ಬೆನ್ನಲ್ಲೇ ಡಿಕೆಶಿಗೆ ಮತ್ತೊಂದು ಸೋಲಿನ ಆಘಾತ

ರಾಜ್ಯದಲ್ಲಿ ಎರಡು ಉಪ ಚುನಾವಣೆ ಕ್ಷೇತ್ರಗಳನ್ನು  ಕಳೆದುಕೊಂಡ ಬೆನ್ನಲ್ಲೇ ಇದೀಗ ಡಿಕೆಶಿ ಮತ್ತೊಂದು ಸೋಲಿನ ಆಘಾತ ಎದುರಾಗಿದೆ. 

Puttanna Won in Bengaluru Teachers Constituency Election snr
Author
Bengaluru, First Published Nov 11, 2020, 3:29 PM IST

ವರದಿ : ಎಂ ಅಫ್ರೋಜ್ ಖಾನ್‌
 
ರಾಮ​ನ​ಗರ (ನ.11):  
ತೀವ್ರ ಕುತೂ​ಹಲ ಕೆರ​ಳಿ​ಸಿದ್ದ ವಿಧಾನ ಪರಿ​ಷತ್‌ನ ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ ಚುನಾ​ವ​ಣೆ​ಯಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ವೈಯ​ಕ್ತಿಕ ವರ್ಚ​ಸ್ಸಿನಿಂದ ಮತ್ತೊಮ್ಮೆ ಗೆಲು​ವಿನ ನಗೆ ಬೀರಿ​ದ್ದಾರೆ.

ಬೆಂಗ​ಳೂರು ಶಿಕ್ಷ​ಕರ ಕ್ಷೇತ್ರ​ದಿಂದ ಹ್ಯಾಟ್ರಿಕ್‌ ಗೆಲುವು ಕಂಡಿದ್ದ ಪುಟ್ಟಣ್ಣ ನಾಲ್ಕನೇ ಬಾರಿಗೆ ಕಮಲ ಹಿಡಿದು ಮೇಲ್ಮನೆ ಪ್ರವೇ​ಶಿ​ಸು​ತ್ತಿದ್ದಾರೆ. ಈ ಮೂಲಕ ವಿರೋ​ಧಿ​ಗ​ಳಿಗೆ ​ಕ್ಷೇತ್ರ​ದಲ್ಲಿ ತಮ್ಮ ಪ್ರಾಬ​ಲ್ಯ​ ಏನೆಂಬು​ದನ್ನು ಸಾಬೀತುಪಡಿ​ಸಿ ತೋರಿ​ಸಿ​ದ್ದಾ​ರೆ.

"

ಜೆಡಿ​ಎಸ್‌ನಿಂದ ಉಚ್ಛಾಟನೆಗೊಂಡಿದ್ದ ಪುಟ್ಟಣ್ಣ ಅವ​ರ​ನ್ನು ಬಿಜೆಪಿ ತನ್ನತ್ತ ಸೆಳೆ​ದು​ಕೊಂಡು ಅಭ್ಯ​ರ್ಥಿ​ಯಾಗಿ ಘೋಷಿ​ಸಿತು. ಜೆಡಿ​ಎಸ್‌ ವರಿ​ಷ್ಠರು ಕ್ಷೇತ್ರ​ದಲ್ಲಿ ಪಾರಮ್ಯ ಮುಂದು​ವ​ರಿ​ಸಲು ಬೆಂಗ​ಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.​ರಂಗ​ನಾಥ್‌ ಅವ​ರಿಗೆ ಮಣೆ ಹಾಕಿದರೆ, ಕಾಂಗ್ರೆಸ್‌ ಪಕ್ಷ ಹೊಸ ಮುಖ ಪ್ರವೀಣ್‌ ಕುಮಾರ್‌ ಅವ​ರನ್ನು ಅಖಾ​ಡಕ್ಕೆ ಇಳಿ​ಸಿ​ತು. ಈ ಚುನಾ​ವ​ಣೆ​ಯಲ್ಲಿ ಸಾಮಾ​ನ್ಯ​ವಾ​ಗಿ ಬಿಜೆಪಿ ಮತ್ತು ಜೆಡಿ​ಎಸ್‌ ​ನ​ಡುವೆ ನೇರ ಹಣಾ​ಹಣಿ ನಡೆ​ಯು​ತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಕೂಡ ಹೊಸ ಮುಖಕ್ಕೆ ಅವ​ಕಾಶ ನೀಡಿದ್ದರಿಂದ ಪೈಪೋಟಿ ಕಂಡು ಬಂದಿತು. ಮೂರು ಪಕ್ಷ​ಗಳು ಕ್ಷೇತ್ರ​ವನ್ನು ತನ್ನ ತೆಕ್ಕೆಗೆ ತೆಗೆ​ದು​ಕೊ​ಳ್ಳಲು ಪ್ರತಿ​ಷ್ಠೆ​ಯನ್ನು ಪಣ​ಕ್ಕಿ​ರಿಸಿ ಪ್ರಬಲ ಪಟ್ಟು​ಗ​ಳನ್ನು ಹಾಕಿ​ದ್ದ​ರಿಂದ ತ್ರಿಕೋನ ಸ್ಪರ್ಧೆ ಏರ್ಪ​ಟ್ಟು ಗಮನ ಸೆಳೆ​ದಿ​ತ್ತು.

ಬೆನ್ನಿಗೆ ನಿಂತ ಆಡ​ಳಿತ ಮಂಡ​ಳಿ​ಗಳು:

2002ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ ಅವರು, ಮೂರು ಬಾರಿ ನಿರಂತರವಾಗಿ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಂಡಿದ್ದರು. ಪಕ್ಷ, ಜಾತಿ, ಧರ್ಮದ ಹಂಗಿ​ಲ್ಲದೆ ಮಾಡಿ​ರುವ ನಿಸ್ವಾರ್ಥ ಸೇವೆ ಜತೆಗೆ ಪಕ್ಷದ ವರ್ಚಸ್ಸು ತಮ್ಮ ಗೆಲು​ವಿಗೆ ಸಹ​ಕಾ​ರಿ​ಯಾ​ಗ​ಲಿದೆ ಎಂಬ ಪುಟ್ಟಣ್ಣರವರ ನಂಬಿಕೆ ಹುಸಿ​ಯಾ​ಗ​ಲಿ​ಲ್ಲ. ಆದರೆ, ಈ ಚುನಾ​ವ​ಣೆ​ಯಲ್ಲಿ ಪಕ್ಷ​ಕ್ಕಿಂತ ಪುಟ್ಟ​ಣ್ಣರ​ವರ ವೈಯ​ಕ್ತಿಕ ವರ್ಚಸ್ಸು ಮತ​ಗ​ಳಾಗಿ ಪರಿ​ವ​ರ್ತ​ನೆ​ಯಾ​ದವು ಎನ್ನು​ತ್ತಾರೆ ಮತ​ದಾರ ಶಿಕ್ಷ​ಕ​ರು.

'ನಿಖಿಲ್ ಕುಮಾರಸ್ವಾಮಿ ವಿರುದ್ಧ ಗರಂ : ಅನಿತಾ ವಿರುದ್ಧವೂ ಅಸಮಾಧಾನ'

ಮಂಡಿ​ಯೂ​ರಿದ ​ರಂಗ - ಪ್ರವೀ​ಣ:

ಕ್ಷೇತ್ರ​ದಲ್ಲಿ ಪುಟ್ಟ​ಣ್ಣ ಜೆಡಿ​ಎಸ್‌ನಿಂದಲೇ ಗೆಲ್ಲುತ್ತಾ ಬಂದಿದ್ದ​ವರು. ಹೀಗಾಗಿ ತಮ್ಮ ಗೆಲು​ವು ಸುಲ​ಭ​ವೆಂದು ಜೆಡಿಎಸ್‌ನ ರಂಗ​ನಾಥ್‌ ಭಾವಿ​ಸಿ​ದ್ದರು. ವೈಯ​ಕ್ತಿಕ ಬಲ​ಕ್ಕಿಂತಲೂ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾ​ರ​ಸ್ವಾಮಿ ವರ್ಚ​ಸ್ಸನ್ನು ನಂಬಿ​ಕೊಂಡಿದ್ದರು. ಆದರೂ ಚುನಾ​ವ​ಣೆ​ಯಲ್ಲಿ 5107 ಮತ​ಗ​ಳನ್ನು ಪಡೆದಿದ್ದಾ​ರೆ. ಇನ್ನು ಕಾಂಗ್ರೆಸ್‌ ಪಕ್ಷದ ನಾಮ​ಬ​ಲವನ್ನೇ ಶ್ರೀರಕ್ಷೆ ಮಾಡಿ​ಕೊಂಡಿದ್ದ ಪ್ರವೀಣ್‌ ಕುಮಾರ್‌ ಶಿಕ್ಷ​ಕರ ನಿರೀ​ಕ್ಷೆ​ಯಂತೆ ಕ್ಷೇತ್ರ​ದಲ್ಲಿ ಹೆಚ್ಚಿನ ಸದ್ದು ಮಾಡಲೇ ಇಲ್ಲ. ಕೇವಲ 782 ಮತ​ಗ​ಳನ್ನು ಪಡೆದು ​ತೀರಾ ಕಳಪೆ ಪ್ರದ​ರ್ಶ​ನ ತೋರಿ​ದ್ದಾ​ರೆ.

ಈ ಹಿಂದೆ ಬಿಜೆಪಿ ಅಥವಾ ಕಾಂಗ್ರೆಸ್‌ ಪಕ್ಷ ಆಡ​ಳಿ​ತ​ದ​ಲ್ಲಿ​ದ್ದರೂ ಪುಟ್ಟಣ್ಣ ಜೆಡಿ​ಎಸ್‌ನಿಂದ ಮೂರು ಬಾರಿ ಗೆಲುವು ಸಾಧಿ​ಸಿ​ದ್ದರು. ಆದ​ರೀ​ಗ ತೆನೆ ಭಾರ ಇಳಿಸಿ ಕಮಲ ಹಿಡಿದ ಪುಟ್ಟ​ಣ್ಣ​ ಅ​ವರ ರಾಜ​ಕೀಯ ಅನು​ಭ​ವದ ಎದುರು ಪಾಠ ಕಲಿ​ಸುವ ಹಂಬ​ಲ​ದ​ಲ್ಲಿ​ದ್ದ ದಳದ ರಂಗ​ನಾಥ್‌ ಹಾಗೂ ಕೈ ಪಾಳ​ಯದ ಪ್ರವೀಣ್‌ ಕುಮಾರ್‌ ಸೋತು ಮಂಡಿ​ಯೂ​ರಿದ್ದಾರೆ.

Follow Us:
Download App:
  • android
  • ios