Asianet Suvarna News Asianet Suvarna News

ತವರಿನ ಕನವರಿಕೆ : ಗರ್ಭಿಣಿ ಆತ್ಮಹತ್ಯೆಗೆ ಶರಣು

  • ತವರಿನ ಕನವರಿಕೆ - ಗರ್ಭಿಣಿ ಆತ್ಮಹತ್ಯೆಗೆ ಶರಣು
  • ಶಿವಮೊಗ್ಗ ಜಿಲ್ಲೆ ಹೊಳಲೂರು ಗ್ರಾಮದಲ್ಲಿ ಘಟನೆ
  • ಲಾಕ್‌ಡೌನ್‌ ಹಿನ್ನೆಲೆ ದೂರದ ಬೆಳಗಾವಿಗೆ ತೆರಳಲಾಗದೆ ನೊಂದು ಆತ್ಮಹತ್ಯೆ
pregnant Woman Commits Suicide in Shivamogga snr
Author
Bengaluru, First Published Jun 12, 2021, 3:42 PM IST

ಶಿವಮೊಗ್ಗ (ಜೂ.12): ಲಾಕ್‌ಡೌನ್‌ನಿಂದಾಗಿ ತವರು ಮನೆಗೆ ಹೋಗಲು ಸಾಧ್ಯವಾಗದೆ ಮನನೊಂದ ಗೃಹಿಣಿಯೊಬ್ಬರು  ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ  ಶರಣಾಗಿದ್ದಾಳೆ. 

ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದಲ್ಲಿ ಶುಕ್ರವಾರ ಈ ದುರ್ಘಟನೆ ನಡೆದಿದೆ. 

ಭೀಮವ್ವ (22) ಮೃತ ಮಹಿಳೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಭೀಮವ್ವ ಮತ್ತು ಗೋಕಾಕ್‌ನಲ್ಲಿ ಕೆಲಸ ಮಾಡುತ್ತಿದ್ದ  ಹೊಳಲೂರಿನ ಪವನ ಪರಸ್ಪರ ಪ್ರೀತಿಸಿ 10 ತಿಂಗಳ ಹಿಂದೆ ಮದುವೆಯಾಗಿದ್ದರು. 

ಹಾಸನ: ಕೊರೋನಾ ಬಂದಿದ್ದಕ್ಕೆ ನದಿಗೆ ಹಾರಿ ಆತ್ಮಹತ್ಯೆ ..

ಮದುವೆಯಾಗಿ ಇಲ್ಲಿಗೆ ಬಂದ ಬಳಿಕ ತವರಿಗೆ ಹೋಗಲಾಗಿರಲಿಲ್ಲ. ಭೀಮವ್ವ 4 ತಿಂಗಳ ಗರ್ಭಿಣಿಯಾಗಿದ್ದರು. ತವರಿಗೆ  ಹೋಗಬೇಕೆಂದು ಆಕೆ ಪದೇ ಪದೇ ಕನವರಿಸುತ್ತಿದ್ದಳು.

ಆದರೆ ಲಾಕ್‌ಡೌನ್‌ ಕಾರಣದಿಂದಾಗಿ ಬಸ್  ಸಂಚಾರ ಇಲ್ಲದೆ ಸಾಧ್ಯವಾಗಿರಲಿಲ್ಲ. ಭೀಮವ್ವ ಹಠ ಹಿಡಿದಿದ್ದರಿಂದ ಪವನ್ ಮನ ಒಲಿಸಿದರೂ ಕೇಳದೆ ಬಸ್ ಇದ್ದದಿದ್ದರೆ ಬೈಕ್‌ನಲ್ಲಿಯೇ ಕರೆದೊಯ್ಯುವಂತೆ ಒತ್ತಾಯಿಸಿದ್ದರು. 

ಈ ವಿಷಯವಾಗಿ  ಚಿಕ್ಕದಾಗಿ ಇಬ್ಬರ ನಡುವೆ ಜಗಳವಾಗಿದೆ ಎನ್ನಲಾಗಿದೆ. ಆದರೆ ಶುಕ್ರವಾರ ಭೀಮವ್ವ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.  ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ. 

Follow Us:
Download App:
  • android
  • ios