Asianet Suvarna News Asianet Suvarna News

ಉಪಚುನಾಣೆ : ಮುತಾ​ಲಿಕ್‌ಗೆ ಸಿಗಲಿದೆಯಾ ಟಿಕೆಟ್..?

ರಾಜ್ಯದಲ್ಲಿ ಲೋಕಸಭಾ ಉಪ ಚುಣಾವಣೆ ಸದ್ದು ಜೋರಾಗುತ್ತಿದ್ದು ಇದೇ ವೇಳೆ ಮುತಾಲಿಕ್‌ ಅವರು ಕೂಡ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ. 

Pramod Muthalik Demands By Election Lok Sabha Ticket from Belagavi snr
Author
Bengaluru, First Published Feb 28, 2021, 9:49 AM IST

ವಿಜಯಪುರ (ಫೆ.28): ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಸ್ಪರ್ಧಿಸಲು ನನಗೆ ಬಿಜೆಪಿಯಿಂದ ಟಿಕೆಟ್‌ ನೀಡಬೇಕು ಎಂದು ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಮನವಿ ಮಾಡಿ​ದ್ದಾರೆ. 

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಸುರೇಶ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದು, ಈ ಸಂಬಂಧ ನಾನು ಈಗಾಗಲೇ ಬಿಜೆಪಿ ನಾಯಕರಿಗೆ ಮನವಿ ಮಾಡಿರುವು​ದಾ​ಗಿ ತಿಳಿ​ಸಿ​ದರು. 

ಬಾಬರ್‌ ಅನುಯಾಯಿಗಳಾದ PFI ಸಂಘಟನೆಯವರು ರಾಕ್ಷಸ ಕುಲದವರು: ಮುತಾಲಿಕ್‌ ...

ಇನ್ನು ಮೂರು ವರ್ಷ ಅವಧಿಯಲ್ಲಿ ನಾನು ಜನಸೇವೆ ಸಲ್ಲಿಸಲು ಬಯಸಿದ್ದು ಬಿಜೆಪಿ ಹೈಕಮಾಂಡ್‌ ನನಗೆ ಅವಕಾಶ ಕಲ್ಪಿಸಿ ಕೊಡಬೇಕು. ಒಂದು ವೇಳೆ ನನಗೆ ಅವಕಾಶ ಕೊಡದಿದ್ದರೂ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದರು.

Follow Us:
Download App:
  • android
  • ios