ಪಿಎಫ್ಐ ವಿರುದ್ಧ ಮುತಾಲಿಕ್ ಆಕ್ರೋಶ| ಹಿಂದೂ ಸಮಾಜ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದೆ| ಆರ್ಎಸ್ಎಸ್ ಬಗ್ಗೆ ಮಾತನಾಡೋರು ನಾಲಾಯಕ್|
ಧಾರವಾಡ(ಫೆ.20): ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವುದು ರಾಮಮಂದಿರವಲ್ಲ. ಅದು ಆರ್ಎಸ್ಎಸ್ ಮಂದಿರ. ಆದ್ದರಿಂದ ಈ ಮಂದಿರ ನಿರ್ಮಾಣಕ್ಕೆ ಮುಸ್ಲಿಂ ಬಂಧುಗಳು ದೇಣಿಗೆ ನೀಡಬೇಡಿ ಎಂದು ಪಿಎಫ್ಐ ಸಂಘಟನೆ ನೀಡಿದ ಹೇಳಿಕೆಯನ್ನು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಖಂಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮಂದಿರದ ಪರವಾಗಿ ಮಾತನಾಡಲು ಯಾವ ಅರ್ಹತೆ ಇಲ್ಲ. ಬಾಬರ್ ಅನುಯಾಯಿಗಳಾದ ನೀವು ರಾಕ್ಷಸ ಕುಲದವರು. ಅಶಾಂತಿಯನ್ನು ಆರ್ಎಸ್ಎಸ್ ಮಾಡುತ್ತಿದೆ ಎಂದು ಹೇಳಿದ್ದು ನೀವು ಕೊಲೆಗಡುಕರು, ನಾಲಾಯಕರು. ರಾಕ್ಷಸನ ಬಾಯಲ್ಲಿ ಭಗವದ್ಗೀತೆ ಬಂದಂಗಾಗಿದೆ ಎಂದು ಕಿಡಿಕಾರಿದ್ದಾರೆ.
'ರೈತರ ಸಾಲ ಮರುಪಾವತಿಗೆ ನೋಟಿಸ್ ನೀಡಿದ್ರೆ ಬ್ಯಾಂಕ್ಗೆ ಬೀಗ'
ಸುಪ್ರೀಂಕೋರ್ಟ್ ಈ ಕುರಿತು ತೀರ್ಪು ನೀಡಿದ್ದು ಸರ್ಕಾರದ ವತಿಯಿಂದ ಟ್ರಸ್ಟ್ ರಚನೆ ಸಹ ಆಗಿದೆ. ಹಿಂದೂ ಸಮಾಜ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದೆ. ಹೀಗಿರುವಾಗ ಆರ್ಎಸ್ಎಸ್ ಬಗ್ಗೆ ಮಾತನಾಡೋರು ನಾಲಾಯಕ್ ಎಂದ ಪ್ರಮೋದ್ ಮುತಾಲಿಕ್ ಕಿಡಿ ಕಾಡಿದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 20, 2021, 1:45 PM IST