Asianet Suvarna News Asianet Suvarna News

'ರೈತರ ಸಾಲ ಮರುಪಾವತಿಗೆ ನೋಟಿಸ್‌ ನೀಡಿ​ದ್ರೆ ಬ್ಯಾಂಕ್‌ಗೆ ಬೀಗ'

ಕೆವಿಜಿ ಬ್ಯಾಂಕ್‌ನಲ್ಲಿ ರೈತರ ಸಭೆಯಲ್ಲಿ ಎಚ್ಚರಿಕೆ| ಸಾಲ​ದ ಮೇಲಿನ ಪೂರ್ಣ ಬಡ್ಡಿ, ಶೇ. 50ರಷ್ಟು ಅಸಲು ಮನ್ನಾಕ್ಕೆ ಆಗ್ರ​ಹ| 15 ದಿನ​ಗಳ ಒಳಗೆ ಬ್ಯಾಂಕ್‌ ಈ ಕುರಿತು ತೀರ್ಮಾನ ತೆಗೆ​ದು​ಕೊಂಡು ಬೇಡಿ​ಕೆ​ಗ​ಳಿಗೆ ಸ್ಪಂದನೆ ನೀಡ​ಬೇಕು| ರೈತ​ರಿಗೆ ಕಿರು​ಕುಳ ನೀಡು​ವಂತಿಲ್ಲ| 

Farmers Held Protest in Dharwad for Interest Waiver grg
Author
Bengaluru, First Published Feb 19, 2021, 12:41 PM IST

ಧಾರವಾಡ(ಫೆ.19): ಕರ್ನಾ​ಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ವ್ಯಾಪ್ತಿಯ ರೈತರು, ತಮ್ಮ ಸಾಲ​ವನ್ನು ಒಟಿ​ಎಸ್‌(ಒನ್‌ ಟೈಮ್‌ ಸೆಟ್ಲ​ಮೆಂಟ್‌) ಯೋಜನೆ ಅಡಿ ಸಂಪೂರ್ಣ ಬಡ್ಡಿ ಮನ್ನಾ ಮಾಡು​ವುದು, ಅಸ​ಲಿ​ನಲ್ಲಿ ಶೇ. 50ರಷ್ಟು ಕಡಿ​ತ​ಗೊ​ಳಿಸಿ ಉಳಿದ ಹಣ​ವನ್ನು ತುಂಬಲು ಆರು ತಿಂಗಳು ಸಮ​ಯಾ​ವ​ಕಾಶ ಕೋರಿ ಗುರು​ವಾರ ಬ್ಯಾಂಕ್‌ ಅಧಿ​ಕಾ​ರಿ​ಗ​ಳಿಗೆ ಆಗ್ರ​ಹಿ​ಸಿ​ದರು.

ಧಾರ​ವಾಡ ಸೇರಿ​ದಂತೆ ಬ್ಯಾಂಕ್‌ ವ್ಯಾಪ್ತಿಯ ಜಿಲ್ಲೆಯ ರೈತರು ಆಗ​ಮಿಸಿ ಈ ಕುರಿತು ಬ್ಯಾಂಕ್‌ ಆವ​ರ​ಣ​ದ​ಲ್ಲಿಯೇ ಬ್ಯಾಂಕ್‌ ಅಧ್ಯ​ಕ್ಷರು, ಮಹಾ​ಪ್ರ​ಬಂಧ​ಕರ ಸಮ್ಮು​ಖ​ದಲ್ಲಿ ರೈತರು ಸಭೆ ನಡೆಸಿ, ಕಳೆದ ಆರು ವರ್ಷ​ಗ​ಳಲ್ಲಿ ಬರ​ಗಾಲ, ಅತಿ​ವೃಷ್ಟಿ ಹಾಗೂ ಕೊರೋ​ನಾ​ದಿಂದ ರೈತರು ಕಂಗಾ​ಲಾ​ಗಿ​ದ್ದಾರೆ. ಈ ಮಧ್ಯೆ 2017ರಲ್ಲಿ ರಾಜ್ಯ ಸರ್ಕಾರ ಸಾಲಮನ್ನಾ ಯೋಜನೆ ಘೋಷಣೆ ಮಾಡಿ​ದ್ದ​ರಿಂದ ಬಹು​ತೇಕ ರೈತರು ಸಾಲ​ವನ್ನು ಮರುಪಾವತಿ ಮಾಡಿಲ್ಲ. ಹೀಗಾಗಿ ಒಂದು ಲಕ್ಷ ರು. ಸಾಲ ಪಡೆದ ರೈತ​ರು ಬಡ್ಡಿ ಸಮೇತ ಐದಾರು ಲಕ್ಷ ತುಂಬುವ ಸ್ಥಿತಿ ಬಂದಿದೆ ಎಂದು ಅಧಿ​ಕಾ​ರಿ​ಗ​ಳಿಗೆ ರೈತ ಮುಖಂಡರು ಮನ​ವ​ರಿಕೆ ಮಾಡಿ​ದರು.

ಕೆವಿಜಿ ಬ್ಯಾಂಕ್‌ ಹೊರತುಪಡಿಸಿ ಉಳಿದ ಬ್ಯಾಂಕ್‌​ಗಳು ಬಡ್ಡಿ ಪೂರ್ತಿ ಮನ್ನಾ ಮಾಡಿ ಅಸ​ಲಿ​ನಲ್ಲೂ ಕಡಿ​ತ​ಗೊ​ಳಿಸಿ ರೈತ​ರಿಂದ ಬಾಕಿ ಮೊತ್ತ​ವನ್ನು ತುಂಬಿ​ಸಿ​ಕೊಂಡಿವೆ. ಅದೇ ರೀತಿ ಕೆವಿಜಿ ಬ್ಯಾಂಕ್‌ ಸಹ ರೈತರ ಬೇಡಿ​ಕೆ​ಗ​ಳಿಗೆ ಮನ್ನಣೆ ನೀಡ​ಬೇಕು. ಮೊದಲೇ ರೈತರು ಕಂಗಾ​ಲಾ​ಗಿದ್ದು, ಬ್ಯಾಂಕ್‌​ಗ​ಳಿಂದ ರೈತರ ಮನೆ​ಗ​ಳಿಗೆ ನೋಟಿಸ್‌ ಬರು​ತ್ತಿವೆ. ಇದ​ರಿಂದ ರೈತರು ಆತಂಕಕ್ಕೆ ಈಡಾ​ಗಿದ್ದು, ಕೂಡಲೇ ನೋಟಿಸ್‌ ನೀಡುವ ಪ್ರಕ್ರಿಯೆ ನಿಲ್ಲಿ​ಸ​ಬೇ​ಕೆಂದು ಆಗ್ರ​ಹಿ​ಸಿ​ದರು.
15 ದಿನ​ಗಳ ಒಳಗೆ ಬ್ಯಾಂಕ್‌ ಈ ಕುರಿತು ತೀರ್ಮಾನ ತೆಗೆ​ದು​ಕೊಂಡು ಬೇಡಿ​ಕೆ​ಗ​ಳಿಗೆ ಸ್ಪಂದನೆ ನೀಡ​ಬೇಕು. ಜತೆಗೆ ರೈತ​ರಿಗೆ ಕಿರು​ಕುಳ ನೀಡು​ವಂತಿಲ್ಲ. ಒಂದು ವೇಳೆ ರೈತ​ರಿಗೆ ನೋಟಿಸ್‌ ನೀಡಿ​ದರೆ ತಮ್ಮ ಶಾಖೆ​ಗ​ಳಿಗೆ ಬೀಗ ಹಾಕಿ ಪ್ರತಿ​ಭ​ಟಿ​ಸ​ಬೇ​ಕಾ​ಗು​ತ್ತದೆ ಎಂದು ಎಚ್ಚ​ರಿಕೆ ನೀಡಿ​ದರು.

ಮೂರುಸಾವಿರ ಮಠದ ವಿರುದ್ಧ ಅಪಪ್ರಚಾರ ಸಹಿಸಲ್ಲ

ರೈತರ ಮನವಿ ಸ್ವೀಕ​ರಿ​ಸಿದ ಬ್ಯಾಂಕ್‌ ಮಹಾ​ಪ್ರ​ಬಂಧಕ ರವಿ​ಚಂದ್ರನ್‌, ಕಟ​ಬಾಕಿ ಹೊಂದಿ​ರುವ ರೈತರ ಸಾಲವನ್ನು ಒಟಿ​ಎಸ್‌ ಮಾಡಲು ಅವ​ಕಾ​ಶ​ವಿದೆ. ಆದರೆ, ಅಸ​ಲಿ​ನಲ್ಲಿ ಶೇ. 50ರಷ್ಟು ಕಡಿತ ಮಾಡು​ವು​ದರ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಿ ತಮಗೆ ಶೀಘ್ರ ಮಾಹಿತಿ ನೀಡ​ಲಾ​ಗು​ವುದು ಎಂದು ಹೇಳಿ​ದರು.

ರೈತ ಮುಖಂಡ​ರಾದ ಭೀಮಪ್ಪ ಕಾಸಾಯಿ, ಶಂಕ​ರ​ಗೌಡ ಪಾಟೀಲ, ನಾಗಪ್ಪ ಕರ​ಲಿಂಗ​ಣ್ಣ​ವರ, ಎಂ.ಎ​ಸ್‌. ಯರ​ಗಂಬ​ಳಿ​ಮಠ, ಮಲ್ಲಿ​ಕಾ​ರ್ಜುನ ಕರ​ಡಿ​ಗುಡ್ಡ, ಗೌಡಪ್ಪ ಹೊಸ​ಮನಿ, ಮಲ್ಲಿ​ಕಾ​ರ್ಜುನ ಪಟಾತ್‌ ಮತ್ತಿ​ತ​ರ​ರು ಇದ್ದ​ರು.
 

Follow Us:
Download App:
  • android
  • ios