Asianet Suvarna News Asianet Suvarna News

ರಾಸಲೀಲೆ ಕೇಸ್ : ದಿನೇಶ್ ಮನೆಗೆ ಪೊಲೀಸ್‌ ಭದ್ರ​ತೆ

ಇತ್ತ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿಗಳು ಒಂದರ ಹಿಂದೆ ಒಂದು ಬಿಡುಗಡೆಯಾದವು. ಇದೇ ಬೆನ್ನಲ್ಲೇ ಹಲವು ರಾಜಕೀಯ ಮುಖಂಡರ ಮುಖವಾಡವೂ ಕಳಚುವ ಎಚ್ಚರಿಕೆ ನೀಡಿದ್ದು ಈ ನಿಟ್ಟಿನಲ್ಲಿ ದಿನೇಶ್ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. 

Police Security For Dimesh Kallahalli House in Ramanagara snr
Author
Bengaluru, First Published Mar 4, 2021, 8:03 AM IST

ರಾಮ​ನ​ಗರ (ಮಾ.04): ಜಲ​ಸಂಪ​ನ್ಮೂಲ ಸಚಿ​ವ​ರಾ​ಗಿದ್ದ ರಮೇಶ್‌ ಜಾರ​ಕಿ​ಹೊಳಿ ರಾಸ​ಲೀಲೆ ಪ್ರಕ​ರ​ಣದ ವಿರುದ್ಧ ಪೊಲೀಸ್‌ ಠಾಣೆ​ಯಲ್ಲಿ ದೂರು ದಾಖ​ಲಿ​ಸಿ​ರುವ ಸಾಮಾ​ಜಿಕ ಹೋರಾ​ಟ​ಗಾರ ದಿನೇಶ್‌ ಕಲ್ಲ​ಹಳ್ಳಿ ನಿವಾ​ಸಕ್ಕೆ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಗಿದೆ. 

ಕನ​ಕ​ಪುರ ತಾಲೂ​ಕಿನ ಕಲ್ಲ​ಹ​ಳ್ಳಿಯಲ್ಲಿ ದಿನೇಶ್‌ ಅವ​ರಿಗೆ ಸೇರಿದ ಮೂರಂತ​ಸ್ತಿನ ಮನೆಗೆ ಕನ​ಕ​ಪುರ ಗ್ರಾಮಾಂತರ ಪೊಲೀಸ್‌ ಠಾಣೆಯ ಇಬ್ಬರು ಪೊಲೀಸ್‌ ಪೇದೆ​ಗ​ಳನ್ನು ಬಂದೋ​ಬಸ್ತಿಗೆ ನಿಯೋ​ಜಿಸ​ಲಾ​ಗಿ​ದೆ. ಅಪ​ರಿ​ಚಿ​ತ​ರಿಂದ ಪ್ರಾಣ ಬೆದ​ರಿಕೆ ಕರೆ​ಗಳು, ಅನು​ಮಾನಾಸ್ಪದ ವ್ಯಕ್ತಿ​ಗಳು ಮನೆ ಬಳಿ ತಿರು​ಗಾ​ಡು​ತ್ತಿ​ರುವ ಬಗ್ಗೆ ದಿನೇಶ್‌ ಅವರು ಎಸ್ಪಿ ಗಿರೀಶ್‌ ಅವ​ರಿಗೆ ವಾಟ್ಸ್‌ಆಪ್‌ ಮೂಲಕ ದೂರು ಸಲ್ಲಿ​ಸಿ​ದ್ದರು.

ಸೀಡಿ ಹರಿಬಿಟ್ಟವರ ವಿರುದ್ಧ 100 ಕೋಟಿ ಕೇಸ್‌!

ಈ ಬಗ್ಗೆ ಪ್ರತಿ​ಕ್ರಿಯಿಸಿದ ಎಸ್ಪಿ ಗಿರೀಶ್‌ ರವರು, ದಿನೇಶ್‌ ಕಲ್ಲ​ಹ​ಳ್ಳಿ​ಯವರು ತಮಗೆ ಪ್ರಾಣ ಬೆದ​ರಿ​ಕೆ​ಯಿದ್ದು, ರಕ್ಷಣೆ ಒದ​ಗಿ​ಸು​ವಂತೆ ಕೋರಿ ಮೆಸೇಜ್‌ ಮಾಡಿ​ದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್‌ ಠಾಣೆ​ಯಲ್ಲಿ ದೂರು ದಾಖ​ಲಿ​ಸು​ವಂತೆ ಸೂಚನೆ ನೀಡಿ​ದ್ದೇನೆ. ಅವರು ದೂರು ಕೊಟ್ಟಿ​ರುವ ಹಿನ್ನೆ​ಲೆ​ಯಲ್ಲಿ ಪೊಲೀಸ್‌ ಭದ್ರತೆ ಕಲ್ಪಿ​ಸ​ಲಾ​ಗಿದೆ ಎಂದು ಹೇಳಿ​ದರು.

Follow Us:
Download App:
  • android
  • ios