ತ್ರಿಬಲ್ ರೈಡ್: ವಿದ್ಯಾರ್ಥಿಗಳಿಗೆ ಒದ್ದ ಪೊಲೀಸ್..! ಪತ್ರಕರ್ತನಿಗೂ ತರಾಟೆ
ತ್ರಿಬಲ್ ರೈಡ್ ಮಾಡಿದ ಮೂವರು ವಿದ್ಯಾರ್ಥಿಗಳಿಗೆ ಪೊಲೀಸರು ಥಳಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ತ್ರಿಬಲ್ ರೈಡಿಂಗ್ನಲ್ಲಿ ತೆರಳುತ್ತಿದ್ದಾಗ ನಡು ರಸ್ತೆಯಲ್ಲಿಯೆ ಪೊಲೀಸ್ ಅಧಿಕಾರಿಯೊಬ್ಬರು ಕಾಲಿನಿಂದ ಒದ್ದು ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ತುಮಕೂರು(ಆ.30): ಚಿಕಿತ್ಸೆಗಾಗಿ ಆಸ್ಪತ್ರೆಗೆ ತ್ರಿಬಲ್ ರೈಡಿಂಗ್ನಲ್ಲಿ ತೆರಳುತ್ತಿದ್ದಾಗ ನಡು ರಸ್ತೆಯಲ್ಲಿಯೆ ಪೊಲೀಸ್ ಅಧಿಕಾರಿಯೊಬ್ಬರು ಕಾಲಿನಿಂದ ಒದ್ದು ಥಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಥಳಿತದ ಸಂದರ್ಭದಲ್ಲಿ ಚಿತ್ರೀಕರಣ ಮಾಡಿದ ಪತ್ರಕರ್ತನಿಗೂ ಅವಾಚ್ಯ ಶಬ್ದಗಳಿಂದ ಪೊಲೀಸ್ ಅಧಿಕಾರಿ ನಿಂದಿಸಿದ್ದಾರೆ ಎನ್ನಲಾದ ಘಟನೆ ಪಾವಗಡ ಪಟ್ಟಣದಲ್ಲಿ ನಡೆದಿದೆ.
ಪಾವಗಡ ವೈ.ಇ.ರಂಗಯ್ಯ ಶೆಟ್ಟಿಸಕಾರ್ರಿ ಪ್ರಥಮ ದಜೆರ್ ಕಾಲೇಜಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದ ತಾಲೂಕಿನ ಶ್ರೀರಂಗಪುರದ ಹೇಮಂತ್ ಕುಮಾರ್, ಸಂದೀಪ್ ಹಾಗೂ ಫಣಿರಾಜ್ ಈ ಮೂರು ಮಂದಿ ವಿದ್ಯಾರ್ಥಿಗಳು ಆನಾರೋಗ್ಯಕ್ಕೆ ತುತ್ತಾದ ಸ್ನೇಹಿತ ಸಂದೀಪ್ಗೆ ಚಿಕಿತ್ಸೆ ಕೂಡಿಸುವ ಸಲುವಾಗಿ ತ್ರಿಬಲ್ ರೈಡಿಂಗ್ನಲ್ಲಿ ಹೋಗುತ್ತಿದ್ದರು.
ಪಟ್ಟಣದ ಚಳ್ಳಕರೆ ಕ್ರಾಸ್ನಿಂದ ಆಸ್ಪತ್ರೆಗೆ ಆಗಮಿಸುತ್ತಿರುವ ವೇಳೆ ಪೊಲೀಸ್ ಜೀಪು ಕಣ್ಣಿಗೆ ಬಿದ್ದಿದೆ. ಕೂಡಲೇ ಭಯಭೀತರಾದ ವಿದ್ಯಾಥಿರ್ಗಳು ಬೈಕ್ನಲ್ಲಿ ಪರಾರಿಯಾಗಿದ್ದಾರೆ. ಇದರಿಂದ ಸಂಶಯಗೊಂಡ ಪೊಲೀಸ್ ಅಧಿಕಾರಿ ಈ ವಿದ್ಯಾಥಿರ್ಗಳನ್ನು ಹಿಂಬಾಲಿಸಿ ಹಿಡಿದಿದ್ದಾರೆ. ನಂತರ ಕಾಲಿನಲ್ಲಿ ತಿಳಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸ್ದಿದಾರೆ.
ತುಮಕೂರು : ಜಿಲ್ಲಾ ಕಾಂಗ್ರೆಸ್ನಲ್ಲಿ ಭಿನ್ನಮತ ಸ್ಫೋಟ
ಈ ಘಟನೆ ಪತ್ರಕರ್ತ ಇಮ್ರಾನ್ ಕಣ್ಣಿಗೆ ಬಿದ್ದಿದೆ. ತಕ್ಷಣ ಆತ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದನ್ನು ನೋಡಿದ ಪೊಲೀಸ್ ಅಧಿಕಾರಿ ನೀನು ಯಾರು, ಯಾಕೆ ವಿಡಿಯೋ ಮಾಡುತ್ತಿರುವೆ ಎಂದು ಪ್ರಶ್ನಿಸಿದ್ದಾರೆ. ನಾನು ಪತ್ರಕರ್ತ ಎಂದು ಗುರುತಿನ ಚೀಟಿ ತೋರಿಸಿದ್ದರೂ ಲೆಕ್ಕಿಸದ ಅವರು, ವಿಡಿಯೋ ಮಾಡಬೇಡ. ವಿಡಿಯೋ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ತೆ. ನಿವೇನಿದ್ದರೂ ಠಾಣೆಗೆ ಬಂದು ಮಾಹಿತಿ ಪಡೆದುಕೊಳ್ಳಿ ಎಂದು ಅವಾಚ್ಯ ಶಬ್ದಗಳಿಂದ ಗದರಿಸಿದ್ದಾರೆ ಎಂದು ಪತ್ರಕರ್ತ ಆರೋಪಿಸಿದ್ದಾರೆ.
ಈ ಬಗ್ಗೆ ನ್ಯಾಯ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮತ್ತು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಪತ್ರಕರ್ತ ಇಮ್ರಾನ್ ತಿಳಿಸಿದ್ದಾರೆ.