ವಾಹನವೊಂದರಲ್ಲಿ ಅಕ್ರಮವಾಗಿ ಹಸುಗಳ ಸಾಗಾಟ| ಮೈಸೂರು ಜಿಲ್ಲೆಯ ಅತ್ತಿಗೋಡು ಗ್ರಾಮದಲ್ಲಿ ನಡೆದ ಘಟನೆ| ಖದೀಮರನ್ನ ಬಂಧಿಸಿದ ಬೆಟ್ಟದಪುರ ಪೊಲೀಸರು|

ಬೆಟ್ಟದಪುರ(ಜೂ.22): ವಾಹನವೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂರು ಹಸು ಹಾಗೂ 25 ಕರುಗಳನ್ನು ವಶಪಡಿಸಿಕೊಂಡ ಘಟನೆ ಅತ್ತಿಗೋಡು ಗ್ರಾಮದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆ ಬೆಟ್ಟದಪುರ ಪೊಲೀಸರು ದಾಳಿ ನಡೆಸಿ ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Add Asianetnews Kannada as a Preferred SourcegooglePreferred

ಹುಣಸೂರು ತಾಲೂಕಿನ ದರ್ಗಾ ನಿವಾಸಿ, ವಾಹನ ಚಾಲಕ ರೋಷನ್‌ ಷರೀಫ್‌, ಹಾಗೂ ಹಲಗನಹಳ್ಳಿ ಗ್ರಾಮದ ಅಹ್ಮದ್‌ ಹುಸೇನ್‌ ಬಂಧಿತ ಆರೋಪಿಗಳಾಗಿದ್ದಾರೆ. 

ಮೈಸೂರು: ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವತಿ

ಕಾರ್ಯಾಚರಣೆಯಲ್ಲಿ ಎಸ್‌ಐ ಪುಟ್ಟರಾಜು, ಸಿಬ್ಬಂದಿಗಳಾದ ದಿಲೀಪ್‌, ಮಂಜುನಾಥ್‌, ಶೇಖರ್‌, ರಘು, ರವೀಶ್‌ ಭಾಗವಹಿಸಿದ್ದರು.