Asianet Suvarna News Asianet Suvarna News

ಮೈಸೂರು: ಹೊಟ್ಟೆ ನೋವು ತಾಳಲಾರದೆ ಆತ್ಮಹತ್ಯೆಗೆ ಶರಣಾದ ಯುವತಿ

ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ| ಮೈಸೂರಿನ ವಿದ್ಯಾನಗರದಲ್ಲಿ ನಡೆದ ಘಟನೆ| ಈ ಸಂಬಂಧ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು|

Young woman Committed Suicide in  Mysuru
Author
Bengaluru, First Published Jun 22, 2020, 1:17 PM IST

ಮೈಸೂರು(ಜೂ.22): ಹೊಟ್ಟೆನೋವು ತಡೆಯಲಾಗದೆ ಯುವತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. 

ವಿದ್ಯಾನಗರದ ನಿವಾಸಿ ಸಂಜನಾ(21) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಎಂಸಿಎ ವ್ಯಾಸಂಗ ಮಾಡುತ್ತಿದ್ದ ಯುವತಿಗೆ ಪ್ರತಿ ತಿಂಗಳ ಋುತುಸ್ತ್ರಾವದ ವೇಳೆ ವಿಪರೀತ ಹೊಟ್ಟೆನೋವು ಬರುತ್ತಿತ್ತು. 

ಮಂಗಳಮುಖಿ ಎಂದು ಬಾಲಕನ ಅಣಕ, ನೊಂದವ ನೇಣಿಗೆ ಶರಣಾದ

ಈ ನೋವನ್ನು ತಡೆಯಲಾಗದ ಯುವತಿ ಶನಿವಾರ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios