ಹೋಂ ಕ್ವಾರಂಟೈನ್; ಊಟಕ್ಕೂ ಪರದಾಟ
ಕೊರೋನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಕಂಟೈನ್ಮೆಂಟ್ ಝೋನ್ಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಸೋಂಕಿತರ ಸಂಪಕರ್ದಲ್ಲಿದ್ದವರನ್ನು ಈಗಾಗಲೇ ಗೃಹ ಬಂಧನಲ್ಲಿಡಲಾಗಿದೆ. ಇದರಿಂದ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿಮಾರ್ಣವಾಗಿದೆ. ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲವೆಂದು ಕ್ವಾರಂಟೈನಲ್ಲಿದ್ದ ಹಲವಾರು ಬಡ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಪಾವಗಡ(ಜೂ.28): ಕೊರೋನಾ ಪಾಸಿಟಿವ್ ಬಂದಿದ್ದ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಕಂಟೈನ್ಮೆಂಟ್ ಝೋನ್ಗಳನ್ನು ಸೀಲ್ಡೌನ್ ಮಾಡಲಾಗಿದ್ದು, ಸೋಂಕಿತರ ಸಂಪಕರ್ದಲ್ಲಿದ್ದವರನ್ನು ಈಗಾಗಲೇ ಗೃಹ ಬಂಧನಲ್ಲಿಡಲಾಗಿದೆ. ಇದರಿಂದ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿಮಾರ್ಣವಾಗಿದೆ. ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲವೆಂದು ಕ್ವಾರಂಟೈನಲ್ಲಿದ್ದ ಹಲವಾರು ಬಡ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಇತ್ತೀಚೆಗಷ್ಟೆವಿಷಮ ಶೀತ ಜ್ವರ (ಐಎಲ್ಐ) ಹಾಗೂ ಉಸಿರಾಟದ ತೊಂದರೆ (ಸಾರಿ) ಸಮಸ್ಯೆ ಹಿನ್ನೆಲೆಯಲ್ಲಿ ಇಲ್ಲಿನ ಸಕಾರ್ರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ತಾಲೂಕಿನ ಕಣಿವೇನಹಳ್ಳಿ ತಾಂಡ, ಮದ್ದಿಬಂಡೆ ಶಾಂತಿ ಮತ್ತು ವಿನಾಯಕ ನಗರಗಳ ವಾಸಿ ಸೇರಿದಂತೆ ತಾಲೂಕಿನ ನಾಲ್ಕು ಮಂದಿಗೆ ಪ್ರಾಥಮಿಕ ವರದಿಯಲ್ಲಿ ಕೊರೋನಾ ಪಾಸಿಟಿವ್ ಲಕ್ಷಣ ಕಂಡು ಬಂದಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸ್ಫೋಟ: ಬೆಚ್ಚಿಬಿದ್ದ ಜನತೆ
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಸಜ್ಜಾದ ತಾಲೂಕು ಆಡಳಿತ ಜೂ.26ರಂದು ಈ ನಾಲ್ಕು ಮಂದಿ ಸೋಂಕಿತರನ್ನು ಪತ್ತೆ ಹಚ್ಚಿ ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಕೊವಿಡ್ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಸೋಂಕಿತರು ವಾಸವಿದ್ದ ಪ್ರದೇಶಗಳನ್ನು ಗುತಿರ್ಸಿ ಕಂಟೈನ್ಮೆಂಟ್ ಝೋನ್ಗಳಿಗೆ ಸೀಲ್ಡೌನ್ ಮಾಡಲಾಗಿದೆ.
ಇವರ ಟ್ರಾವೆಲಿಂಗ್ ಇಸ್ಟರಿ ಕಲೆಹಾಕಿದ್ದಾರೆ. ಪಟ್ಟಣದ 11ನೇ ವಾಡ್ರ್ ಸೋಂಕಿತನ ಮನೆ ಹಾಗೂ ಸುತ್ತಮುತ್ತ ಪ್ರದೇಶ ಸಂಪೂಣರ್ ಸೀಲ್ಡೌನ್ ಮಾಡಿದ್ದು, ಪಟ್ಟಣದ ಶಾಂತಿ ನಗರ ಹಾಗೂ ಅಪ್ಬಂಡೆ ಸೇರಿದಂತೆ ಕಣಿವೇನಹಳ್ಳಿ ತಾಂಡ ಮತ್ತು ಮದ್ದಿಬಂಡೆ ಗ್ರಾಮದ ಕಂಟೈನ್ಮೆಂಟ್ ಪ್ರದೇಶಗಳಿಗೆ ಬೇಲಿ ಹಾಕಲಾಗಿದೆ.
ಬಳ್ಳಾರಿ: ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ ಹೊಸ 47 ಪಾಸಿಟಿವ್ ಕೇಸ್
ಸೋಂಕಿತರ ಸಂಪಕರ್ದಲ್ಲಿದ್ದ ಕುಟುಂಬಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.ಕೂಲಿ ಮಾಡಿ ಹೊಟ್ಟೆತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳನ್ನು ಗೃಹ ಬಂಧನದಲ್ಲಿರಿಸುವ ಕಾರಣ ಜೀವನೋಪಯಕ್ಕಾಗಿ ತೀವ್ರ ಪರದಾಟ ನಡೆಸುವ ಅನಿವಾರ್ತೆ ಸೃಷ್ಟಿಯಾಗಿದೆ. ಇದರಿಂದ ಹಲವಾರು ಬಾರಿ ಮನವಿ ಮಾಡಿಕೊಂಡರೂ ನೀವು ಹಣ ನೀಡಿದರೆ ಮಾತ್ರ ನಿಮಗೆ ಅಗತ್ಯ ವಸ್ತುಗಳ ಪೂರೈಕೆಗೆ ಅವಕಾಶವಿದೆ ಎಂದು ಹೇಳಿ ತಾಲೂಕು ಆಡಳಿತ ಕೈಚೆಲ್ಲಿರುವುದಾಗಿ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಕಣಿವೇನಹಳ್ಳಿ ತಾಂಡದ ಶಂಕರನಾಯಕ್ ಮಾತನಾಡಿ, ಗ್ರಾಮದಲ್ಲಿ 20ಕ್ಕೂ ಹೆಚ್ಚು ಕುಟುಂಬಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಎಲ್ಲಾ ಕುಟುಂಬಗಳು ಕೂಲಿಯಿಂದ ಜೀವನ ಸಾಗಿಸುತ್ತಿದ್ದು, ಕ್ವಾರಂಟೈನ್ ಮಾಡಿದ ಕಾರಣ ಒಪ್ಪತ್ತಿನ ಊಟ ಮತ್ತು ಇತರೆ ದಿನವಾಹಿ ಕೃಷಿಯಂತ ಚಟವಟಿಕೆ ನಿವಾರಣೆಗೆ ಸಮಸ್ಯೆಯಾಗಿದೆ ಎಂದರು.