ನಗರಸಭೆ ಸಿಬ್ಬಂದಿ ವಿರುದ್ಧ ಸ್ಥಳೀಯರ ಆಕ್ರೋಶ| ಕೊಪ್ಪಳದಲ್ಲಿ ನಗರಸಭೆ ಸಿಬ್ಬಂದಿಯ ಮಾಹಾ ಯಡವಟ್ಟು|ಗಣೇಶನ ಮೂರ್ತಿಗಳನ್ನು ಚರಂಡಿಯಲ್ಲಿ ಸುರಿದು ಹೋದ ನಗರಸಭೆ ಸಿಬ್ಬಂದಿ| 

ಕೊಪ್ಪಳ(ಆ.23): ಚರಂಡಿಯಲ್ಲಿ ಗಣೇಶನ ಮೂರ್ತಿಗಳನ್ನು ಹಾಕಿದ ನಗರಸಭೆ ಸಿಬ್ಬಂದಿ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದ ಘಟನೆ ನಗರದ ಬಿ ಟಿ ಪಾಟೀಲ್ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ನಗರಸಭೆ ಸಿಬ್ಬಂದಿಯ ಮಾಹಾ ಯಡವಟ್ಟಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ನಗರದ ಸಿದ್ದಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ನಗರಸಭೆಯವರು ಸಾರ್ವಜನಿಕ ಗಣೇಶನ ವಿಸರ್ಜನೆಗೆ ಬ್ಯಾರಲ್ ಇಟ್ಟಿದ್ದರು. ನಿನ್ನೆ(ಶನಿವಾರ) ರಾತ್ರಿ ಬ್ಯಾರರ್‌ನಲ್ಲಿ ಗಣೇಶನ ಮೂರ್ತಿಗಳನ್ನು ಹಾಕಿ ವಿರ್ಜಿಸಿದ್ದರು. 

ಕೊಪ್ಪಳ: ವೆಂಟಿಲೇಟರ್‌ ಸಮಸ್ಯೆಯಿಂದಲೇ ಹಲವರ ಸಾವು!

ಇಂದು ಬೆಳಿಗ್ಗೆ ಬ್ಯಾರಲ್‌ನಲ್ಲಿದ್ದ ಗಣೇಶನ ಮೂರ್ತಿಗಳನ್ನು ನಗರಸಭೆ ಸಿಬ್ಬಂದಿ ಚರಂಡಿಯಲ್ಲಿ ಸುರಿದು ಹೋಗಿದ್ದಾರೆ. ನಗರಸಭೆಯವರ ಸಿಬ್ಬಂದಿಯ ಬೇಜವಾಬ್ದಾರಿತನಕ್ಕೆ ಗಣೇಶನ ಮೂರ್ತಿಗಳು, ಹೂವಿನ ಹಾರಗಳು ಚರಂಡಿಯಲ್ಲಿಯೇ ಬಿದ್ದಿವೆ. ಇದನ್ನು ನೋಡಿದ ಸಾರ್ವಜನಿಕರು ನಗರಸಭೆ ವಿರುದ್ಧ ಕಿಡಿಕಾರಿದ್ದಾರೆ.