Asianet Suvarna News Asianet Suvarna News

ಅಕಾ​ಲಿಕ ಮಳೆ ಆಪ​ತ್ತು: ಈರುಳ್ಳಿ ಬೆಲೆಗೆ ವಿಪ​ತ್ತು, ಕಂಗಾಲಾದ ರೈತ..!

*   ದಿಢೀ​ರನೆ ಕುಸಿದ ಈರುಳ್ಳಿ ಬೆಲೆ
*  ಆವಕ ಹೆಚ್ಚ​ಳ​ವಾ​ಗಿದ್ದೆ ದರ ಕುಸಿ​ತಕ್ಕೆ ಕಾರ​ಣ
*  ಎಪಿ​ಎಂಸಿ​ಯಲ್ಲೂ ಸಿಗು​ತ್ತಿಲ್ಲ ಬೆಲೆ
 

Onion Price Decline Due to  Untimely Rain in Vijayapura grg
Author
Bengaluru, First Published May 20, 2022, 10:29 AM IST

ರುದ್ರಪ್ಪ ಆಸಂಗಿ

ವಿಜಯಪುರ(ಮೇ.20): ಅಕಾ​ಲಿಕ ಮಳೆ ಜನಸಂಚಾ​ರ​ವನ್ನು ಮಾತ್ರ​ವಲ್ಲ, ರೈತ​ರಿಗೂ ಕಂಟ​ಕ​ವಾ​ಗಿದೆ. ಕೈಗೆ ಬಂದ ಬೆಳೆ​ಗಳು, ಬಾಯಿಗೆ ಬರ​ದಂತಹ ಪರಿ​ಸ್ಥಿತಿ ರೈತ​ರದ್ದು. ಬಂದಿ​ರುವ ಬೆಳೆ​ಗ​ಳನ್ನು ಕೈಗೆ ಬಂದಷ್ಟುಬೆಲೆಗೆ ಮಾರಾಟ ಮಾಡು​ತ್ತಿ​ದ್ದಾನೆ ರೈತ. ವಾಡಿ​ಕೆ​ಗಿಂತ ಹೆಚ್ಚು ಮಳೆ​ಯಾ​ಗು​ತ್ತಿ​ರು​ವು​ದ​ರಿಂದ ಬೆಳೆ​ಗಳು ಹಾಳಾ​ಗಲು ಪ್ರಮುಖ ಕಾರ​ಣ​ವಾ​ಗಿ​ದೆ. ಅದ​ರಲ್ಲಿ ಪ್ರಮು​ಖ​ವಾಗಿ ಈರುಳ್ಳಿ ಕೂಡ ಬೆಲೆ ಕ್ಷೀಣ​ಗೊಂಡು ರೈತ ಕಣ್ಣೀ​ರಿ​ನಲ್ಲಿ ಕೈತೊಳೆ​ಯು​ವಂತೆ ಮಾಡಿ​ದೆ.

ಹೊಲ​ದಲ್ಲಿ ಈರುಳ್ಳಿ ಕಿತ್ತಾಗಿದೆ. ಆದರೆ, ಕಳೆದ ಮೂರ್ನಾಲ್ಕು ದಿನ​ಗ​ಳಿಂದ ಸುರಿ​ಯು​ತ್ತಿ​ರುವ ಧಾರಾ​ಕಾರ ಮಳೆ​ಯಿಂದಾಗಿ ಅದು ರೈತನ ಕೈಗೆ ಸಿಗ​ದಂತಹ ಪರಿ​ಸ್ಥಿತಿ ನಿರ್ಮಾ​ಣ​ವಾ​ಗಿ​ದೆ. ಇರುವ ಈರುಳ್ಳಿ​ಯ​ನ್ನಾ​ದರೂ ಮಾರು​ಕ​ಟ್ಟೆಗೆ ಸಾಗಿ​ಸಿ​ದರೆ ಅಲ್ಲಿಯೂ ಅದಕ್ಕೆ ಯೋಗ್ಯ ಬೆಲೆ ಸಿಗು​ತ್ತಿಲ್ಲ. ತಮ​ಗಿ​ಷ್ಟ​ದ ದರ ನೀಡಿ ಖರೀ​ದಿ​ಸು​ತ್ತಿ​ದ್ದಾರೆ ವ್ಯಾಪಾ​ರಿ​ಗಳು. ಹಾಕಿದ ಬಂಡ​ವಾಳ ಕೂಡ ಕೈಗೆ ಬರು​ತ್ತಿಲ್ಲ. ಮುಂದೇನು ಮಾಡು​ವುದು ಎಂಬ ಚಿಂತೆ ರೈತ​ನ​ದ್ದು.

Karnataka SSLC 2022 Topper ಬಡತನದಲ್ಲಿ ಅರಳಿದ ವಿಜಯಪುರದ ಪ್ರತಿಭೆ ರಾಜ್ಯಕ್ಕೆ ಟಾಪರ್!

ಎಪಿ​ಎಂಸಿ​ಯಲ್ಲೂ ಸಿಗು​ತ್ತಿಲ್ಲ ಬೆಲೆ:

ಹೊಲದಲ್ಲಿ ಬೆಳೆದು ನಿಂತ ಈರುಳ್ಳಿ ನೀರಿನಲ್ಲಿ ನಿಂತು ಸಂಪೂರ್ಣ ಹಾಳಾಗುತ್ತದೆ ಎಂಬ ಭೀತಿ ರೈತ​ರನ್ನು ಆವ​ರಿ​ಸಿದೆ. ಹಾಗಾಗಿ ಬಹುತೇಕ ಈರುಳ್ಳಿ ಬೆಳೆಗಾರರು ತಮ್ಮ ಹೊಲದಲ್ಲಿ ಬೆಳೆದು ನಿಂತ ಈರುಳ್ಳಿಯನ್ನು ಕಿತ್ತು ಕೈಗೆ ಬಂದಷ್ಟು ಬರಲಿ ಎಂದು ಎಪಿಎಂಸಿಗೆ ತರುತ್ತಿದ್ದಾರೆ. ದಿನವೂ ಸಾವಿರಾರು ಕ್ವಿಂಟಲ್‌ ಈರುಳ್ಳಿಯನ್ನು ರೈತ ಎಪಿಎಂಸಿಗೆ ತರುತ್ತಿದ್ದಾನೆ. ಆದರೆ, ಅಲ್ಲಿ ಬೆಲೆ ದಿಢೀ​ರನೆ ಕುಸಿ​ದಿದೆ. ಹಾಕಿದ ಬಂಡ​ವಾಳ ಕೂಡ ಈರು​ಳ್ಳಿ​ಯಿಂದ ಬರು​ತ್ತಿಲ್ಲ ಎಂದು ರೈತ ಗೋಳಿಡುತ್ತಿದ್ದಾನೆ.

ರೈತರು ಒಮ್ಮೆಲೆ ಎಪಿ​ಎಂಸಿಗೆ ಈರು​ಳ್ಳಿ​ಯನ್ನು ತಂದಿ​ದ್ದ​ರಿಂದ ಆವಕ ಪ್ರಮಾಣದಲ್ಲಿ ಹೆಚ್ಚ​ಳ​ವಾ​ಗಿದೆ. ಇದ​ರಿಂದಾಗಿ .1ಗೆ ಒಂದು ಕೆಜಿ ಈರುಳ್ಳಿ ಮಾರಾ​ಟ​ವಾ​ಗು​ತ್ತಿದೆ. ಉತ್ತಮ ಗುಣಮಟ್ಟದ ದೊಡ್ಡ ಗಾತ್ರದ ಈರು​ಳ್ಳಿ​ಗೆ .6 ಕೆಜಿಯಂತೆ ಮಾರಾಟವಾಗುತ್ತಿದೆ. ಇದು ರೈತ​ರಿಗೆ ನುಂಗ​ಲಾ​ರದ ತುತ್ತಾ​ಗಿದೆ. ವಾಪಸ್‌ ಕೊಂಡೊ​ಯ್ದರೆ ಮಳೆ​ಯಿಂದ ನೆಲ ಕೂಡ ತಂಪಾ​ಗಿದೆ. ಎಲ್ಲಿ​ಡ​ಬೇಕು ಎಂಬ ಚಿಂತೆ ಅವ​ರನ್ನು ಬಾಧಿ​ಸಿದೆ. ಹೀಗಾಗಿ ಸಿಕ್ಕ ದರ​ದಲ್ಲೇ ಕೊಟ್ಟು ಹೋಗು​ತ್ತಿ​ದ್ದಾ​ರೆ.
ಜಿಲ್ಲೆಯ ಕೊಲ್ಹಾರ, ಬಸವನ ಬಾಗೇವಾಡಿ, ನಿಡಗುಂದಿ ಮುಂತಾದ ತಾಲೂಕುಗಳಲ್ಲಿ ಈರುಳ್ಳಿಯನ್ನು ಪ್ರಮುಖ ಬೆಳೆಯಾಗಿ ಬೆಳೆ​ಯು​ತ್ತಾ​ರೆ. ಸಾವಿರಾರು ಎಕರೆ ಜಮೀನು ಈರು​ಳ್ಳಿ​ಯನ್ನೇ ಆವ​ರಿ​ಸಿ​ಕೊಂಡಿದೆ. ಧಾರಣೆ ಬಂದರೆ ರೈತ​ರಿಗೆ ಬಂಪರ್‌ ಹೊಡೆ​ದಂತೆ. ರೈತರು ಕೂಡ ಕೈತುಂಬ ಹಣ ಪಡೆ​ದು​ಕೊಂಡು ಸಾಲದಿಂದ ಮುಕ್ತರಾಗುತ್ತಾರೆ. ಈ ರೀತಿ ವಿಪರೀತ ಮಳೆಯಾದರೆ ರೈತರ ಹೊಲದಲ್ಲಿನ ಈರುಳ್ಳಿ ಬೆಳೆ ನೀರಲ್ಲಿ ನಿಂತು ಕೊಳೆತು ಹೋಗುತ್ತದೆ. ಕಳೆದ 15 ದಿನಗಳ ಹಿಂದೆ ಈರುಳ್ಳಿ ಬೆಳೆ ಪ್ರದೇಶದಲ್ಲಿ ಆಲಿಕಲ್ಲು ಮಳೆ ಬಿದ್ದಿದೆ. ಹೀಗಾಗಿ ಇಲಾಯಿಯಲ್ಲಿ ಸಂಗ್ರಹಿಸಡಲಾದ ಈರುಳ್ಳಿ ಕೊಳೆಯಲು ಆರಂಭಿ​ಸಿತು. ರೈತರು ಹೆದರಿ ಎಪಿಎಂಸಿಗೆ ಉಳ್ಳಾಗಡ್ಡಿ ತಂದು ಪುಕ್ಕಟೆ ಕೊಟ್ಟು ಹೋದಂತೆ ಆಗಿದೆ. ಕೆಲವು ರೈತರು ಹೊಲ​ದ​ಲ್ಲಿಯೇ ಈರು​ಳ್ಳಿ​ಯನ್ನು ಬಿಟ್ಟಿ​ದ್ದಾರೆ. ಅಲ್ಲಿಯೇ ಅದು ಗೊಬ್ಬ​ರ​ವಾ​ಗಲಿ. ಆದರೆ, ಅದರ ಖರ್ಚನ್ನು ನಿಭಾ​ಯಿ​ಸು​ವುದು ಕಷ್ಟ ಎಂದಿ​ದ್ದಾ​ರೆ.

ಎರಡು ಎಕರೆಯಲ್ಲಿ ಈ​ರು​ಳ್ಳಿ​ಯನ್ನು ಬೆಳೆದಿದ್ದೆ. 400 ಪಾಕೆಟ್‌ ಈ​ರುಳ್ಳಿ ಬೆಳೆ​ಯ​ಲಾ​ಗಿ​ತ್ತು. ಧಾರ​ಣೆ ಕಡಿಮೆ ಇದ್ದರೂ ಸುಮಾರು . 2 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೆ. ಆದರೆ ಈ ಬಾರಿ ಆಲಿಕಲ್ಲು ಮಳೆಯಾದ ಪರಿಣಾಮ ಈರುಳ್ಳಿ ಸಂಗ್ರಹಿಸಿ ಇಟ್ಟರೂ ಕೊಳೆಯ ತೊಡಗಿತು. ಹಾಗಾಗಿ ಎಪಿಎಂಸಿಗೆ ತಂದು ಮಾರಾಟ ಮಾಡಲಾಗಿದೆ. ಈರುಳ್ಳಿ ಕೃಷಿ ಮಾಡಿದ ಖರ್ಚು, ಆಳುಗಳ ಖರ್ಚು ಕೂಡ ಬರಲಿಲ್ಲ. ಬರೀ .30 ಸಾವಿರ ಮಾತ್ರ ಕೈಗೆ ಬಂದಿದೆ ಅಂತ ಮಸಬಿನಾಳ ರೈತ ನಂದಪ್ಪ ಮಡಗೊಂಡ ಹೇಳಿದ್ದಾರೆ. 
 

Follow Us:
Download App:
  • android
  • ios