Asianet Suvarna News Asianet Suvarna News

ಕೊಪ್ಪಳ: ಪತ್ನಿ ಸಾವನ್ನಪ್ಪಿದ ಸುದ್ದಿ ಕೇಳಿ ಪತಿ ಸಾವು, ಸಾವಿನಲ್ಲೂ ಒಂದಾದ ಅಜ್ಜ, ಅಜ್ಜಿ..!

ಸಾವಿನಲ್ಲೂ ಒಂದಾದ ವೃದ್ಧ ದಂಪತಿ| ಕೊಪ್ಪಳ ಜಿಲ್ಲೆ ಕನಕಗಿರಿಯಲ್ಲಿ ನಡೆದ ಘಟನೆ| ಮಹಾಬಳೇಶ್ವರ ಸ್ವಾಮಿ ಹಾಗೂ ಪತ್ನಿ ಪ್ರಭಾವತಿ ಎಂಬುವರೇ ಸಾವಿನಲ್ಲೂ ಒಂದಾದ ದಂಪತಿಯಾಗಿದ್ದಾರೆ| ಅಜ್ಜ, ಅಜ್ಜಿಯ ಸಾವಿನಿಂದ ಮುಗಿಲುಮುಟ್ಟಿದ ಕುಟುಂಬಸ್ಥರ ಆಕ್ರಂದನ| 

Old Age Couple Dies at Kanakagiri in Koppal District
Author
Bengaluru, First Published May 21, 2020, 1:49 PM IST

ಕೊಪ್ಪಳ(ಮೇ.21): ಸಾವಿನಲ್ಲೂ ವೃದ್ಧ ದಂಪತಿ ಒಂದಾದ ಘಟನೆ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ಇಂದು(ಗುರುವಾರ) ನಡೆದಿದೆ. ಮಹಾಬಳೇಶ್ವರ ಸ್ವಾಮಿ ಹಾಗೂ ಪತ್ನಿ ಪ್ರಭಾವತಿ ಎಂಬುವರೇ ಸಾವಿನಲ್ಲೂ ಒಂದಾದ ದಂಪತಿಯಾಗಿದ್ದಾರೆ.

78 ವರ್ಷದ ಪತ್ನಿ ಪ್ರಭಾವತಿ ಎಂಬುವರು ನಿನ್ನೆ ತಡರಾತ್ರಿ(ಬುಧವಾರ) ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಸುದ್ದಿ ಕೇಳಿದ ಪತಿ ಮಹಾಬಳೇಶ್ವರ ಸ್ವಾಮಿ(86) ಅವರು ಕೂಡ ಇಂದು ನಿಧನಹೊಂದಿದ್ದಾರೆ.

ಲಾಕ್‌ಡೌನ್‌: ಹಸಿದರ ಹೊಟ್ಟೆ ತುಂಬಿಸಿದ ಮುನಿರಾಬಾದ್‌ ಪೊಲೀಸ್‌ ಠಾಣೆ, ನಿತ್ಯ ದಾಸೋಹ

ಇವರಿಬ್ಬರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಜ್ಜ, ಅಜ್ಜಿ ಸಾವಿನಲ್ಲೂ ಒಂದಾಗಿ ಸಾವನ್ನಪ್ಪಿದ್ದಾರೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. 
 

Follow Us:
Download App:
  • android
  • ios