Asianet Suvarna News Asianet Suvarna News

ಅವಳೆ ನನ್ನ ಕಾಪಾಡಿದ್ದು : ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ

ನನಗೆ ಈ ವಿಚಾರದಲ್ಲಿ ಯಾವುದೇ ಸಂಪರ್ಕ ಇಲ್ಲ. ನನ್ನನ್ನ ಇದರಿಂದ ಕಾಪಾಡಿದ್ದು ಅವಳೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಈ ಹೇಳಿಕೆ ನೀಡಿದ್ದಾರೆ. 

No Connection Between IMA Case And Me Says JDS Leader HD Kumaraswamy snr
Author
Bengaluru, First Published Feb 22, 2021, 3:15 PM IST

 ರಾಮ​ನ​ಗರ (ಫೆ.22):  ಬಹು​ಕೋಟಿ ವಂಚಿ​ಸಿರುವ ಐಎಂಎ (ಐ ಮಾನಿ​ಟರಿ ಅಡ್ವೈ​ಸ​ರಿ) ಹಗ​ರ​ಣಕ್ಕೂ ನನಗೂ ಯಾವುದೇ ಸಂಬಂಧ​ವಿಲ್ಲ, ನನ್ನ ಅವ​ಧಿ​ಯಲ್ಲೇ ಹಗ​ರಣ ತನಿ​ಖೆಗೆ ಆದೇಶಿಸಿ ಕಠಿಣ ಕ್ರಮ ತೆಗೆ​ದು​ಕೊ​ಳ್ಳಲು ಹೇಳಿದ ಮೇಲೆ ಪಾತ್ರ​ ಏನಿರುತ್ತದೆ ಎಂದು ಮಾಜಿ ಸಿಎಂ ಎಚ್‌.​ಡಿ.​ಕು​ಮಾ​ರ​ಸ್ವಾಮಿ ಪ್ರಶ್ನಿ​ಸಿ​ದರು.

ನಗ​ರ​ದ ಎಂ.ಜಿ. ​ರ​ಸ್ತೆಯ ಶ್ರೀಮತ್‌ ಕನ್ನಿಕಾ ಪರ​ಮೇ​ಶ್ವರಿ ಅಮ್ಮ​ನ​ವರ ದೇವಾ​ಲ​ಯ​ದಲ್ಲಿ ಶತ​​ಮಾನೋ​ತ್ಸವ ಕಾರ್ಯ​ಕ್ರಮ, ಕುಂಭಾ​ಭಿಷೇಕ ಕಾರ್ಯ​ಕ್ರ​ಮದ ಅಂಗ​ವಾಗಿ ಪತ್ನಿ ಅನಿ​ತಾ ಅವ​ರೊಂದಿಗೆ ಮಿನಿ ರಥಕ್ಕೆ ಚಾಲನೆ ನೀಡಿ ಅವರು ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದರು.

ಕುಮಾ​ರ​ಸ್ವಾಮಿ ಹೆಸ​ರಿನಲ್ಲಿ ಕಲೆ​ಕ್ಷನ್‌ ಆಗಿದೆ, ಆದರೆ, ಆ ಹಣ ಅವ​ರಿಗೆ ತಲು​ಪಿಲ್ಲ ಎಂದು ಹೇಳ​ಲಾ​ಗಿದೆ. ನನಗೂ ಅದಕ್ಕೂ ಸಂಬಂಧ ಏನು. ಅದ್ಯಾರು ಕೊಟ್ಟರು, ಯಾರು ತೆಗ​ದು​ಕೊಂಡರು ಅವರ ವಿರುದ್ಧ ಕ್ರಮ ತೆಗೆ​ದು​ಕೊ​ಳ್ಳಲಿ. ಮುಖ್ಯ​ಮಂತ್ರಿ​ಯಾಗಿ, ಶಾಸ​ಕ​ನಾಗಿ ಅಥವಾ ರಾಜ​ಕೀ​ಯಕ್ಕೆ ಬಂದ ನಂ​ತರ ಜನ​ಸಾ​ಮಾ​ನ್ಯ​ರಿಗೆ ದ್ರೋಹ ಮಾಡುವ ಅಥವಾ ಜನರ ಹಣ ಲೂಟಿ ಮಾಡುವವರಿಗೆ ರಕ್ಷಣೆ ಕೊಟ್ಟ​ವ​ನಲ್ಲ ಎಂದರು.

'ಸಿದ್ದು, ಹೆಚ್‌ಡಿಕೆಯಿಂದ ಮುಸ್ಲಿಮರ ಓಲೈಕೆಗಾಗಿ ತುಷ್ಟೀಕರಣ ರಾಜಕಾರಣ' ...

ಮುಖ್ಯ​ಮಂತ್ರಿ ಆಗಿದ್ದಾಗ, ಈ ಪ್ರಕ​ರ​ಣ​ದಲ್ಲಿ ರಾಜ್ಯ ಸರ್ಕಾ​ರದ ಅಧಿ​ಕಾರಿ​ಗಳು ಸರಿ​ಯಾದ ತನಿಖೆ ನಡೆ​ಸು​ತ್ತಿಲ್ಲ. ಸಾರ್ವ​ಜ​ನಿ​ಕರ ಹಣ ದುರ್ಬ​ಳಕೆ ಆಗು​ತ್ತಿದೆ ಎಂದು ಗೊತ್ತಾ​ಯಿತು. ಆಗ ಡಿಜಿ​ಪಿ​ಯ​ವರ ಗಮನ ಸೆಳೆದ ನಂತರ ಗಂಭೀ​ರ​ವಾಗಿ ತನಿಖೆ ಆರಂಭ​ಗೊಂಡಿ​ತು. ಆ ತನಿಖೆ ಪ್ರಾರಂಭ​ವಾ​ದ ಕೂಡಲೇ ಆ ವ್ಯಕ್ತಿ (ಐ​ಎಂಎ ಮಾಲೀ​ಕ) ದುಬೈಗೆ ಪರಾ​ರಿ​ಯಾದ. ಆತ ಎಲ್ಲಿದ್ದಾ​ನೆಂದು ಟ್ರೇಸ್‌ ಮಾಡಿದ್ದು, ನನ್ನ ಸರ್ಕಾ​ರ​ದಲ್ಲೇ, ದುಬೈ​ನಿಂದ ದೆಹ​ಲಿಗೆ ಬಂದ ಆತ​ನನ್ನು ಇ.ಡಿ ಅಧಿ​ಕಾ​ರಿ​ಗಳು ವಶಕ್ಕೆ ಪಡೆ​ದರು. ಅಲ್ಲಿಂದ ತನಿಖೆ ಆರಂಭ​ವಾ​ಗಿದೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ನೋಡೋಣ ಎಂದು ಹೇಳಿದರು.

ಕನ್ನಿ​ಕಾ​ಪ​ರ​ಮೇ​ಶ್ವರಿ ಅಮ್ಮ​ನ​ವರೇ ಕಾಪಾ​ಡಿ​ದರು:  ಅದ್ಯಾರೊ ಪೊಲೀ​ಸ​ರಿಗೆ ನೀಡಿ​ರುವ ಹೇಳಿ​ಕೆ​ಯಲ್ಲಿ ಕುಮಾ​ರ​ಸ್ವಾಮಿ ಹೆಸ​ರಲ್ಲಿ ದುಡ್ಡು ತಗೊಂಡಿ​ದ್ದಾರೆ. ಆದರೆ, ಆ ಹಣ ಕುಮಾ​ರ​ಸ್ವಾಮಿಗೆ ತಲು​ಪಿಲ್ಲ ಎಂದು ಹೇಳಿ​ದ್ದಾನೆ. ವಿಷಯ ಅಲ್ಲಿಗೆ ನಿಂತಿದೆ. ಆ ಕನ್ನಿ​ಕಾ​ಪ​ರ​ಮೇ​ಶ್ವ​ರಿಯೇ ನನ್ನನ್ನು ಕಾಪಾ​ಡಿ​ದ್ದಾಳೆ ಎಂದರು.

ಒ​ಕ್ಕ​ಲಿ​ಗ​ರಿಗೂ ಮೀಸ​ಲಾತಿ ಕೊಡು​ವಂತೆ ಕೂಗು ಎದ್ದಿ​ರುವ ಬಗ್ಗೆ ಮಾಧ್ಯಮ ಪ್ರತಿ​ನಿ​ಧಿ​ಗಳು ಗಮನ ಸೆಳೆ​ದಾಗ ಪ್ರತಿ​ಕ್ರಿ​ಯಿ​ಸಿದ ಅವರು. ಅದೀಗ ದಾರಿ​ತಪ್ಪಿ ಹೋಗು​ತ್ತಿ​ರುವ ಸನ್ನಿ​ವೇಶ. ರಾಜ​ಕೀ​ಯ​ವಾಗಿ ಸ್ಥಾನ​ಮಾನ ಪಡೆ​ಯಲು ಒಂದು ​ವರ್ಗ ಹೊರ​ಟಿದೆ. ಆದರೆ, ನಾನು ಈ ವಿಚಾ​ರ​ದಲ್ಲಿ ಭಾಗಿ​ಯಾ​ವು​ದಿಲ್ಲ. ಆದರೆ, ವಾಸ್ತ​ವಾಂಶಕ್ಕೆ ಕೆಲವು ತೀರ್ಮಾನಗಳಾ​ಗ​ಬೇ​ಕಾ​ಗಿದೆ ಎಂದರು.

ಒಕ್ಕ​ಲಿಗೆ ಜಾತಿಗೆ ಮೀಸ​ಲಾತಿಯಂತಹ ವಿಷ​ಯ​ಗ​ಳಿಗೆ ಜನ​ರನ್ನು ಇಕ್ಕ​ಟ್ಟಿಗೆ ಸಿಲು​ಕಿಸಿ ಸಮಾ​ಜ​ದಲ್ಲಿ ಸಂಘ​ರ್ಷಕ್ಕೆ ಎಡೆ​ಮಾ​ಡಿ​ಕೊ​ಡಲು ಹೋಗು​ವುದಿಲ್ಲ. ಆ ಸಮಯ ಬಂದಾಗ ಚರ್ಚೆ ಮಾಡೋಣ ಎಂದು ಕುಮಾ​ರ​ಸ್ವಾಮಿ ಪ್ರಶ್ನೆ​ಯೊಂದಕ್ಕೆ ಉತ್ತ​ರಿ​ಸಿದರು.

Follow Us:
Download App:
  • android
  • ios