Asianet Suvarna News Asianet Suvarna News

ನಿವಾರ್ ಆರ್ಭಟ : ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ.. ಎಚ್ಚರ

ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು ಈ ನಿಟ್ಟಿನಲ್ಲಿ ರಾಜ್ಯದ 8 ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ

Nivar Effect  Yellow Alert On 8 Districts Of Karnataka snr
Author
Bengaluru, First Published Nov 26, 2020, 9:35 AM IST

ಬೆಂಗಳೂರು (ನ.26):   ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ನಿವಾರ್ ಆರ್ಭಟ ಆರಂಭವಾಗಲಿದೆ.  ಬಂಗಾಳ ಕೊಲ್ಲಿಯಿಂದ ತಮಿಳುನಾಡಿನ ಕರಾವಳಿಗೆ ಬಂದು ಅಪ್ಪಳಿಸಿರೋ ನಿವಾರ್ ಚಂಡಮಾರುತದಿಂದ  ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. 

ನಿವಾರ್ ಚಂಡಮಾರುತ ಹಿನ್ನಲೆ ಈಗಾಗಲೇ ರಾಜ್ಯದ 8 ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. 

ನಿವಾರ್ ಆತಂಕ, ತಮಿಳುನಾಡಲ್ಲಿ ಮಳೆ, ಧರೆಗುರುಳಿದ ಮರಗಳು! .

ಬೆಂಗಳೂರು ಗ್ರಾಮಾಂತರ, ಕೋಲಾರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ,ಚಾಮರಾಜನಗರ, ಮಂಡ್ಯ,ತುಮಕೂರು ರಾಮನಗರ ಜಿಲ್ಲೆಗಳಿಗೆ ಎಲ್ಲೋ ಅಲರ್ಟ್  ನೀಡಲಾಗಿದೆ. 

ಇಂದು ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ಮಳೆ ಮುನ್ನೆಚ್ಚರಿಕೆ ಸೂಚನೆ ನೀಡಲಾಗಿದ್ದು, ಇಂದು ನಾಳೆ ಕರಾವಳಿ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಬೆಂಗಳೂರು ನಗರಕ್ಕೂ ಎಲ್ಲೋ ಅಲರ್ಟ್ ಹಿನ್ನಲೆ ನಗರದಲ್ಲಿ ಇಂದು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಬೆಳಗಿನಿಂದ ಮೋಡಕವಿದ ವಾತಾವರಣ, ತಂಡಿಗಾಳಿ ಇದೆ.

Follow Us:
Download App:
  • android
  • ios