ಮದುವೆ ನಂತ್ರ ಮದುಮಗಳು ಗಂಡನ ಮನೆಗೋ ಅಥವಾ ತವರು ಮನೆಗೆ ಹೋಗುವುದು ಕಾಮನ್​​​​.  ಆದ್ರೆ, ಹಾಸನದ ನವವಿವಾಹಿತೆ ಕಲ್ಯಾಣ ಮಂಟಪದಿಂದ ನೇರವಾಗಿ ಹೋಗಿದ್ದೇಲ್ಲಿಗೆ ಗೊತ್ತಾ?

ಹಾಸನ, [ನ.18]: ಮದುವೆ ನಂತ್ರ ಮದುಮಗಳು ಗಂಡನ ಮನೆಗೋ ಅಥವಾ ತವರು ಮನೆಗೆ ಹೋಗುವುದು ಕಾಮನ್​​​​. 

Add Asianetnews Kannada as a Preferred SourcegooglePreferred

ಆದ್ರೆ, ನವವಿವಾಹಿತೆ ಕಲ್ಯಾಣ ಮಂಟಪದಿಂದ ನೇರವಾಗಿ ಎಕ್ಸಾಂ ಹಾಲ್​​​ ತೆರಳಿದ ಘಟನೆ ಇಂದು [ಭಾನುವಾರ] ಹಾಸನದಲ್ಲಿ ನಡೆದಿದೆ. 

ಮಾಂಗಲ್ಯಧಾರಣೆ ನಂತರ ಅಲಂಕಾರ ಸಮೇತ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ಸ್ವಾತಿ, ಪರೀಕ್ಷೆ ಬರೆದ ನವವಿವಾಹಿತೆ. ಹಾಸನದ ಮಹಿಳಾ ಪದವಿ ಕಾಲೇಜು ಕೇಂದ್ರದಲ್ಲಿ ಸ್ವಾತಿ ಪರೀಕ್ಷೆ ಬರೆದ್ರು. ಗಂಡ ಹಾಗೂ ಕುಟುಂಬಸ್ಥರು ಕಾಲೇಜು ಹೊರಗಡೆ ಕಾಯುತ್ತಿದ್ದರು. 

ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದ ನವೀನ್​​ ಮತ್ತು ಹಾಸನದ ಜಯನಗರ ಬಡಾವಣೆಯ ಶ್ವೇತಾ ಎಂಬುವವರ ಮದುವೆ ಇಂದು ನಿಶ್ಚಯವಾಗಿತ್ತು. 

ಇನ್ನು, ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದ ಶ್ವೇತಾಗೆ ಇಂದು ಬಿಕಾಂ ಪರೀಕ್ಷೆ ಬರೆಯಬೇಕಾಗಿತ್ತು. ಇತ್ತ ಮದುವೆಯ ಕಾರ್ಯಕ್ರಮಗಳ ಜೊತೆಗೆ ಶ್ವೇತಾ ಪರೀಕ್ಷೆ ಬರೆದು ಸೈ ಎನಿಸಿಕೊಂಡಿದ್ದಾರೆ.