ಮೈಸೂರು ಅರಮನೆಯಲ್ಲಿ ನಡೆಯುವ ಜೆಟ್ಟಿ ಕಾಳಗದಲ್ಲಿ ಸೆಣಸಾಡುವ ಉಸ್ತಾದ್‌ ತಿಲಕ್ ಜೆಟ್ಟಿ ನಿಧನರಾಗಿದ್ದಾರೆ.  ವಜ್ರಮುಷ್ಠಿ ಕಾಳಗದಲ್ಲಿ ಸೆಣಸಿದ್ದ ಉಸ್ತಾದ್ ತಿಲಕ್‌ ಜೆಟ್ಟಿ ಕಳೆದ ಕೆಲವು ದಿನಗಳಿಂದ ಅನರೋಗ್ಯದಿಂದ ಬಳಲುತ್ತಿದ್ದರು.

ಮೈಸೂರು(ಜ.29): ಮೈಸೂರು ಅರಮನೆಯ ಉಸ್ತಾದ್ ತಿಲಕ್ ಜಟ್ಟಿ (56) ನಿಧನರಾಗಿದ್ದಾರೆ. ವಜ್ರಮುಷ್ಠಿ ಕಾಳಗದಲ್ಲಿ ಸೆಣಸಿದ್ದ ಉಸ್ತಾದ್ ತಿಲಕ್‌ ಜೆಟ್ಟಿ ಕಳೆದ ಕೆಲವು ದಿನಗಳಿಂದ ಅನರೋಗ್ಯದಿಂದ ಬಳಲುತ್ತಿದ್ದರು. ತಿಲಕ್ ಜೆಟ್ಟಿ ಬೆಳಗಿನ ಜಾವ‌ ತಮ್ಮ ಸ್ವಗೃಹದಲ್ಲಿ ದೈವಾಧೀನರಾಗಿದ್ದಾರೆ.

Add Asianetnews Kannada as a Preferred SourcegooglePreferred

ತಿಲಕ್ ಜೆಟ್ಟಿ ಒಬ್ಬ ಪುತ್ರ, ಪುತ್ರಿ ಹಾಗೂ‌ ಪತ್ನಿಯನ್ನು ಅಗಲಿದ್ದಾರೆ. ಮೈಸೂರಿನ ನಜರ್ ಬಾದ್‌ನಲ್ಲಿರೋ ನಿಂಬಜಾದೇವಿ ದೇವಾಲಯದಲ್ಲಿ ವ್ಯವಸ್ಥಾಪಕರಾಗಿದ್ದರು. ವಿದ್ಯಾರಣ್ಯಪುರಂ‌ ‌ನಿವಾಸದಲ್ಲಿ ಅಂತಿಮ‌ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 5 ಗಂಟೆಗೆ ಚಾಮುಂಡಿಬೆಟ್ಟ ತಪ್ಪಲಿನ‌ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.

ಮೈಸೂರಿಗೆ ಬಂತು ಕೇರಳ ಮೆಡಿಕಲ್‌ ವೇಸ್ಟ್‌ ತುಂಬಿದ್ದ ಲಾರಿಗಳು

ಮೈಸೂರು ದಸರಾದಲ್ಲಿ ವಜ್ರ ಮುಷ್ಠಿ ಕಾಳಗ ಅತ್ಯಂತ ಜನಪ್ರಿಯ. ಈ ಜಟ್ಟಿ ಕಾಳಗವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಹಲವು ವರ್ಷಗಳಿಂದ ಮೈಸೂರಿನಲ್ಲಿ ಜಟ್ಟಿ ಕಾಳಗ ಆಡುತ್ತಿರುವ ತಿಲಕ್ ಜಟ್ಟಿ ನಿಧನರಾಗಿದ್ದು, ಜಟ್ಟಿ ಕಾಳಗ ಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.