ಬೈಕ್‌ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ| ಇಬ್ಬರ ಸಾವು| ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿಯ ದುಗ್ಗನಬೈಲ್‌ ಬಳಿ ನಡೆದ ಘಟನೆ| ಯಕ್ಷಗಾನ ನೋಡಲು ತೆರಳಿದ್ದರ ತಾಯಿ ಮಗ| ಹೆದ್ದಾರಿ ಅಂಚಿನಲ್ಲಿ ಮೃತ ದೇಹಗಳು ಪತ್ತೆ| 

ಅಂಕೋಲಾ(ಫೆ.15): ಬೈಕ್‌ ಅಪಘಾತಕ್ಕೀಡಾಗಿ ತಾಯಿ-ಮಗ ಸ್ಥಳದಲ್ಲಿಯೇ ಸಾವು ಕಂಡ ಘಟನೆ ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿಯ ದುಗ್ಗನಬೈಲ್‌ ಬಳಿ ನಡೆದಿದೆ.

Add Asianetnews Kannada as a Preferred SourcegooglePreferred

ಅಂಗಡಿಬೈಲ್‌ ಮೂಲದ ಹರಿಹರ ರವಿ ಸಿದ್ಧಿ (26) ಹಾಗೂ ಈತನ ತಾಯಿ ಬೇಬಿ ರವಿ ಸಿದ್ಧಿ (45) ಮೃತಪಟ್ಟವರು. ಬೈಕ್‌ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿರುವ ವಿದ್ಯುತ್‌ ಕಂಬಕ್ಕೆ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ. ಮೃತರು ಶನಿವಾರ ರಾತ್ರಿ ಕೊಡ್ಲಗದ್ದೆಗೆ ಯಕ್ಷಗಾನ ನೋಡಲು ತೆರಳಿದ್ದರು ಎನ್ನಲಾಗಿದ್ದು, ಯಕ್ಷಗಾನ ಮುಗಿಸಿ ಹಿಂದಿರುಗಬೇಕಾದರೆ ನಿದ್ದೆಯ ಮಂಪರಿನಲ್ಲಿ ಈ ದುರ್ಘಟನೆ ನಡೆದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ರಸ್ತೆ ದಾಟುತ್ತಿದ್ದ ಭಿಕ್ಷುಕನನ್ನ ಬಲಿ ಪಡೆದ ಯಮಸ್ವರೂಪಿ ಬಿಎಂಟಿಸಿ ಬಸ್‌

ಬೆಳಗ್ಗೆ 6-30ರ ಸುಮಾರಿಗೆ ಹೆದ್ದಾರಿ ಅಂಚಿನಲ್ಲಿ ಮೃತ ದೇಹಗಳು ಪತ್ತೆಯಾಗಿದ್ದವು. ಸ್ಥಳಕ್ಕಾಗಮಿಸಿದ ಅಂಕೋಲಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.