Asianet Suvarna News Asianet Suvarna News

ಬೀದ​ರ್‌: ಕಲು​ಷಿತ ನೀರು ಸೇವ​ನೆ, 20ಕ್ಕೂ ಹೆಚ್ಚು ಜನ ಅಸ್ವಸ್ಥ

ಗ್ರಾಮ​ದಲ್ಲಿ ಕುಡಿ​ಯುವ ನೀರಿನ ಸಮ​ಸ್ಯೆಯನ್ನು ಇತ್ಯ​ರ್ಥ​ಗೊ​ಳಿ​ಸುವ ಹಿನ್ನೆ​ಲೆ​ಯಲ್ಲಿ ಗ್ರಾಮದ ಕೆರೆ​ಯ​ ಮೇಲ್ಭಾ​ಗ​ದ​ಲ್ಲಿ​ನ ಬಾವಿಯ ನೀರನ್ನು ಪೂರೈ​ಸಲು ಬಳ​ಸ​ಲಾದ ಪೈಪ್‌​ಲೈನ್‌ ದುರಾ​ವಸ್ಥೆ ಈ ಘಟ​ನೆಗೆ ಕಾರಣ ಎಂದು ಹೇಳ​ಲಾ​ಗು​ತ್ತಿದೆ.

More than 20 People Sick Due to Drinking Contaminated Water in Bidar grg
Author
First Published Jun 21, 2023, 2:30 AM IST

ಬೀದ​ರ್(ಜೂ.21):  ಔರಾದ್‌ ತಾಲೂಕಿನ ಎಕಂಬಾ ಗ್ರಾಪಂ ವ್ಯಾಪ್ತಿಯ ಕರ​ಕ್ಯಾಳ ಗ್ರಾಮದಲ್ಲಿ ಕಲಷಿತ ನೀರು ಕುಡಿದು ಮೂವರು ಮಕ್ಕಳು ಸೇರಿ​ದಂತೆ ಮೂರ್ನಾಲ್ಕು ಕುಟಂಬ​ಗ​ಳ 20ಕ್ಕೂ ಹೆಚ್ಚು ಜನ ಅಸ್ವ​ಸ್ಥ​ಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆ​ದಿ​ದೆ.

ಗ್ರಾಮ​ದಲ್ಲಿ ಕುಡಿ​ಯುವ ನೀರಿನ ಸಮ​ಸ್ಯೆಯನ್ನು ಇತ್ಯ​ರ್ಥ​ಗೊ​ಳಿ​ಸುವ ಹಿನ್ನೆ​ಲೆ​ಯಲ್ಲಿ ಗ್ರಾಮದ ಕೆರೆ​ಯ​ ಮೇಲ್ಭಾ​ಗ​ದ​ಲ್ಲಿ​ನ ಬಾವಿಯ ನೀರನ್ನು ಪೂರೈ​ಸಲು ಬಳ​ಸ​ಲಾದ ಪೈಪ್‌​ಲೈನ್‌ ದುರಾ​ವಸ್ಥೆ ಈ ಘಟ​ನೆಗೆ ಕಾರಣ ಎಂದು ಹೇಳ​ಲಾ​ಗು​ತ್ತಿದೆ.
ಸ್ಥಳಕ್ಕೆ ಧಾವಿಸಿ ಪರಿ​ಶೀ​ಲ​ನೆ ನಡೆಸಿದ ಅಧಿ​ಕಾ​ರಿ​ಗಳು, ಈ ಮೂರ್ನಾಲ್ಕು ಮನೆ​ಗ​ಳಿ​ಗೆ ಮನೆಯ ಸಮೀ​ಪದ ಕೊಳ​ವೆ​ಬಾ​ವಿ​ಯಿಂದ ನೀರು ಪೂರೈ​ಕೆ​ಯಾಗಿದ್ದು, ಅದಕ್ಕೆ ಖಾಸ​ಗಿ​ಯಾ​ಗಿ ಪೈಪ್‌​ಲೈನ್‌ ಮಾಡಿ​ಸಿ​ಕೊ​ಳ್ಳ​ಲಾ​ಗಿದೆ. ಈ ಪೈಪ್‌​ಲೈನ್‌ ಚರಂಡಿ ಮೂಲಕ ಹಾದು​ಹೋ​ಗಿದ್ದು, ಇಲ್ಲಿ ನೀರು ಕಲು​ಷಿ​ತ​ಗೊಂಡ ಘಟನೆ ನಡೆ​ದಿ​ದೆ. ಅಸ್ವ​ಸ್ಥ​ಗೊಂಡ​ವ​ರನ್ನು ತಾಲೂಕು ಆಸ್ಪ​ತ್ರೆಗೆ ದಾಖ​ಲಿ​ಸ​ಲಾ​ಗಿ​ದ್ದು, ಚೇತ​ರಿ​ಸಿ​ಕೊ​ಳ್ಳು​ತ್ತಿ​ದ್ದಾ​ರೆ ಎಂದು ತಿಳಿಸಿದ್ದಾರೆ.

ಕೊಪ್ಪಳ: ಕಲುಷಿತ ನೀರಿಗೆ 4ನೇ ಬಲಿ, ಕನಕಗಿರಿಯಲ್ಲಿ 5 ವರ್ಷದ ಮಗು ಸಾವು

ಜಿಲ್ಲಾ ಪಂಚಾಯತ್‌ ಸಿಇಒ ಶಿಲ್ಪಾ ಎಂ. ಮಾತನಾಡಿ, ಪೈಪ್‌​ಲೈನ್‌ ದುರಾ​ವಸ್ಥೆಯಿಂದಾ​ಗಿ ಎಂಬು​ದು ಮೇಲ್ನೋ​ಟಕ್ಕೆ ಕಂಡು​ಬಂದಿ​ದೆ. ಆದರೂ ಎಲ್ಲ ರೀತಿಯ ನೀರು ತಪಾ​ಸ​ಣೆ​ಗ​ಳನ್ನು ನಡೆ​ಸಿ ತಪ್ಪು ಕಂಡು​ಬಂದಲ್ಲಿ ಸಂಬಂಧಿ​ತ​ರ ವಿರುದ್ಧ ಶಿಸ್ತು ಕ್ರಮ ಕೈಗೊ​ಳ್ಳಲಾ​ಗು​ವುದು ಎಂದರು.

Follow Us:
Download App:
  • android
  • ios