ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ 10ನೇ ದಿನವಾದ ಮಂಗಳವಾರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಪಕ್ಕದ ಕಂಬದ ತೊಲೆಯಲ್ಲಿ ಪ್ರಾಚೀನ ಶಾಸನ ಮತ್ತು ಲಿಂಗು ಆಕಾರದ ಸಣ್ಣ ಶಿಲೆ ಪತ್ತೆಯಾಗಿದೆ.
ಗದಗ : ಐತಿಹಾಸಿಕ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದ 10ನೇ ದಿನವಾದ ಮಂಗಳವಾರ ಗ್ರಾಮದ ಚಂದ್ರಮೌಳೇಶ್ವರ ದೇವಸ್ಥಾನದ ಪಕ್ಕದ ಕಂಬದ ತೊಲೆಯಲ್ಲಿ ಪ್ರಾಚೀನ ಶಾಸನ ಮತ್ತು ಲಿಂಗು ಆಕಾರದ ಸಣ್ಣ ಶಿಲೆ ಪತ್ತೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
35 ಕಾರ್ಮಿಕರು ಆತಂಕದಿಂದ ಕೆಲಸ
ಗಣರಾಜ್ಯೋತ್ಸವದ ಹಿನ್ನೆಲೆ 2 ದಿನ ರಜೆ ಬಳಿಕ ಮಂಗಳವಾರ ಕಾರ್ಯಾಚರಣೆ ಆರಂಭಿಸಿದಾಗ ಉತ್ಖನನಕ್ಕೆ ಗುರುತಿಸಿದ ಸ್ಥಳದಲ್ಲಿನ 4 ಬ್ಲಾಕ್ಗಳ ಪೈಕಿ ಎ-1 ಹಾಗೂ ಬಿ-1 ಗುಂಡಿಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಅದರಡಿಯಲ್ಲಿ 35 ಕಾರ್ಮಿಕರು ಆತಂಕದಿಂದ ಕೆಲಸ ಮಾಡುವಂತಾಗಿದೆ.
ಈವರೆಗೆ ಸುಮಾರು 7 ಅಡಿಗಳಷ್ಟು ಭೂಮಿ ಅಗೆದಿದೆ
ಈವರೆಗೆ ಸುಮಾರು 7 ಅಡಿಗಳಷ್ಟು ಭೂಮಿ ಅಗೆದಿದ್ದು, ವೀರಭದ್ರೇಶ್ವರ ದೇವಸ್ಥಾನ ಹಾಗೂ ಪುಷ್ಕರಣಿ (ಕಲ್ಯಾಣಿ) ನಡುವೆ ಸಂಪರ್ಕ ಕಲ್ಪಿಸುವ ಬುನಾದಿ ಪತ್ತೆಯಾಗಿದೆ. ಇದೇ ಜಾಗದಲ್ಲಿ ಇತ್ತೀಚಿನ ದಿನಗಳಲ್ಲಿ ನೀರು ಪೂರೈಸುವ ಪೈಪ್ಲೈನ್ ಗೋಚರಿಸಿದ್ದು, ಈ ಜಾಗವನ್ನು ಮೊದಲೇ ಅಗೆಯಲಾಗಿತ್ತು ಎನ್ನಲಾಗುತ್ತಿದೆ.


