Asianet Suvarna News Asianet Suvarna News

'ದೊಡ್ಡ ದೊಡ್ಡ ನಾಯಕರು ಕುಮಾರಸ್ವಾಮಿ ಮನೆ ಗೇಟ್ ಕಾಯ್ತಿದ್ರು'

ಆಗ ದೊಡ್ಡ ದೊಡ್ಡ ನಾಯಕರುಗಳೇ ಕುಮಾರಸ್ವಾಮಿ ಮನೆ ಗೇಟ್ ಕಾಯುತ್ತಿದ್ದರು ಎಂದು ಮುಖಂಡರೋರ್ವರು ಹೇಳಿದ್ದಾರೆ. ಅಲ್ಲದೇ ಜೆಡಿಎಸ್ ನಾಯಕರ ವಿರುದ್ಧ ಖಡಕ್ ಪ್ರಹಾರ ನಡೆಸಿದ್ದಾರೆ. 

MLC Puttanna Slams JDS Leader HD Kumaraswamy snr
Author
Bengaluru, First Published Dec 2, 2020, 12:48 PM IST

ರಾಮನಗರ (ಡಿ.02):  ಪಂಚಾಯ್ತಿ ಫೈಟ್‌ಗೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಮುಂದಾಗಿರುವ ಬಿಜೆಪಿ ಪಕ್ಷ ಈ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಗ್ರಾಮಸ್ವರಾಜ್‌ ಸಮಾವೇಶ ಜಿಲ್ಲೆಯಲ್ಲಿ ನಡೆಯಿತು.  

ಸಮಾವೇಶದಲ್ಲಿ ಮಾತನಾಡಿದ ಎಂಎಲ್ಸಿ ಸದಸ್ಯ ಸಿ.ಪಿ.ಯೋಗೇಶ್ವರ್‌,ಈ ಹಿಂದೆ ಜಿಲ್ಲೆಯ ಜನತೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಎಂಬ ವಾತಾವರಣ ನಿರ್ಮಾಣಗೊಂಡಿತ್ತು. ಆದರೆ, ಇದೀಗ ಜನತೆ ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ. ಜಿಲ್ಲೆಯಲ್ಲಿ ಬದಲಾವಣೆಯ ಪರ್ವ ಆರಂಭಗೊಂಡಿದ್ದು, ಬಿಜೆಪಿಯನ್ನು ಬೆಂಬಲಿಸಲು ಜನತೆ ಮುಂದಾಗಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಹೆಚ್ಚು ಗ್ರಾಪಂಗಳಲ್ಲಿ ಬಿಜೆಪಿ ಗೆಲ್ಲಲಿದ್ದು, ಹಾಗೆಯೇ ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಯಲ್ಲೂ ಪಕ್ಷ ಅ​ಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವನಾಥ್‌ಗೆ ಸಚಿವ ಸ್ಥಾನ ವಿಚಾರ : ಸಾ.ರಾ ಮಹೇಶ್ ಹೊಸ ಬಾಂಬ್ ...

ಅವಕಾಶ ಬಂದಾಗ ಒಂದಾಗುವ ಮೂಲಕ ಜೋಡೆತ್ತುಗಳು ಎಂದು ಬಿಂಬಿಸಿಕೊಳ್ಳುತ್ತಿದ್ದವರು, ಇದೀಗ ಕಿತ್ತಾಡುತ್ತಿದ್ದಾರೆ. ಜನತೆ ಇನ್ನಾದರೂ ಇವರ ಹುನ್ನಾರಗಳನ್ನು ಅರ್ಥ ಮಾಡಿಕೊಂಡು ಈ ಎರಡೂ ಪಕ್ಷಗಳಿಗೆ ಪರ್ಯಾಯ ಶಕ್ತಿಯಾಗಿ ಬಿಜೆಪಿಯನ್ನು ಅ​ಧಿಕಾರಕ್ಕೆ ತರಲು ಪ್ರಯತ್ನಿಸ ಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ದೊಡ್ಡ ನಾಯಕರು ಗೇಟು ಕಾಯುತ್ತಿದ್ದರು:

ಸಮಾವೇಶದಲ್ಲಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ ಪುಟ್ಟಣ್ಣ, ಕುಮಾರಸ್ವಾಮಿ ಅವರು ಅ​ಧಿಕಾರದಲ್ಲಿದ್ದಾಗ ತಾಲೂಕಿನ ದೊಡ್ಡದೊಡ್ಡ ನಾಯಕರು ಅವರ ಮನೆಯ ಗೇಟಿನ ಒಳಗೆ ಹೋಗಲಾಗದೆ ಗೇಟು ಕಾಯುತ್ತಾ ನಿಂತಿದ್ದರು. ಅ​ಧಿಕಾರ ಇದ್ದಾಗ ಏನೂ ಮಾಡದವರು, ಇದೀಗ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಬಂದಿದ್ದಾರೆ. ಇವರಿಗೆ ಜನತೆ ತಕ್ಕ ಪಾಠ ಕಲಿಸಬೇಕು ಎಂದು ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios