ಶಾಸಕರ ವಿರುದ್ಧ ಮಾತಾಡಿದ್ದಕ್ಕೆ ಬೆಂಬಲಿಗರಿಂದ ಹಲ್ಲೆ ; ವ್ಯಕ್ತಿ ಆತ್ಮಹತ್ಯೆ
ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ವಿರುದ್ಧ ಮಾತನಾಡಿದ್ದಕ್ಕೆ ಶಾಸಕರ ಬೆಂಬಲಿಗರು ಹಲ್ಲೆ ನಡೆಸಿದ್ದು, ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರಾದ ಮಧು, ದಿಲೀಪ, ರವಿ ಸೇರಿದಂತೆ 7 ಮಂದಿ ವಿರುದ್ಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
- ಶಾಸಕರ ವಿರುದ್ಧ ಮಾತಾಡಿದ್ದಕ್ಕೆ ಬೆಂಬಲಿಗರಿಂದ ಹಲ್ಲೆ
- ಹಲ್ಲೆಗೆ ಮನನೊಂದು ನಾಗೇಂದ್ರ ಎಂಬಾತನ ಆತ್ಮಹತ್ಯೆ
- ಶಾಸಕರ 7 ಮಂದಿ ಬೆಂಬಲಿಗರ ವಿರುದ್ಧ ಪ್ರಕರಣ