Asianet Suvarna News Asianet Suvarna News

ಸೀಡಿ ನನ್ನ ಬಳಿ ಇದ್ದಿದ್ರೆ ನಾನೇ ಡಿಸಿಎಂ ಆಗ್ತಿದ್ದೆ: ಯತ್ನಾಳ

ಮತ್ತೆ ಯಡಿಯೂರಪ್ಪ ಸಿ.ಡಿ. ವಿವಾದ ಕೆದಕಿದ ಬಸನಗೌಡ ಯತ್ನಾಳ, ವಿಶ್ವನಾಥ್‌| ಕಾಂಗ್ರೆಸ್‌ ನಿಜವಾದ ವಿಪಕ್ಷವಾದ್ರೆ ಆ ಸೀಡಿ ಬಿಡುಗಡೆ ಮಾಡಲಿ: ಯತ್ನಾಳ್‌| ಆ ಸಿ.ಡಿ.ಯಿಂದಾಗಿ ಸಿದ್ದು, ಡಿಕೆಶಿ, ಜಮೀರ್‌, ಹೆಬ್ಬಾಳ್ಕರ್‌ ಕ್ಷೇತ್ರಕ್ಕೆ ಹೆಚ್ಚು ಅನುದಾನ| ಕಾಂಗ್ರೆಸ್ಸಿಗರು ಸಿ.ಡಿ.ಬಿಡುಗಡೆ ಮಾಡಲಿ, ಸಿ.ಡಿ. ಕುರಿತು ಸಿಬಿಐ ತನಿಖೆ ಆಗಲಿ| 

MLA Basanagouda Patil Yatnal Talks Over CD Case grg
Author
Bengaluru, First Published Jan 15, 2021, 10:33 AM IST

ಬಾಗಲಕೋಟೆ/ರಾಯಚೂರು(ಜ.15):ಸಚಿವ ಸ್ಥಾನದಿಂದ ವಂಚಿತ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಮತ್ತೆ ಸಿ.ಡಿ.ವಿವಾದ ಕೆದಕಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಂಬಂ​ಧಿಸಿದ ಸಿ.ಡಿ. ಕಾಂಗ್ರೆಸ್‌ನವರ ಬಳಿ ಇದೆ. ಕಾಂಗ್ರೆಸ್‌ ನಿಜವಾಗಿಯೂ ವಿರೋಧ ಪಕ್ಷ ಆಗಿದ್ದರೆ ಆ ಸಿ.ಡಿ.ಬಿಡುಗಡೆ ಮಾಡಲಿ ಎಂದು ಯತ್ನಾಳ ಆಗ್ರಹಿಸಿದರೆ, ಆ ಸಿ.ಡಿ. ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ ಅಥವಾ ಇನ್ಯಾರೋ ಬಿಡುಗಡೆ ಮಾಡುತ್ತಾರೆ ಎಂದು ವಿಶ್ವನಾಥ್‌ ಹೇಳಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆ ಸಿ.ಡಿ.ಯನ್ನು ಮೂವರು ನನ್ನ ಬಳಿ ತೆಗೆದುಕೊಂಡು ಬಂದಿದ್ದರು. ಅದರಲ್ಲಿ ಇಬ್ಬರು ಈಗ ಸಚಿವರಾಗಿದ್ದಾರೆ. ನನ್ನ ಬಳಿ ಆ ಸಿಡಿ ಇದ್ದಿದ್ದರೆ ನಾನೇ ಉಪಮುಖ್ಯಮಂತ್ರಿ ಆಗಿರುತ್ತಿದ್ದೆ. ಆ ಸಿ.ಡಿ.ಯನ್ನು ಇಟ್ಟುಕೊಂಡೇ ಕಾಂಗ್ರೆಸ್ಸಿಗರು ಅನುದಾನ ತೆಗೆದುಕೊಳ್ಳುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬಳಿಯೂ ಆ ಸಿ.ಡಿ. ಇದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಕೆ.ಜೆ.ಜಾಜ್‌ರ್‍, ಶಾಸಕರಾದ ಜಮೀರ್‌ ಅಹಮ್ಮದ್‌, ಲಕ್ಷ್ಮೀ ಹೆಬ್ಬಾಳಕರ್‌ ಕ್ಷೇತ್ರಕ್ಕೆ ಹೆಚ್ಚು ಅನುದಾನ ಹೋಗೋದೇ ಆ ಸಿ.ಡಿ. ಬ್ಲ್ಯಾಕ್‌ಮೇಲ್‌ನಿಂದ. ಹೀಗಾಗಿ ಆ ಸಿ.ಡಿ. ಕುರಿತು ಸಿಬಿಐ ತನಿಖೆ ಆಗಲಿ ಎಂದು ಆಗ್ರಹಿಸಿದರು.

ಬಿಎಸ್‌ವೈ ವಿರುದ್ಧ CD ಬಾಂಬ್ ಸಿಡಿಸಿದ ಯತ್ನಾಳ್: ರಾಜಕಾರಣಲ್ಲಿ ಶುರುವಾಯ್ತು ಸಿಡಿ ಚರ್ಚೆ

ಶೀಘ್ರ ಬಿಡುಗಡೆ:

ಏತನ್ಮಧ್ಯೆ, ರಾಯಚೂರಲ್ಲಿ ಸುದ್ದಿಗಾರರ ಮುಂದೆ ಸಿ.ಡಿ.ವಿಚಾರ ಪ್ರಸ್ತಾಪಿಸಿದ ಎಚ್‌.ವಿಶ್ವನಾಥ್‌, ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ. ಶೀಘ್ರವೇ ಬಿಡುಗಡೆಯಾಗಲಿದೆ. ಅದನ್ನು ಯತ್ನಾಳ ಅಥವಾ ಯಾರೋ ಒಬ್ಬರು ಬಿಡುಗಡೆ ಮಾಡುತ್ತಾರೆ. ಸಿ.ಡಿ. ಯಾರದ್ದು, ಅದರಲ್ಲಿರುವ ವಿಷಯವೇನು ಎಂಬುವುದು ಸಿ.ಡಿ.ಸ್ಫೋಟಗೊಂಡ ಬಳಿಕವೇ ಬಯಲಾಗಲಿದೆ ಎಂದರು.
 

Follow Us:
Download App:
  • android
  • ios