ಮಠದ ಅಂಧ ಶಾಲೆಗೆ ವಸ್ತು ಕೊಡಿಸಲು ಹಣ ಕೊಡಿ| ‘ದಾಸೋಹಕ್ಕೆ ನಿಧಿ ಅರ್ಪಿಸಿ’ ಹೀಗೆ ವಿವಿಧ ವಿಚಾರ ಮುಂದಿಟ್ಟುಕೊಂಡು ಕೆಲವರಿಂದ ಹಣ​-ಧವಸ ಧಾನ್ಯ ವಸೂಲಿ| ಸಾವಿರಾರು ರು. ಕೂಡ ನೀಡಿ ಮೋಸ ಹೋದ ಅನೇಕರು| 

ತುಮ​ಕೂರು(ಮಾ.12): ಕಳೆದ ಅನೇಕ ದಿನಗಳಿಂದ ಸಿದ್ಧಗಂಗಾ ಮಠದ ಹೆಸರು ಬಳಸಿ ಅನೇಕರು ಹಣ ವಸೂಲಿ ಮಾಡು​ತ್ತಿದ್ದು, ಇಂಥ ವ್ಯಕ್ತಿ​ಗಳ ವಿರುದ್ಧ ಹತ್ತಿರದ ಪೊಲೀಸ್‌ ಠಾಣೆಗೆ ಅಥವಾ ಶ್ರೀಮ​ಠಕ್ಕೆ ಮಾಹಿತಿ ನೀಡು​ವಂತೆ ಆಡ​ಳಿ​ತಾ​ಧಿ​ಕಾರಿ ಎಸ್‌.ವಿಶ್ವ​ನಾ​ಥಯ್ಯ ತಿಳಿ​ಸಿ​ದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಾವು ಮಠದಿಂದ ಬಂದಿದ್ದು ನಿಮ್ಮ ಕಾಯಿಲೆಗಳಿಗೆ ಚಿಕಿತ್ಸೆ ಕೊಡುತ್ತೇವೆ, ಮಠದ ಅಂಧ ಶಾಲೆಗೆ ವಸ್ತುಗಳನ್ನು ಕೊಡಿಸಲು ಹಣ ಕೊಡಿ’ ‘ದಾಸೋಹಕ್ಕೆ ನಿಧಿ ಅರ್ಪಿಸಿ’ ಹೀಗೆ ವಿವಿಧ ವಿಚಾರ ಮುಂದಿಟ್ಟುಕೊಂಡು ಕೆಲವರು ಹಣ​-ಧವಸ ಧಾನ್ಯ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇದು ರಾಜ್ಯಾದ್ಯಂತ ನಡೆಯುತ್ತಿದ್ದು ಮಠ ಭಕ್ತರೇ ಈ ವಿಚಾರ ದೂರವಾಣಿ ಮೂಲಕ ನಮಗೆ ತಿಳಿಸಿದ್ದಾರೆ. ಅನೇಕರು ಸಾವಿರಾರು ರು. ಕೂಡ ನೀಡಿ ಮೋಸ ಹೋಗಿದ್ದಾರೆ.

ಲೈಂಗಿಕ ದೌರ್ಜ​ನ್ಯ​ಕ್ಕೊ​ಳ​ಗಾದ ಗರ್ಭಿ​ಣಿ ಬಾಲ​ಕಿ​ಯರಿಗೆ ಪ್ರತ್ಯೇಕ ವಸತಿ

ದಾನ ಸಂಗ್ರಹಕ್ಕೆ ಶ್ರೀಮಠದಿಂದ ಯಾವುದೇ ವ್ಯಕ್ತಿಗಳನ್ನು ನೇಮಿಸಿಲ್ಲ. ನಿಮ್ಮ ಧನ, ದವಸ, ಧಾನ್ಯ ಇನ್ನಿತರೆ ಯಾವುದೇ ದಾನಗಳಿದ್ದರೂ ಮಠದ ದೂರವಾಣಿ ಸಂಖ್ಯೆ 0816-2282211 ಗೆ ಕರೆಮಾಡಿ ಮಾಹಿತಿ ಪಡೆಯಿರಿ ಎಂದು ವಿಶ್ವ​ನಾ​ಥಯ್ಯ ಮನವಿ ಮಾಡಿದ್ದಾರೆ.