Asianet Suvarna News Asianet Suvarna News

ಬೆಂಗ್ಳೂರು-ಬೆಳಗಾವಿ ಹೊಸ ರೈಲಿಗೆ ಸಚಿವ ಅಂಗಡಿ ಗ್ರೀನ್ ಸಿಗ್ನಲ್

ಬೆಳಗಾವಿ- ಬೆಂಗಳೂರು ನಡುವೆ ಹೊಸ ರೈಲಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಗ್ರೀನ್ ಸಿಗ್ನಲ್ ನೀಡಿದರು. ಇನ್ನು ಈ ರೈಲಿನ ವೇಳಾಪಟ್ಟಿ ಈ ಕೆಳಗಿನಂತಿದೆ.

Minister  Suresh Angadi Flagging off of Special New Train between Belagavi To Bengaluru
Author
Bengaluru, First Published Jun 29, 2019, 9:06 PM IST

ಬೆಳಗಾವಿ[ಜೂ.29]: ಬೆಳಗಾವಿ- ಬೆಂಗಳೂರು ನಡುವೆ 06526 ಸಂಖ್ಯೆಯ ವಿಶೇಷ ಹೊಸ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ ಚಾಲನೆ ನೀಡಿದರು.

ಬೆಳಗಾವಿ ಬಾಲಕನ ಬದುಕಲ್ಲಿ ಹೊಸ ಆಶಾ ಕಿರಣ ತಂದ ಬಿಗ್ 3

ಇಂದು [ಶನಿವಾರ] ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಹೊಸ ರೈಲಿಗೆ ಸಚಿವ ಸುರೇಶ್‌ ಅಂಗಡಿ ಹಸಿರು ನಿಶಾನೆ‌ ತೋರಿಸಿದರು. ಒಟ್ಟು 14 ಕೋಚ್ ಗಳಿರುವ ಈ ರೈಲು ಪ್ರತಿ ನಿತ್ಯವೂ ಬೆಳಗಾವಿಯಿಂದ ಬೆಂಗಳೂರ ನಡುವೆ ಸಂಚರಿಸಲಿದೆ.

ರಾತ್ರಿ 9ಕ್ಕೆ ಬೆಳಗಾವಿ ಬಿಡುವ ಈ ರೈಲು ಬೆಳಗ್ಗೆ 7ಕ್ಕೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಅದೇ ರೀತಿ  ರಾತ್ರಿ 9ಗಂಟೆಗೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಬಿಡಲಿದ್ದು, ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪಲಿದೆ.  ಯಶವಂತಪುರ, ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡಗಳಲ್ಲಿ ಮಾತ್ರ ನಿಲುಗಡೆ ಇದೆ.

ಒಂದು ತಿಂಗಳ ಕಾಲ ತತ್ಕಾಲ್ ವಿಶೇಷ ಗಾಡಿಯಾಗಿ‌ ಓಡಾಟ‌ ನಡೆಸಲಿದೆ.  ನಂತರ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಖಾಯಂಗೊಳಿಸಲಾಗುತ್ತದೆ.

Follow Us:
Download App:
  • android
  • ios