ಬೆಂಗ್ಳೂರು-ಬೆಳಗಾವಿ ಹೊಸ ರೈಲಿಗೆ ಸಚಿವ ಅಂಗಡಿ ಗ್ರೀನ್ ಸಿಗ್ನಲ್
ಬೆಳಗಾವಿ- ಬೆಂಗಳೂರು ನಡುವೆ ಹೊಸ ರೈಲಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಗ್ರೀನ್ ಸಿಗ್ನಲ್ ನೀಡಿದರು. ಇನ್ನು ಈ ರೈಲಿನ ವೇಳಾಪಟ್ಟಿ ಈ ಕೆಳಗಿನಂತಿದೆ.
ಬೆಳಗಾವಿ[ಜೂ.29]: ಬೆಳಗಾವಿ- ಬೆಂಗಳೂರು ನಡುವೆ 06526 ಸಂಖ್ಯೆಯ ವಿಶೇಷ ಹೊಸ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು.
ಬೆಳಗಾವಿ ಬಾಲಕನ ಬದುಕಲ್ಲಿ ಹೊಸ ಆಶಾ ಕಿರಣ ತಂದ ಬಿಗ್ 3
ಇಂದು [ಶನಿವಾರ] ಬೆಳಗಾವಿಯ ರೈಲ್ವೆ ನಿಲ್ದಾಣದಲ್ಲಿ ಹೊಸ ರೈಲಿಗೆ ಸಚಿವ ಸುರೇಶ್ ಅಂಗಡಿ ಹಸಿರು ನಿಶಾನೆ ತೋರಿಸಿದರು. ಒಟ್ಟು 14 ಕೋಚ್ ಗಳಿರುವ ಈ ರೈಲು ಪ್ರತಿ ನಿತ್ಯವೂ ಬೆಳಗಾವಿಯಿಂದ ಬೆಂಗಳೂರ ನಡುವೆ ಸಂಚರಿಸಲಿದೆ.
Shri Suresh C Angadi, Hon’ble Minister of State for Railways Flagged off of Special New Train No.06526 between Belagavi and
— SouthWestern Railway (@SWRRLY) June 29, 2019
KSR Bengaluru at Belagavi Railway station today.#Karnataka #IndianRailways pic.twitter.com/HPFhyr461b
ರಾತ್ರಿ 9ಕ್ಕೆ ಬೆಳಗಾವಿ ಬಿಡುವ ಈ ರೈಲು ಬೆಳಗ್ಗೆ 7ಕ್ಕೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ತಲುಪಲಿದೆ. ಅದೇ ರೀತಿ ರಾತ್ರಿ 9ಗಂಟೆಗೆ ಬೆಂಗಳೂರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಬಿಡಲಿದ್ದು, ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪಲಿದೆ. ಯಶವಂತಪುರ, ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಧಾರವಾಡಗಳಲ್ಲಿ ಮಾತ್ರ ನಿಲುಗಡೆ ಇದೆ.
ಒಂದು ತಿಂಗಳ ಕಾಲ ತತ್ಕಾಲ್ ವಿಶೇಷ ಗಾಡಿಯಾಗಿ ಓಡಾಟ ನಡೆಸಲಿದೆ. ನಂತರ ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಖಾಯಂಗೊಳಿಸಲಾಗುತ್ತದೆ.